ಅಣ್ಣಾ ಹಜಾರೆ ಹೋರಾಟಕ್ಕೆ ಸರಕಾರ ಮಣಿಯುವುದೇ !?

Jail Bharo Andolan
ನವದೆಹಲಿ, ಏ.8: ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಅವರು ನಡೆಸುತ್ತಿರುವ ಆಜೀವ ಉಪವಾಸ ಹೋರಾಟ ಫಲ ನೀಡುವುದೇ ಎಂಬ ಪ್ರಶ್ನೆಗೆ ದೇಶದ ಶೇ. 95ರಷ್ಟು ಜನ 'ಫಲ ನೀಡಲೇಬೇಕು' ಎಂದು ಘರ್ಜಿಸಿದ್ದಾರೆ. ಇದರಿಂದ ಕಂಗೆಟ್ಟಿರುವ ಕೇಂದ್ರ ಸರಕಾರ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಇದೀಗ ಉನ್ನತಮಟ್ಟದ ತುರ್ತು ಸಭೆ ನಡೆಸುತ್ತಿದೆ. ಹಜಾರೆ ಅವರ ಆಮರಣ ಉಪವಾಸ ಶುಕ್ರವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಸಾಂಕ್ರಾಮಿಕವಾಗಿ ದೇಶಾದ್ಯಂತ ಹಜಾರೋ ಅಣ್ಣಾಗಳು ಅಭೂತ ಪೂರ್ವ ನಿರಶನದಲ್ಲಿ ತೊಡಗಿದ್ದಾರೆ.

ಈ ಮಧ್ಯೆ, ಜನ ಲೋಕಪಾಲ್ ಮಸೂದೆ ಅಳವಡಿಕೆಗೆ ಸಹಮತ ವ್ಯಕ್ತಪಡಿಸಲು ಸರಕಾರ ಹಿಂಜರಿಯುತ್ತಿರುವುದರಿಂದ ಉಪವಾಸ ಹೋರಾಟದ ನಡುವೆಯೇ ಏಪ್ರಿಲ್ 12ರಿಂದ 'ಜೈಲ್ ಭರೋ ಆಂದೋಲನ' ಕ್ಕೆ ಕರೆ ನೀಡಿದ್ದಾರೆ. ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಅವರು ಇಂದು ಬೆಳಗ್ಗೆ ಅಣ್ಣಾ ನಿರಶನ ಕೈಗೊಂಡಿರುವ ಸ್ಥಳಕ್ಕೆ ಭೇಟಿ ನೀಡಿ, ಸರಕಾರದ ನಿಲುವನ್ನು ತಿಳಿಸಿದರು.

ಭ್ರಷ್ಟಾಚಾರ ವಿರೋಧಿ ಸಮಿತಿಗೆ ಅಧಿಸೂಚನೆ ಹೊರಡಿಸಲು ಸಾಧ್ಯವಿಲ್ಲ ಮತ್ತು ಅಣ್ಣಾ ಅವರ ಸೂಚನೆಯಂತೆ ನ್ಯಾಯಮೂರ್ತಿಗಳಾದ ಜೆ. ಎಸ್. ವರ್ಮಾ ಮತ್ತು ಸಂತೋಷ್ ಹೆಗ್ಡೆ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸುವುದು ಅಸಾಧ್ಯ ಎಂದು ಸಚಿವ ಸಿಬಲ್ ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಂತೆ 72 ವರ್ಷದ ಅಣ್ಣಾ ಜೈಲ್ ಭರೋ ಚಳವಳಿಗೆ ಕರೆ ನೀಡಿದರು.

ಇದರಿಂದ ಮತ್ತಷ್ಟು ಗೊಂದಲಕ್ಕೆ ಸಿಕ್ಕಿದ ಸರಕಾರ ಪ್ರಧಾನಿ ನಿವಾಸದಲ್ಲಿ ಉನ್ನತ ಸಭೆ ನಡೆಸುತ್ತಿದೆ. ಅಣ್ಣಾ ಒತ್ತಾಸೆಗೆ ಪರೋಕ್ಷ ಬೆಂಬಲ ಸೂಚಿಸಿರುವ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಸೋನಿಯಾ ಅವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಮತ್ತು ಸರಕಾರದ ಪರ ಅಣ್ಣಾ ಅವರ ಜತೆ ಸಂಧಾನ ನಡೆಸುತ್ತಿರುವ ಸಚಿವ ಕಪಿಲ್ ಸಿಬಲ್ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಇದೇ ವೇಳೆ, ಹಜಾರೆ ಅವರ ಪ್ರತಿನಿಧಿಗಳಾದ ಸ್ವಾಮಿ ಅಗ್ನಿವೇಶ್, ಅರವಿಂದ್ ಕೇಜ್ರಿವಾಲ್ ಮತ್ತು ಸಚಿವ ಕಪಿಲ್ ಸಿಬಲ್ ಮಧ್ಯೆ ಇಂದು ಸಂಜೆ 6 ಗಂಟೆಗೆ ಮಾತುಕತೆ ನಿಗದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+