ದೇವರಿಗೆ ಜೀವದಾನ ನೀಡಿದ್ದು ಜಾಸ್ತಿಯಾಯ್ತು
ಮೊಹಾಲಿ, ಮಾ. 30: "ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸೆಂಚುರಿ ಹೊಡೆದರೆ ಭಾರತದ ಸೋಲುವುದು ಗ್ಯಾರಂಟಿ" ಎಂಬ ತಲೆಬುಡವಿಲ್ಲದ ಲಾಜಿಕ್ ಅನ್ನು ನಿಜ ಎಂದು ಪಾಕಿಸ್ತಾನ ತಂಡ ನಂಬಿದ್ದಂತೆ ತೋರುತ್ತದೆ. ಅಂತೂ ಇಂತೂ ತಮ್ಮ ವೃತ್ತಿ ಜೀವನದ ನೂರನೇ ಶತಕ ಸಿಡಿಸುವ ಪ್ರಯತ್ನದಲ್ಲಿದ್ದ ಸಚಿನ್ ಮುಗ್ಗರಿಸಿದ್ದಾರೆ. ಕ್ರಿಕೆಟ್ ದೇವರಿಗೆ 6ಕ್ಕೂ ಹೆಚ್ಚು ಜೀವದಾನ ನೀಡುವ ಮೂಲಕ ಬೇಜಾನ್ ಅವಕಾಶ ನೀಡಿದ್ದ ಪಾಕಿಸ್ತಾನಕ್ಕೆ ಕೊನೆಗೂ ಬುದ್ಧಿ ಬಂದು, 85 ರನ್ ಗಳಿಸಿದ್ದ ಸಚಿನ್ ಔಟ್ ಆಗಿ ಪೆವಿಲಿಯನ್ ನಲ್ಲಿ ಕೂರುವಂತೆ ಮಾಡಿದೆ.
ಆರಂಭಿಕ ಆಟಗಾರ ವಿರೇಂದರ್ ಸೆಹ್ವಾಗ್ ಸ್ಫೋಟಕ ಬ್ಯಾಟಿಂಗ್(9 ಬೌಂಡರಿ 25 ಎಸೆತದಲ್ಲಿ 38 ರನ್) ಗೆ ಬಲಿಯಾಗಿದ್ದ ಪಾಕಿಸ್ತಾನದ ಬೌಲರ್ ಗಳು ಸಾಕಷ್ಟು ಬಸವಳಿದಿದ್ದರು. ಇನ್ನೊಂದೆಡೆ ನಿಧಾನಗತಿಯಿಂದ ಆಡುತ್ತಿದ್ದ ಸಚಿನ್ ಜೀವದಾನದ ಲಾಭ ಪಡೆದು 95ನೇ ಅರ್ಧ ಶತಕ ಗಳಿಸಿ ದಾಖಲೆ ಬರೆದರು.

ಜೀವದಾನಗಳ ದಾಖಲೆ: ಸಯೀಸ್ ಅಜ್ಮಲ್ ರ ಎರಡನೇ ಓವರ್ ನಲ್ಲಿ ನಾಲ್ಕನೇ ಎಸೆತದಲ್ಲಿ ತೆಂಡೂಲ್ಕರ್ ಪ್ಯಾಡ್ ಗೆ ಚೆಂಡು ಬಡಿದ ತಕ್ಷಣ ಪ್ರತಿಕ್ರಿಯಿಸಿದ ಅಂಪೈರ್ ಅಯಾನ್ ಗೌಲ್ಡ್ ಔಟ್ ಎಂದು ತೀರ್ಪು ನೀಡಿದರು. ಆದರೆ, ತೀರ್ಪಿನ ಮರು ವಿಮರ್ಶೆ ಬಯಸಿದ ಸಚಿನ್, ಬಚಾವಾದರು.
ಮುಂದಿನ ಎಸೆತದಲ್ಲಿ ಅಜ್ಮಲ್ ಎಸೆದ ದೂಸ್ರಾ ತಿಳಿಯದೆ ಕ್ರೀಸ್ ನಲ್ಲಿ ಸಚಿನ್ ತಿಣುಕಾಡುತ್ತಿದ್ದಾಗ, ಕಮ್ರಾನ್ ಅಕ್ಮಲ್ ಬೇಲ್ ಎಗರಿಸಿ ಎಲ್ ಬಿ ಅಪೀಲ್ ಮಾಡಿದರು. ಲೆಗ್ ಅಂಪೈರ್ ಸೈಮನ್ ಟಫಲ್ ಹಾಗೂ ಮೂರನೆ ಅಂಪೈರ್ ಬಿಲ್ಲಿ ಬೌಡನ್ ಸ್ಲೋ ಮೋಷನ್ ರಿಪ್ಲೇ ಪದೇ ಪದೇ ನೋಡಿ, ಸಚಿನ್ ನಾಟೌಟ್ ಎಂದು ತೀರ್ಮಾನಿಸಿದರು.
