Get Updates
Get notified of breaking news, exclusive insights, and must-see stories!

ಕಾಡಿಗೆ ಬೆಂಕಿಯೇ? ಕಂಟ್ರೋಲ್ ರೂಮ್-ಗೆ ಕರೆ ಮಾಡಿ

Forest Department Helpdesk
ಬೆಂಗಳೂರು, ಮಾ. 12: ಅರಣ್ಯ ಇಲಾಖೆಯಲ್ಲಿ ನಡೆಯುತ್ತಿರುವ ಅಕ್ರಮ ಕೃತ್ಯಗಳನ್ನು ನಿಯಂತ್ರಿಸಲು ಇಲಾಖೆ ಕೊನೆಗೂ ಮುಂದಾಗಿದೆ. ತನ್ಮೂಲಕ ಕಳೆದ ಎಂಟು ವರ್ಷಗಳಿಂದ ನಿಷ್ಪ್ರಯೋಜಕವಾಗಿದ್ದ ಅರಣ್ಯ ಇಲಾಖೆ ನಿಯಂತ್ರಣ ಕೊಠಡಿಗೆ ಮರುಜೀವ ನೀಡಲಾಗಿದೆ. ಮರ, ಪ್ರಾಣಿಗಳ ಹನನ, ಮರದ ತುಂಡುಗಳ ಕಳ್ಳಸಾಗಣೆ ಸೇರಿದಂತೆ ಅರಣ್ಯದಲ್ಲಿ ನಡೆಯುವ ಇನ್ನಿತರೆ ಅಪರಾಧ ಕೃತ್ಯಗಳಿಗೆ ಬ್ರೇಕ್ ಬೀಳಲಿದೆ. ಅರಣ್ಯದಲ್ಲಿನ ಕುಕೃತ್ಯಗಳನ್ನು ತಡೆಗಟ್ಟುವ ಉದ್ದೇಶದಿಂದ ನಿಯಂತ್ರಣ ಕೊಠಡಿಗೆ ಮರುಜೀವ ನೀಡಲಾಗಿದೆ.

'ಬೇಸಿಗೆ ಕಾಲ ಕಾಲಿಟ್ಟಿದೆ. ಸಾಮಾನ್ಯವಾಗಿ ಈ ಕಾಲದಲ್ಲಿ ಅರಣ್ಯ ಪ್ರದೇಶದಲ್ಲಿ ಕಿಚ್ಚು ಕಾಣಿಸಿಕೊಳ್ಳುತ್ತದೆ. ಕಾಡು ಪ್ರಾಣಿಗಳು ನಾಡಿಗೆ ಬರುವುದೂ ಋತುವಿನಲ್ಲಿ ಹೆಚ್ಚು. ಇನ್ನು ಅಪಘಾತಗಳಲ್ಲಿ ಪ್ರಾಣಿಗಳು ಸಾವಿಗೀಡಾಗುವುದು ಹೆಚ್ಚಾಗುತ್ತಿದೆ. ಜತೆಗೆ ಅರಣ್ಯ ಇಲಾಖೆಯಲ್ಲೂ ಅಪರಾಧ, ಅಕ್ರಮಗಳು ಹೆಚ್ಚುತ್ತಿವೆ. ಇದರ ಬಗ್ಗೆ ಮಾಹಿತಿ ನೀಡಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಈ ನಿಯಂತ್ರಣ ಕೊಠಡಿಗೆ ಕಾಯಕಲ್ಪ ನೀಡಲಾಗಿದೆ. ಜನ ಇದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅರಣ್ಯ ಸಚಿವ ಸಿ.ಎಚ್. ವಿಜಯಶಂಕರ್ ಹೇಳಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಅರಣ್ಯ ಭವನದಲ್ಲಿ ಮಾತ್ರ ಈ ಕೊಠಡಿಯಿದ್ದು, ಇತ್ತೀಚೆಗೆ ಮತ್ತೆ ಕಾರ್ಯಾರಂಭಿಸಿದೆ. ಿಲ್ಲಿ ಇಲಾಖೆಯ ಆರು ಮಂದಿ ಹಗಲು ಮತ್ತು ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಾರೆ. ಸಾರ್ವಜನಿಕರು ರಾಜ್ಯದ ಯಾವುದೇ ಮೂಲೆಯಿಂದ 080-8805 0555ಗೆ ಕರೆ ಮಾಡಬಹುದು. ಹಾಗೆಯೇ, 96395 66677 ಮೊಬೈಲ್-ಗೆ ಎಸ್ಎಂಎಸ್ ಮಾಡಿ ಮಾಹಿತಿ ನೀಡಬಹುದು. ww.aranya.gov.in ವೆಬ್ ಸೈಟ್ ಅನ್ನೂ ಸಂಪರ್ಕಿಸಬಹುದು. ಕರೆ ಸ್ವೀಕರಿಸುವ ಸಿಬ್ಬಂದಿ ತಕ್ಷಣ ಆ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ರವಾನಿಸಲಿದ್ದಾರೆ. ಕರೆ ಅಥವಾ ಸಂದೇಶದ ಮೂಲಕ ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಇಲಾಖೆ ತಿಳಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+