ಹಂಸರಾಜ್ ಅಲ್ಲ ಕಂಸರಾಜ್; ಜನಾರ್ದನ ರೆಡ್ಡಿ

ಹಂಸರಾಜ್ ಅವರು ಕರ್ನಾಟಕಕ್ಕೆ ಅಡಿಯಿಟ್ಟಾಗಿನಿಂದಲೂ ರಾಜ್ಯದಲ್ಲಿ ಇದೇ ಪರಿಸ್ಥಿತಿ ಎದುರಾಗುತ್ತಿದೆ. ಅವರನ್ನು ಮನೆಗೆ ಕಳುಹಿಸುವ ಸಮಯ ಸಮೀಪಿಸಿದೆ ಎಂದರು. ಏತನ್ಮಧ್ಯೆ 11 ಅರ್ಹ ಶಾಸಕರು ಖಾಸಗಿ ಹೋಟೆಲ್ನಲ್ಲಿ ಸಚಿವ ರೇಣುಕಾಚಾರ್ಯ ಅವರ ಉಪಸ್ಥಿತಿಯಲ್ಲಿ ಸಭೆ ನಡೆಸಿದರು.
ಬಳಿಕ ಅವರೆಲ್ಲಾ ಬಿಜೆಪಿ ಶಾಸಕಾಂಗ ಸಭೆಗೆ ಹೊರಟರು. ಮುಂದಿನ ನಡೆಯ ಬಗ್ಗೆ ಚರ್ಚೆ ನಡೆಸಲಿದ್ದೇವೆ ಎಂದು ಬೇಳೂರು ಗೋಪಾಲಕೃಷ್ಣ ತಿಳಿಸಿದರು. ಇದೀಗ ಬಂದ ಸುದ್ದಿ, ಕ್ಯಾಪಿಟಲ್ ಹೋಟೆಲ್ನಲ್ಲಿ ಶಾಸಕಾಂಗ ಸಭೆ ಆರಂಭವಾಗುತ್ತಿದ್ದು ಮುಖ್ಯಮಂತ್ರಿಗಳು ಸಭೆಗೆ ಆಗಮಿಸಿದ್ದಾರೆ. (ದಟ್ಸ್ ಕನ್ನಡ ವಾರ್ತೆ)












Click it and Unblock the Notifications