ಇದಕ್ಕೂ ಮುನ್ನ ಸಚಿನ್ 27 ರನ್ ಗಳಿಸಿದ್ದಾಗ ಮಿಡ್ ವಿಕೆಟ್ ನಲ್ಲಿ ನಿಂತಿದ್ದ ಮಿಸ್ಬಾ ಉಲ್ ಹಕ್ ಗೆ ಕ್ಯಾಚ್ ನೀಡಿದ್ದರು ಹಾಗೂ ಮಿಡ್ ಆಫ್ ನಲ್ಲಿದ್ದ ಯೂನಿಸ್ ಖಾನ್ ಗೆ 45 ರನ್ ಗಳಿಸಿದ್ದಾಗ ಕ್ಯಾಚ್ ನೀಡಿದ್ದರು ಎರಡು ಬಾರಿಯೂ ಪಾಕಿ ಫೀಲ್ಡರ್ ಗಳು ಕ್ಯಾಚ್ ಚೆಲ್ಲಿದರು. ಅಫ್ರಿದಿ ಎರಡೂ ಬಾರಿ ನತದೃಷ್ಟನಾಗಬೇಕಾಯಿತು. ಇದಲ್ಲದೆ ಸಚಿನ್ ಔಟ್ ಆಗುವುದಕ್ಕೂ ಮುನ್ನ ಉಮರ್ ಅಕ್ಮಲ್ ಸಹಾ ಒಂದು ಜೀವದಾನ ನೀಡಿದ್ದರು. ಒಟ್ಟಾರೆ ಸಚಿನ್ 100ನೇ ಶತಕ ಬಾರಿಸುವ ಕಾಲ ಇನ್ನೂ ಕೂಡಿ ಬಂದಿಲ್ಲ ಎನ್ನಬಹುದು. ಆದರೂ, ವಿಶ್ವಕಪ್ ಟೂರ್ನಿಯಲ್ಲಿ ಐದಕ್ಕಿಂತ ಹೆಚ್ಚು ಶತಕ ಗಳಿಸಿದ ಮೊದಲ ಆಟಗಾರ, ವಿಶ್ವಕಪ್ ನಲ್ಲಿ 2000 ರನ್ ಗಡಿ ದಾಟಿದ ಮೊದಲ ಆಟಗಾರ ಎಂಬ ಸಾಧನೆ ಸಚಿನ್ ಹೆಸರಲ್ಲಿದೆ. [ಸಚಿನ್ ವೃತ್ತಿ ಜೀವನ ಸವಿವರ]
-
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು -
ಶಿಕ್ಷಕಿಯರು ಹೆರಿಗೆ ರಜೆಗಾಗಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಮಂಜೂರು; 5 ವರ್ಷ ಇಚ್ಛಿಸಿದ ಶಾಲೆಯಲ್ಲೇ ಕೆಲಸಕ್ಕೆ ಅವಕಾಶ -
SSLC Exam 2026 : ಮಾರ್ಚ್ 18ರಿಂದ ಪರೀಕ್ಷೆ; ವಿದ್ಯಾರ್ಥಿಗಳೇ, ನಿಮ್ಮ ಕೊನೆ ಕ್ಷಣದ ಸಿದ್ಧತೆಗೆ ಹೀಗಿರಲಿ -
Puneeth Rajkumar Birthday: ಇಂದು ನಟ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ; ಅಭಿಮಾನಿಗಳಿಂದ ವಿಶೇಷ ನಮನ, ಶುಭಾಶಯಗಳ ಮಹಾಪೂರ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
Shame on You: ಸೆರಗ ಸರ್ಸೆ ಡಬಲ್ ಮೀನಿಂಗ್ ಹಾಡಿಗೆ ಕನ್ನಡಿಗರ ಆಕ್ರೋಶ-ಶೋಭಾ ಮಳವಳ್ಳಿ ಬರಹ -
ನಾಳೆಯಿಂದ ರಾಜ್ಯಾದ್ಯಂತ SSLC ಪರೀಕ್ಷೆ: ಟೆನ್ಷನ್ ಬಿಡಿ, ರಿಲಾಕ್ಸ್ ಆಗಿರಿ; ಕೊನೆಯ ಕ್ಷಣದ ಸಿದ್ಧತೆಗೆ ಇಲ್ಲಿವೆ ಟಿಪ್ಸ್ -
Bengaluru Rain: ಬೆಂಗಳೂರಿನ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ: ಯುಗಾದಿಗೆ ಮೊದಲ ಮಳೆ; ರಾಜ್ಯಕ್ಕೆ ಶುಭಸೂಚಕ












Click it and Unblock the Notifications