ಅಮ್ಮನ ಆಶೀರ್ವಾದ: ಮಂಗಳೂರು ಸ್ವಚ್ಛ ಸುಂದರ

ಇಂದು ನಗರದ ಬೀದಿಬೀದಿಗಳನ್ನು ಅಮ್ಮನ ಭಕ್ತರು ಶ್ರದ್ಧೆಯಿಂದ ಸ್ವಚ್ಛಗೊಳಿಸುತ್ತಿರುವುದು ಕಂಡು ಬಂತು. ಈ ಅಭಿಯಾನಕ್ಕೆ ನಗರಾಡಳಿತವೂ ಸಂಪೂರ್ಣ ಬೆಂಬಲ ನೀಡಿತ್ತು. ನಗರದ ಮೇಯರ್ ಪ್ರವೀಣ್, ಆರೋಗ್ಯಾಧಿಕಾರಿಗಳಾದ ಮಂಜಯ್ಯ ಶೆಟ್ಟಿ, ಬಸವರಾಜು ಮತ್ತು ಕಾರ್ಪೊರೆಟರ್ ನವೀನ್ ಮತ್ತು ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು ಸೇರಿದಂತೆ ಹಲವು ಮಂದಿ ಈ ಅಭಿಯಾನದಲ್ಲಿ ಪಾಲ್ಗೊಂಡರು.
ಮಂಗಳೂರು ಬ್ರಹ್ಮಸ್ಥಾನ ಉತ್ಸವಕ್ಕಾಗಿ ಮಾತಾ ಅಮೃತಾನಂದಮಯಿ ಮೇ ಒಂದು ಮತ್ತು ಎರಡರಂದು ನಗರಕ್ಕೆ ಭೇಟಿ ನೀಡಿದ್ದರು."ಮುಂದಿನ ತಲೆಮಾರಿಗೆ ಪರಿಸರವನ್ನು ಸುಂದರವಾಗಿ ಕಾಪಾಡಿಕೊಳ್ಳಬೇಕು" ಎಂದು ಈ ಸಂದರ್ಭದಲ್ಲಿ ಅವರು ಕರೆ ನೀಡಿದ್ದರು. ಮಾತಾ ಅಮೃತಾನಂದಮಯಿ ದೇಶದ ವಿವಿಧ ಭಾಗಗಳಲ್ಲಿ "ಅಮಲಾ ಭಾರತಂ" ಎಂಬ ಯೋಜನೆಯನ್ನು ಸಾಕಾರಗೊಳಿಸುತ್ತಿದ್ದಾರೆ.












Click it and Unblock the Notifications