ಅರುಣಾಚಲ ಮುಖ್ಯಮಂತ್ರಿ ಸೇರಿ ಐವರ ಶವ ಪತ್ತೆ

ಅರುಣಾಚಲದ ತವಾಂಗ್ ಬಳಿ ಜಂಗ್ ನೀರಿನ ಝರಿ ಬಳಿಯಿರುವ ಲೊಬೊತಾಂಗ್ ಎಂಬಲ್ಲಿ ಹೆಲಿಕಾಪ್ಟರ್ ಅವಶೇಷ ಪತ್ತೆಯಾಗಿದ್ದು, ದೇಹಗಳನ್ನು ಭಾರತೀಯ ಸೇನೆ ವಶಕ್ಕೆ ತೆಗೆದುಕೊಂಡಿದೆ.
ಅರುಣಾಚಲ ಪ್ರದೇಶ ಮುಖ್ಯಮಂತ್ರಿ ದೋರ್ಜಿ ಅವರು ಹೆಲಿಕಾಪ್ಟರ್ ದುರಂತದಲ್ಲಿ ಮೃತರಾಗಿರುವುದು ಖಚಿತ. ದೋರ್ಜಿ ಅವರ ನೆಂಟರೂ ಹಾಗೂ ಅರುಣಾಚಲ ಪ್ರದೇಶ ಪಂಚಾಯಿತಿ ಮುಖಂಡರೂ ಆಗಿರುವ ಥುಪ್ಟೆನ್ ಎಂಬುವವರು ಡೋರ್ಜಿ ಅವರ ಕಳೇಬರವನ್ನು ಗುರುತಿಸಿ ಸಾವು ಖಚಿತಪಡಿಸಿದರೆಂದು ಕೇಂದ್ರ ಸಚಿವ ಬಿ ಕೆ. ಹಂಡಿಕ್ ಬುಧವಾರ ಮಧ್ಯಾಹ್ನ ತಿಳಿಸಿದರು.
ದೋರ್ಜಿ ಜತೆಗೆ ನಾಪತ್ತೆ ಆಗಿದ್ದ ಇನ್ನಿತರ ಆರು ಪ್ರಯಾಣಿಕರ ಪೈಕಿ ನಾಲಕ್ಕು ಶವಗಳು ದೊರೆತಿವೆ. ಅವು ಸುಟ್ಟು ಕರಕಲಾಗಿರುವುದರಿಂದ ಗುರುತು ಪತ್ತೆ ಹಚ್ಚುವುದು ಕಷ್ಟವಾಗಿದೆ. ಕಾಪ್ಟರ್ ನಲ್ಲಿದ್ದ ಇನ್ನಿಬ್ಬರ ಬಗ್ಗೆ ಇದುವರೆವಿಗೆ ಯಾವುದೇ ಸುಳಿವು ಲಭ್ಯವಾಗಿಲ್ಲ. ಈ ಮಧ್ಯೆ ಪವನ್ ಹಂಸ್ ಹೆಲಿಕಾಪ್ಟರುಗಳ ಬಳಕೆಯನ್ನು ನಾಗರಿಕ ವಿಮಾನಯಾನ ಇಲಾಖೆ ನಿಷೇಧಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಕಾಪ್ಟರ್ ನಲ್ಲಿದ್ದವರು ಮುಖ್ಯಮಂತ್ರಿ ದೋರ್ಜಿ ಖಂಡು, ಅವರ ಸಹೋದರಿ ಹಾಗೂ ತವಾಂಗ್ ಶಾಸಕಿ ತ್ಸವೋಂಗ್ ಧೋಂಪಡ್, ಕ್ಯಾಪ್ಟನ್ ಜೆ ಎಸ್ ಬಬ್ಬರ್, ಕ್ಯಾಪ್ಟನ್ ಕೆ ಎಸ್ ಮಾಲಿಖ್, ಖಂಡು ಅವರ ಭದ್ರತಾಕಾರಿ ಯಶಿ ಛೋಂಡಕ್ ಮತ್ತು ಯೇಶಿ ಲಮು.
ಶನಿವಾರ ಬೆಳಗ್ಗೆ 9.56ಕ್ಕೆ ತವಾಂಗ್ ಬಿಟ್ಟ ಖಂಡು ಪ್ರಯಾಣಿಸುತ್ತಿದ್ದ ಪವನ್ ಹನ್ಸ್ ಹೆಲಿಕಾಪ್ಟರ್ 11.30ಕ್ಕೆ ಇಟಾನಗರದಲ್ಲಿ ಲ್ಯಾಂಡ್ ಆಗಬೇಕಾಗಿತ್ತು. ಆದರೆ ತವಾಂಗ್ ಬಿಟ್ಟ 20 ನಿಮಿಷಗಳಲ್ಲಿ ಹೆಲಿಕಾಪ್ಟರ್ ಸಂಪರ್ಕ ಕಳೆದುಕೊಂಡಿತ್ತು. ಹವಾಮಾನ ವೈಪರೀತ್ಯದಿಂದ ಶೋಧ ಕಾರ್ಯಕ್ಕೆ ತೀವ್ರ ಅಡಚಣೆಯಾಗಿತ್ತು. ಇಸ್ರೋ ನೆರವನ್ನು ಪಡೆದ ನಂತರ ಹೆಲಿಕಾಪ್ಟರ್ ಬಿದ್ದಿರಬಹುದಾದ ಮೂರು ಸ್ಥಳಗಳನ್ನು ಗುರುತಿಸಲಾಗಿತ್ತು. 30 ಸೇನಾ ತುಕಡಿಗಳಿಂದ ಶೋಧ ಕಾರ್ಯಾಚರಣೆ ನಡೆದಿತ್ತು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications