ಮುಂದಿನ ಬಾರಿ ಪಾಸಾಗ್ತಿನಿ ಅನ್ನಿ, ಆತ್ಮಹತ್ಯೆ ಬೇಡ

ಕರ್ನಾಟಕ ಎಸ್ಎಸ್ಎಲ್ ಸಿ ಫಲಿತಾಂಶ 2011 ಪ್ರಕಟ
ಪೋಷಕರಿಗೆ ಸಲಹೆ
* ಫಲಿತಾಂಶ ಏನೇ ಇರಲಿ ನನಗೆ ನೀನು ಮುಖ್ಯ ಅನ್ನೋ ರೀತಿಯಲ್ಲಿ ವರ್ತಿಸಿ.
* ಮುಂದಿನ ಶಿಕ್ಷಣದ ಕುರಿತು ಫಲಿತಾಂಶ ಬರೋ ದಿನ ಚರ್ಚೆ ಬೇಡ.
* ಮನೆಯಲ್ಲಿ ಅವರನ್ನು ಒಂಟಿಯಾಗಿ ಬಿಟ್ಟು ಹೋಗದಿರಿ.
* ಮಕ್ಕಳಿಗೆ ಧೈರ್ಯ ತುಂಬಿರಿ.
* ಫಲಿತಾಂಶದ ಕುರಿತು ನೀವು ಹೆಚ್ಚು ಟೆನ್ಶನ್ ತೋರಗೊಡದಿರಿ. ಇದರಿಂದ ಮಕ್ಕಳು ಇನ್ನಷ್ಟು ಅಧೀರರಾಗುತ್ತಾರೆ.
ವಿದ್ಯಾರ್ಥಿಗಳಿಗೆ ಸಲಹೆ
* ಫಲಿತಾಂಶ ಚೆನ್ನಾಗಿ ಬಂದಿದ್ದರೆ ಸಂಭ್ರಮಿಸಿ. ಚೆನ್ನಾಗಿ ಬಂದಿಲ್ಲ ಅಂದರೆ ಮುಂದಿನ ಬಾರಿ ಚೆನ್ನಾಗಿ ಮಾಡಬಲ್ಲೆ ಅಂತ ಆತ್ಮವಿಶ್ವಾಸದಿಂದಿರಿ.
* ಫೇಲ್ ಆಗಿರೋ ನಿಮ್ಮ ಸ್ನೇಹಿತ ಸ್ನೇಹಿತೆಯರನ್ನು ಅವಹೇಳನ ಮಾಡಬೇಡಿ. ಅವರಿಗೆ ಧೈರ್ಯ ತುಂಬಿ. ಸಾಧ್ಯವಾದರೆ ಅವರನ್ನು ಒಂಟಿಯಾಗಲು ಬಿಡಬೇಡಿ.
* ಒಮ್ಮೆ ಯೋಚಿಸಿ ಇಷ್ಟು ವರ್ಷ ನಿಮ್ಮನ್ನು ಕಣ್ಣಲ್ಲಿ ಕಣ್ಣಿಟ್ಟು ಸಾಕಿದ ಅಪ್ಪ ಅಮ್ಮನಿಗೆ ನಿಮ್ಮ ಸಾವಿನಿಂದ ಎಷ್ಟು ದುಃಖವಾಗಬಹುದು ಅಂತ. ಅವರಿಗಾಗಿ ಬದುಕಿಬಿಡಿ.
* ಫೇಲ್ ಆಗಿರೋ ವಿಷಯಕ್ಕೆ ಅಪ್ಪ ಅಮ್ಮನಿಗೆ ಹೆದರಬೇಡಿ. ಮುಂದಿನ ಬಾರಿ ಪಾಸಾಗ್ತಿನಿ ಅನ್ನಿ.
* ಪಾಸಾಗಿರುವವರು ಸಾಧಿಸಿದಕ್ಕಿಂತ ಹೆಚ್ಚು ಸಾಧಿಸ್ತಿನಿ ಅಂತ ನಿರ್ಧಾರ ಮಾಡಿಬಿಡಿ.
* ಬದುಕಿದರೆ ಏನೂ ಬೇಕಾದರೂ ಸಾಧಿಸಬಹುದು ಅಲ್ಲವೇ. ಎಡವಿ ಬಿದ್ದರೇನಂತೆ ಎದ್ದುಬಿಡಿ.
ಛಲ, ಆತ್ಮವಿಶ್ವಾಸವಿದ್ದರೆ ಬದುಕಿನಲ್ಲಿ ಏನೂ ಬೇಕಾದರೂ ಸಾಧಿಸಬಹುದು. ಫೇಲ್ ಆದರೆ ಏನಂತೆ? ಬದುಕಿನಲ್ಲಿ ಪಾಸ್ ಆದರೆ ಸಾಕಲ್ವ. ಈ ಬಾರಿ ಪರೀಕ್ಷೆ ಫಲಿತಾಂಶ ನೋಡಿ ಬಂದ ಯಾವ ಮನೆಯಲ್ಲೂ ಸಾವಿನ ಸೂತಕವಿಲ್ಲದಿರಲಿ. ಆಲ್ ದಿ ಬೆಸ್ಟ್.












Click it and Unblock the Notifications