ಬೇರ್ಪಟ್ಟ ಹಂಪೆ ಅಕ್ಕ-ತಂಗಿ ಸಯಾಮಿ

ಕಮಲಾಪುರದಿಂದ ಹಂಪೆಗೆ ಹೋಗುವ ದಾರಿಯಲ್ಲಿ ನೆಲ ಶಿವಾಲಯ ಸಮೀಪ ರಸ್ತೆಯ ಬದಿಯಲ್ಲಿ ಬರುವ ಎರಡು ಬೃಹತ್ ಕಲ್ಲುಗುಂಡುಗಳು ಒಂದನ್ನೊಂದು ಆತು ನಿಂತಿದ್ದವು. ಇದನ್ನು ಜನಪದರು ಅಕ್ಕತಂಗಿಯರ ಗುಂಡು ಎಂದು ಕರೆಯುತ್ತಾರೆ. ಈ ಬೃಹತ್ ಬಂಡೆಯೊಂದರ ಮೇಲಿನ ಭಾಗ ಸೀಳಿ, ಒಂದು ಭಾಗ ನೆಲಕ್ಕೆ ಕುಸಿದು ಬಿದ್ದಿದೆ. 8ಕ್ಕೂ ಹೆಚ್ಚು ಚೂರು ಬಂಡೆಗಳು ಸಿಡಿದು ಬಿದ್ದಿವೆ.
ಹಂಪೆಯ ಅಕ್ಕತಂಗಿಯರ ಗುಂಡು ಒಡೆಯಲು ಕಾರಣವೇನು ?
ಹಂಪೆಯ ಅಕ್ಕತಂಗಿಯರ ಗುಡ್ಡ ಎಂದೇ ಕರೆಯಲ್ಪಡುವ ಎರಡು ಬೃಹತ್ ಬಂಡೆಗಳಲ್ಲಿ ಒಂದು ಬೃಹತ್ ಬಂಡೆಯಲ್ಲಿ ಸೀಳು ಉಂಟಾಗಲು ಕಾರಣವೇನು ಎಂಬ ಬಗ್ಗೆ ಈಗ ಚರ್ಚೆ ಆರಂಭವಾಗಿದೆ. 14 ಕಿ.ಮೀ. ದೂರದಲ್ಲಿಯೇ ಗುಡ್ಡಗಳಲ್ಲಿ ಮೈನಿಂಗ್ ಬ್ಲಾಸ್ಟಿಂಗ್ ನಡೆಯುತ್ತಿರುವುದರಿಂದ ಗಣಿಗಾರಿಕೆಯಿಂದಲೇ ಐತಿಹಾಸಿಕ ಈ ಬೃಹತ್ ಬಂಡೆಯಲ್ಲಿ ಸೀಳು ಉಂಟಾಗಿದೆ ಎಂದು ಹೇಳಲಾಗುತ್ತಿದೆ.
ಬೃಹತ್ ಬಂಡೆಯಲ್ಲಿ ಅಲ್ಲಲ್ಲಿ ಸೀಳು ಉಂಟಾಗಿದ್ದು, ಸುತ್ತಮುತ್ತಲಿನ ಗಿಡಗಂಟಿಗಳು ಬೆಳೆದು, ಅವುಗಳಲ್ಲಿ ಬೇರು ಸೇರಿಕೊಂಡು ಈ ಅನಾಹುತ ಘಟಿಸಿರಬಹುದು ಎಂಬ ಮಾತು ಕೇಳಿ ಬರುತ್ತಿವೆ. ಇದಕ್ಕೆ ಸಾಕ್ಷಿ ಎನ್ನುವಂತೆ ಬಂಡೆಯಲ್ಲಿ ಬೇರುಗಳು ಕಾಣಿಸುತ್ತಿವೆ. ರಸ್ತೆಯ ಪಕ್ಕವೇ ಈ ಬಂಡೆಗಳು ಇರುವುದರಿಂದ ಭಾರಿ ವಾಹನಗಳ ಓಡಾಟ ಮತ್ತೊಂದು ಕಾರಣವಿರಬಹುದು ಎಂದು ಕೆಲವರು ಹೇಳುತ್ತಾರೆ. ಹಂಪೆ ಉತ್ಸವದಲ್ಲಿ ಸಾಹಸ ಕ್ರೀಡೆಗಾಗಿ ಬಂಡೆ ಹತ್ತಲಿಕ್ಕಾಗಿ ಈ ಬೃಹತ್ ಬಂಡೆಗೆ ತೂತು ಹಾಕಿ, ಟ್ರಕ್ಕಿಂಗ್ ನಡೆಸಿದ್ದು ಮತ್ತೊಂದು ಕಾರಣ ಎಂದು ಸಹ ಹೇಳಲಾಗುತ್ತಿದೆ.
