ಕಾಡಿಗೆ ಬೆಂಕಿಯೇ? ಕಂಟ್ರೋಲ್ ರೂಮ್-ಗೆ ಕರೆ ಮಾಡಿ

'ಬೇಸಿಗೆ ಕಾಲ ಕಾಲಿಟ್ಟಿದೆ. ಸಾಮಾನ್ಯವಾಗಿ ಈ ಕಾಲದಲ್ಲಿ ಅರಣ್ಯ ಪ್ರದೇಶದಲ್ಲಿ ಕಿಚ್ಚು ಕಾಣಿಸಿಕೊಳ್ಳುತ್ತದೆ. ಕಾಡು ಪ್ರಾಣಿಗಳು ನಾಡಿಗೆ ಬರುವುದೂ ಋತುವಿನಲ್ಲಿ ಹೆಚ್ಚು. ಇನ್ನು ಅಪಘಾತಗಳಲ್ಲಿ ಪ್ರಾಣಿಗಳು ಸಾವಿಗೀಡಾಗುವುದು ಹೆಚ್ಚಾಗುತ್ತಿದೆ. ಜತೆಗೆ ಅರಣ್ಯ ಇಲಾಖೆಯಲ್ಲೂ ಅಪರಾಧ, ಅಕ್ರಮಗಳು ಹೆಚ್ಚುತ್ತಿವೆ. ಇದರ ಬಗ್ಗೆ ಮಾಹಿತಿ ನೀಡಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಈ ನಿಯಂತ್ರಣ ಕೊಠಡಿಗೆ ಕಾಯಕಲ್ಪ ನೀಡಲಾಗಿದೆ. ಜನ ಇದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅರಣ್ಯ ಸಚಿವ ಸಿ.ಎಚ್. ವಿಜಯಶಂಕರ್ ಹೇಳಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಅರಣ್ಯ ಭವನದಲ್ಲಿ ಮಾತ್ರ ಈ ಕೊಠಡಿಯಿದ್ದು, ಇತ್ತೀಚೆಗೆ ಮತ್ತೆ ಕಾರ್ಯಾರಂಭಿಸಿದೆ. ಿಲ್ಲಿ ಇಲಾಖೆಯ ಆರು ಮಂದಿ ಹಗಲು ಮತ್ತು ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಾರೆ. ಸಾರ್ವಜನಿಕರು ರಾಜ್ಯದ ಯಾವುದೇ ಮೂಲೆಯಿಂದ 080-8805 0555ಗೆ ಕರೆ ಮಾಡಬಹುದು. ಹಾಗೆಯೇ, 96395 66677 ಮೊಬೈಲ್-ಗೆ ಎಸ್ಎಂಎಸ್ ಮಾಡಿ ಮಾಹಿತಿ ನೀಡಬಹುದು. ww.aranya.gov.in ವೆಬ್ ಸೈಟ್ ಅನ್ನೂ ಸಂಪರ್ಕಿಸಬಹುದು. ಕರೆ ಸ್ವೀಕರಿಸುವ ಸಿಬ್ಬಂದಿ ತಕ್ಷಣ ಆ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ರವಾನಿಸಲಿದ್ದಾರೆ. ಕರೆ ಅಥವಾ ಸಂದೇಶದ ಮೂಲಕ ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಇಲಾಖೆ ತಿಳಿಸಿದೆ.












Click it and Unblock the Notifications