ಸಂಘದಿಂದ ವ್ಯಕ್ತಿ ಶಕ್ತಿಯಾಗಿ ಪರಿವರ್ತಿಸುವ ಕೆಲಸ

ಹೀಗೆ ವ್ಯಕ್ತಿಯನ್ನು ಶಕ್ತಿಯಾಗಿ ಪರಿವರ್ತಿಸುವ ಕೆಲಸ ಸಂಘ ಮಾಡುತ್ತಿದೆ. ಸಂಘದ ಈ ಕೆಲಸ ಹೊರಗಿನವರಿಗೆ ಸರಿಯಾಗಿ ತಿಳಿಯುತ್ತಿಲ್ಲ. ವ್ಯಕ್ತಿ ನಿರ್ಮಾಣದ ಕೆಲಸ ಈ ದೇಶದಲ್ಲಿ ಮಾತ್ರ ಈ ಪ್ರಮಾಣದಲ್ಲಿ ನಡೆಯುತ್ತಿದೆ. ಕುಟುಂಬ, ಸಮಾಜ, ದೇಶ ಪ್ರೇಮದ ಶಿಕ್ಷಣ ಪಡೆದ ಸ್ವಯಂಸೇವಕರು ಎಲ್ಲೆಡೆ ಸ್ಥಾನ ಪಡೆದರೆ ಎಲ್ಲ ಭೇದ ಭಾವಗಳು, ಅಪಾಯಗಳು ದೂರಾಗುವುದು ಖಂಡಿತ ಎಂದು ಭರವಸೆಯಿಂದ ನುಡಿದರು. ಅವರು ಬೆಂಗಳೂರು ಸಮೀಪದ ಚನ್ನೇನಹಳ್ಳಿಯ ಜನಸೇವಾ ವಿದ್ಯಾ ಕೇಂದ್ರದಲ್ಲಿ ನಡೆದ ಆರೆಸ್ಸೆಸ್ ತರಬೇತಿ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಿದ್ದರು.
ಕರ್ನಾಟಕ ದಕ್ಷಿಣದ 378 ಸ್ಥಾನದಿಂದ 645 ಯುವಕರು, ಸಮಗ್ರ ಕರ್ನಾಟಕದ ಆಯ್ದ 32 ಸ್ಥಾನಗಳಿಂದ ಬಂದ 33 ಗಣ್ಯರು 20 ದಿನಗಳ ಪ್ರಥಮ ವರ್ಷದ ಶಿಕ್ಷಣ ಪಡೆದರು. ಇದೇ ಸಂದರ್ಭದಲ್ಲಿ ಕರ್ನಾಟಕ ದಕ್ಷಿಣದ 142 ಸ್ಥಾನಗಳಿಂದ ಬಂದ 180 ಕಾಲೇಜು ವಿದ್ಯಾರ್ಥಿಗಳು, ಅದರಲ್ಲಿ 33 ಅಧ್ಯಾಪಕರು ಇಲ್ಲಿ ಒಂದು ವಾರದ ಶಿಕ್ಷಣ ಪಡೆದಿದ್ದಾರೆ.
ಈ ತರಬೇತಿ ಶಿಬಿರಕ್ಕೆ ಶತಾವಧಾನಿ ಡಾ. ರಾ.ಗಣೇಶ್, ಸಮಾಜ ಮುಖಿ ಚಿಂತನೆಯ ಸಂತ ಪೇಜಾವರ ಶ್ರೀಗಳು ಮುಂತಾದ ಗಣ್ಯರು ಭೇಟಿ ನೀಡಿದ್ದಾರೆ. ಮೇ 1ರ ಭಾನುವಾರ ಬೆಂಗಳೂರಿನ 175 ಕುಟುಂಬಗಳ ತಾಯಂದಿರು ತಾವೇ ಅಡುಗೆ ಮಾಡಿ ತಂದು ತಾಯ್ತನದ ಪ್ರೀತಿಯನ್ನು ಶಿಬಿರಾರ್ಥಿಗಳಿಗೆ ಉಣಬಡಿಸಿದ್ದಾರೆ. ಸಹಜೀವನ ಸಾಮರಸ್ಯ ಮುಂತಾದ ಸದ್ಗುಣಗಳ ಶಿಕ್ಷಣವನ್ನು ನೀಡುವ ಈ ಶಿಬಿರ ಚೇತೋಹಾರಿಯಾಗಿತ್ತು. ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ವಕೀಲರು, ವೈದ್ಯರು ಮುಂತಾದ ಸಮಾಜದ ಎಲ್ಲ ಕ್ಷೇತ್ರಗಳ ಶಿಬಿರಾರ್ಥಿಗಳು ಇಲ್ಲಿದ್ದುದು ವಿಶೇಷ.
ಸಮಾರೋಪ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಸಹಸಂಪರ್ಕ ಪ್ರಮುಖರಾದ ಶ್ರೀಪಟ್ಟಾಭಿರಾಮ್, ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣದ ಕಾರ್ಯವನ್ನು ಸಂಘ ಕೈಗೆತ್ತಿಕೊಂಡಿದೆ. ಇಲ್ಲಿ ವ್ಯಕ್ತಿ ಸುಖದ ಕಲ್ಪನೆಯಿಲ್ಲ. ಬದಲಾಗಿ ರಾಷ್ಟ್ರ ಸುಖ – ವೈಭವದ ಸಾಧನೆಯೇ ಗುರಿ. ಅದಕ್ಕಾಗಿ ವ್ಯಕ್ತಿ ವ್ಯಕ್ತಿಗಳನ್ನು ಜೋಡಿಸಿ, ಸಂಸ್ಕಾರ ನೀಡಿ ಅವರ ಮೂಲಕ ಗುರಿಸಾಧನೆಯ ಕನಸನ್ನು ಸಂಘ ಕಂಡಿದೆ. ಅದಕ್ಕಾಗಿ ಶಿಕ್ಷಣ, ಸಂಸ್ಕಾರ, ತರಬೇತಿ ನೀಡುತ್ತಿದೆ ಎಂದರು. ಶಿಬಿರಾರ್ಥಿಗಳಿಂದ ಆಕರ್ಷಕ ಶಾರೀರಿಕ ಪ್ರದರ್ಶನ, 'ಭೋಗ ಮೆಟ್ಟಿ ತ್ಯಾಗ ಮೆರೆದ ಜನ್ಮ ಭೂಮಿ ಭಾರತ' ಈ ಗೀತೆ ನೆರೆದವರ ಮನ ಸೂರೆಗೊಂಡಿತು.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications