ಹೆತ್ತವರ ನಿರ್ಲಕ್ಷ್ಯಕ್ಕೆ ಕಾರಿನಲ್ಲಿ ಮಗು ಸಾವು
ಚೆನ್ನೈ
ಜೂ 1 : ಹೆತ್ತವರ ನಿರ್ಲಕ್ಷ್ಯದಿಂದ ಮೂರು ವರ್ಷದ ಕಂದಮ್ಮ ಕಾರಿನಲ್ಲಿ ಸಾವನ್ನಪ್ಪಿರುವ ಘಟನೆ ಇಲ್ಲಿನ ತಿರುವಿಕಾ ನಗರದಲ್ಲಿ ಸಂಭಿಸಿದೆ. ಮಟ ಮಟ ಮಧ್ಯಾಹ್ನ ಸಂಬಂಧಿಕರೊಬ್ಬರ ಅಂತ್ಯ ಸಂಸ್ಕಾರಕ್ಕೆ ಹೊರಟ ನಿಯಮದುಲ್ಲಾ ದಂಪತಿಗಳು ತಮ್ಮ ಮಗುವನ್ನು ಕಾರಿನಲ್ಲಿರಿಸಿ ಕಾರ್ ಲಾಕ್ ಮಾಡಿ ತೆರಳಿದ್ದಾರೆ. ಮತ್ತೆ ಬಂದು ನೋಡಿದಾಗ ಮಗು ಅಂತಿಮ ಕ್ಷಣಗಳನ್ನು ಎದುರಿಸುತ್ತಿತ್ತು, ಎಷ್ಟೇ ಪ್ರಯತ್ನಪಟ್ಟರು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. id="toptextpromo">ಪಲ್ಲಾವರಂನ
ನಿಯಮದುಲ್ಲಾ ತನ್ನ ಪತ್ನಿ ಮುಮ್ತಾಝ್ ಹಾಗೂ ಮಗು ಅಸ್ಮಾದುಲಾನೊಂದಿಗೆ ಕಾರಿನಲ್ಲಿ ಚೆನ್ನೈ ಉತ್ತರ ಭಾಗದಲ್ಲಿರುವ ತಿರುವಿಕಾ ನಗರಕ್ಕೆ ತೆರಳಿದ್ದರು. ಸಂಬಂಧಿಕರೊಬ್ಬರ ಅಂತಿಮ ಸಂಸ್ಕಾರ ಕಾರ್ಯಕ್ಕೆ ಹೋದ ದಂಪತಿಗಳಿಗೆ ಮುಂದೆ ಸಂಭವಿಸಬಹುದಾದ ದುರಂತದ ಚಿಕ್ಕ ಸುಳಿವು ಇರಲಿಲ್ಲ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಹಿಂಬದಿ ಸೀಟಿನಲ್ಲಿ ಮಲಗಿದ್ದ ಮಗುವನ್ನು ಮರೆತು ಕಾರು ಲಾಕ್ ಮಾಡಿ ಹೊರಟಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಈ
ಮಹಾನ್ ಪೋಷಕರಿಗೆ ಮತ್ತೆ ಮಗು ನೆನಪು ಬಂದಾಗ ಸಮಯ 4 ಗಂಟೆ ಮೀರಿತ್ತು. ಅಷ್ಟರಲ್ಲಿ ಬಿಸಿಲಿನ ತಾಪಕ್ಕೆ ಕಾರಿನಲ್ಲಿ ಬೆಂದು ಅರೆಜೀವವಾಗಿದ್ದ ಕೂಸಿಗೆ ಉಸಿರಾಟದ ತೊಂದರೆ ಉಂಟಾಗಿ ಒದ್ದಾಡುತ್ತಿತ್ತು. ಮಗುವನ್ನು ಕೂಡಲೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತಾದರೂ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಸ್ಟ್ಯಾನ್ಲಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಲ್ಲಿಯೂ ಚಿಕಿತ್ಸೆಗೆ ಸ್ಪಂದಿಸದ ಕಾರಣ ಮಗು ಮೃತಪಟ್ಟಿದೆ. ಪುಲಿಯನ್ ಥೋಪ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ.











Click it and Unblock the Notifications