ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮೈಸೂರಿನ ಭ್ರಷ್ಟಾಚಾರ ವಿರೋಧಿಗಳೇ ಎದ್ದೇಳಿ
ಈ ವಿಷಯವನ್ನು ಮೈಸೂರಿನ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ನ ಡಾ.ಬಾಲಸುಬ್ರಹ್ಮಣ್ಯಂ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅಂದು ನಡೆಯಲಿರುವ ಕಾರ್ಯಕ್ರಮವನ್ನು ಕೂಡ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಹಾಗೂ ವಿವೇಕಾನಂದ ನಾಯಕತ್ವ ಅಭಿವೃದ್ಧಿ ಸಂಸ್ಥೆಗಳು ಆಯೋಜಿಸಲಿವೆ.
ಜನ ಲೋಕಪಾಲ ಮಸೂದೆ ಜಾರಿಗೆ ಉಪವಾಸ ಸತ್ಯಾಗ್ರಹ ಕೈಗೊಂಡ ಬಳಿಕ ಇದೇ ಮೊದಲ ಬಾರಿಗೆ ಅವರು ಮೈಸೂರಿನಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುತ್ತಿರುವುದಾಗಿ ಸಂಘಟಕರು ತಿಳಿಸಿದ್ದಾರೆ. ಮೈಸೂರಿನ ಕಾರ್ಯಕ್ರಮ ಮುಗಿಸಿಕೊಂಡು ಅವರು ಅಂದು ಸಂಜೆ ಎಚ್.ಡಿ.ಕೋಟೆಗೆ ತೆರಳಿ ಅಲ್ಲಿ ಸಂಜೆ 5 ರಿಂದ 7ರವರೆಗೆ ಮಾತನಾಡಲಿದ್ದಾರೆ. ಬಳಿಕ ವಿವೇಕಾನಂದ ಗಿರಿಜನ ಶಿಕ್ಷಣ ಸಂಸ್ಥೆಗೆ ಭೇಟಿ ನೀಡುವ ಅವರು ನಂತರ ಹೊಸಹಳ್ಳಿಯಲ್ಲಿರುವ ಗಿರಿಜನರ ಹಾಡಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮಾರನೆಯ ದಿನ ಎಚ್.ಡಿ.ಕೋಟೆಯಿಂದ ನೇರವಾಗಿ ಬೆಂಗಳೂರಿಗೆ ತೆರಳಲಿದ್ದಾರೆ.
Comments
English summary
Anti-corruption crusader Gandhian Anna Hazare is coming to Mysore on May 5 to address public. He will be delivering another speach in HD Kote. Next day on May 6 Anna Hazare is coming to Bangalore to gather support for Jan Lokpal Bill.
Story first published: Thursday, April 28, 2011, 14:55 [IST]