ಹಂಸರಾಜ್ ಅಲ್ಲ ಕಂಸರಾಜ್; ಜನಾರ್ದನ ರೆಡ್ಡಿ
ಬಳ್ಳಾರಿ,
ಮೇ.16: ರಾಜ್ಯ ಬಿಜೆಪಿಯಲ್ಲಿ ಮತ್ತೊಮ್ಮೆ ಎದುರಾಗಿರುವ ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಿಯಿಸಿದ ಪ್ರವಾಸೋದ್ಯಮ ಸಚಿವ ಜಿ ಜನಾರ್ದನ ರೆಡ್ಡಿ ಅವರು ರಾಜ್ಯಪಾಲ ಹಂಸರಾಜ್ ಅವರ ಕ್ರಮವನ್ನು ಖಂಡಿಸಿದರು. ಅವರು ಹಂಸರಾಜ್ ಅಲ್ಲ ಕಂಸರಾಜ್ ಎಂದು ವ್ಯಂಗ್ಯವಾಡಿದರು. id="toptextpromo">ಹಂಸರಾಜ್
ಅವರು ಕರ್ನಾಟಕಕ್ಕೆ ಅಡಿಯಿಟ್ಟಾಗಿನಿಂದಲೂ ರಾಜ್ಯದಲ್ಲಿ ಇದೇ ಪರಿಸ್ಥಿತಿ ಎದುರಾಗುತ್ತಿದೆ. ಅವರನ್ನು ಮನೆಗೆ ಕಳುಹಿಸುವ ಸಮಯ ಸಮೀಪಿಸಿದೆ ಎಂದರು. ಏತನ್ಮಧ್ಯೆ 11 ಅರ್ಹ ಶಾಸಕರು ಖಾಸಗಿ ಹೋಟೆಲ್ನಲ್ಲಿ ಸಚಿವ ರೇಣುಕಾಚಾರ್ಯ ಅವರ ಉಪಸ್ಥಿತಿಯಲ್ಲಿ ಸಭೆ ನಡೆಸಿದರು. id='are-slot-1' class='oiad oi-axt oiadv'> id='top-searched-articles'>ಬಳಿಕ
ಅವರೆಲ್ಲಾ ಬಿಜೆಪಿ ಶಾಸಕಾಂಗ ಸಭೆಗೆ ಹೊರಟರು. ಮುಂದಿನ ನಡೆಯ ಬಗ್ಗೆ ಚರ್ಚೆ ನಡೆಸಲಿದ್ದೇವೆ ಎಂದು ಬೇಳೂರು ಗೋಪಾಲಕೃಷ್ಣ ತಿಳಿಸಿದರು. ಇದೀಗ ಬಂದ ಸುದ್ದಿ, ಕ್ಯಾಪಿಟಲ್ ಹೋಟೆಲ್ನಲ್ಲಿ ಶಾಸಕಾಂಗ ಸಭೆ ಆರಂಭವಾಗುತ್ತಿದ್ದು ಮುಖ್ಯಮಂತ್ರಿಗಳು ಸಭೆಗೆ ಆಗಮಿಸಿದ್ದಾರೆ. (ದಟ್ಸ್ ಕನ್ನಡ ವಾರ್ತೆ)











Click it and Unblock the Notifications