ಕುಕ್ಕೆಯಲ್ಲಿ ಹೆಲಿಕಾಪ್ಟರ್ ಇಳಿಸಲು ಸಿಎಂಗೆ ಭಯ?

ಮೇಲುಕೋಟೆ ಚೆಲುವನಾರಾಯಣಸ್ವಾಮಿಗೆ ನಮಿಸಿದ ಯಡಿಯೂರಪ್ಪ ಹೆಲಿಕಾಪ್ಟರ್ ಏರಿ ನೇರ ಸುಬ್ರಹ್ಮಣ್ಯ ಕ್ಷೇತ್ರ ಯಾತ್ರೆಗೆ ಕೈಗೊಂಡರು. ಸುಬ್ರಹ್ಮಣ್ಯ ಕ್ಷೇತ್ರ ಹತ್ತಿರವಾಗುತ್ತಿದ್ದಂತೆ, ಕಾಪ್ಟರ್ ಇಳಿಸಲು ಹೊರಟ ಪೈಲಟ್ ಗೆ ಪುತ್ತೂರುಗೆ ಹೋಗುವಂತೆ ಸಿಎಂ ಸೂಚಿಸಿದ್ದಾರೆ ಎನ್ನಲಾಗಿದೆ. ಅದರಂತೆ, ಪುತ್ತೂರಿನಲ್ಲಿ ಇಳಿದು ನಂತರ ಕಾರಿನಲ್ಲಿ ಕುಕ್ಕೆ ಕಡೆಗೆ ವಾಪಾಸ್ ಬಂದಿದ್ದಾರೆ.
ಕುಕ್ಕೆ ಸುಬ್ರಮಣ್ಯ ವ್ಯಾಪ್ತಿಯಲ್ಲಿ ಹೆಲಿಕಾಪ್ಟರ್ನಲ್ಲಿ ಬಂದಿಳಿದರೆ ನಿಮಗೆ ಅನಿಷ್ಠ ಕಾದಿದೆ. ಮುಖ್ಯಮಂತ್ರಿ ಹುದ್ದೆ ಅದು ಕಂಟಕವಾಗುತ್ತದೆ ಎಂಬ ಭವಿಷ್ಯವಾಣಿ ಸಿಎಂರನ್ನು ಈ ರೀತಿ ಆಡಿಸಿದೆ. ಭೂತ, ಪ್ರೇತಗಳನ್ನೇ ಓಡಿಸುವ ಶಕ್ತಿಯಿರುವ ಕುಕ್ಕೆ ಶ್ರೀಕ್ಷೇತ್ರ ಈ ರೀತಿ ಸುತ್ತಿ ಬಳಸಿ ಎಂಟ್ರಿ ಕೊಟ್ಟ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಅವರ ಪುತ್ರಿಯೊಬ್ಬರು ಇದ್ದರು ಎಂಬ ಸುದ್ದಿಯಿದೆ. ಮತ್ಯಾರು ಇದ್ದರೋ ತಿಳಿದುಬಂದಿಲ್ಲ.
ಈ ಹಿಂದೆ ಯಡಿಯೂರಪ್ಪರವರು ಶೋಭಾ ಕರಂದ್ಲಾಜೆಯವರ ಸೋದರಿ ಮತ್ತು ಸೋದರನ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಎರಡು ಬಾರಿ ಪುತ್ತೂರಿಗೆ ಬಂದಿದ್ದರು. ಪುತ್ತೂರಿಗೆ ಅಧಿಕೃತ ಕಾರ್ಯಕ್ಕಿಂತ ಖಾಸಗಿ ಕಾರ್ಯಕ್ರಮಕ್ಕೆ ಹೆಚ್ಚಾಗಿ ಸಿಎಂ ಭಾಗವಹಿಸಿರುವುದು ವಿಶೇಷ.












Click it and Unblock the Notifications