ನೈಸರ್ಗಿಕ ಕಾರಣದಿಂದ ಈ ಬೃಹತ್ ಬಂಡೆ ಸೀಳಿದೆ. 1970ರಲ್ಲಿಯೇ ಈ ಬಂಡೆಯಲ್ಲಿ ಸೀಳು ಕಾಣಿಸಿಕೊಂಡಿದ್ದವು ಎಂದು ರಾಜ್ಯ ಪುರಾತತ್ವ ಇಲಾಖೆಯ ಮೂಲಗಳು ತಿಳಿಸುತ್ತವೆ. ಅಕ್ಕತಂಗಿಯರ ಗುಡ್ಡ ಬಿದ್ದಿದೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಕಮಲಾಪುರ, ಹಂಪಿ, ಕಡ್ಡಿರಾಂ ಪುರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಹೊಸಪೇಟೆಯಿಂದಲೂ ಜನರು ತಂಡೋಪತಂಡವಾಗಿ ಜನರು ಬಂದು ವೀಕ್ಷಿಸುತ್ತಾ ತಮಗೆ ತೋಚಿದ ರೀತಿಯಲ್ಲಿ ಮಾತನಾಡುತ್ತಿರುವುದು ಸಾಮಾನ್ಯ ದೃಶ್ಯವಾಗಿತ್ತು. ಪೊಲೀಸರು ಜನರನ್ನು ಬಂಡೆಯ ಬಳಿಗೆ ಹೋಗದಂತೆ ತಡೆದರು.
ಒಟ್ಟಿನಲ್ಲಿ ಜನಪದಕ್ಕೆ ಹಾಡಾಗಿದ್ದ, ಎಲ್ಲರ ಗಮನ ಸೆಳೆಯುತ್ತಿದ್ದ ಅಕ್ಕತಂಗಿಯರ ಗುಡ್ಡ ಒಡೆದು, ತನ್ನ ಸಹಜ ಸೌಂದರ್ಯ ಕಳೆದು ಕೊಂಡು ಕರೂಪಿಯಾಗಿ ಈ ಎಲ್ಲದಕ್ಕೂ ಸಾಕ್ಷಿಯಾಗಿ ನಿಂತಿರುವುದು ಮಾತ್ರ ಸತ್ಯವಾಗಿದೆ. ಕಮಲಾಪುರ ಹಂಪಿಯ ರಸ್ತೆಯ ಪಕ್ಕವೇ ಈ ಬೃಹತ್ ಬಂಡೆ ಸೀಳಿ ಬಿದ್ದಿದ್ದರಿಂದ ಈ ರಸ್ತೆಯಲ್ಲಿ ಸಂಚಾರವನ್ನು ಹಂಪಿ ಹಾಗೂ ಕಮಲಾಪುರ ಪೊಲೀಸರು ತಾತ್ಕಾಲಿಕ ನಿಲುಗಡೆ ಮಾಡಿದ್ದಾರೆ. ಸ್ಥಳಕ್ಕೆ ಶಾಸಕ ಆನಂದ್ ಸಿಂಗ್, ತಹಶೀಲ್ದಾರ್ ಪಿ.ಎಸ್. ಮಂಜುನಾಥ, ರಾಜ್ಯ ಪುರಾತತ್ವ ಇಲಾಖೆಯ ಅಧಿಕಾರಿ ಕೆಂಪೇಗೌಡ ಭೇಟಿ ನೀಡಿ ಪರಿಶೀಲಿಸಿದ್ದಾರೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications