ಅಜ್ಜಿಯ ಸಾವಿನ ಸಮ್ಮುಖದಲ್ಲಿ ನಡೆಯಲಿದೆ ವರುಣ್ ವಿವಾಹ

ಆದಾಗ್ಯೂ ಸೂತಕದ ಛಾಯೆ ಶುಭ ಕಾರ್ಯದ ಮೇಲೆ ಬೀಳದಂತೆ ಮೊಮ್ಮಗನ ಮದುವೆ ನಿರ್ವಿಘ್ನವಾಗಿ ನೇರವೇರಲೆಂದು ಹಿರಿಯರು ನಿಶ್ಚಯಿಸಿದ್ದಾರೆ. ಅಲ್ಲಿಗೆ ಅಮತೇಶ್ವರ ಅವರ ಮೊಮ್ಮಗ ವರುಣ್ ಮತ್ತು ಗ್ರಾಫಿಕ್ ಡಿಸೈನರ್ ಯಾಮಿನಿ ರಾಯ್ ಚೌಧರಿ ವಿವಾಹ ಶುಭಪ್ರದವಾಗಿ ನಡೆಯಲಿದೆ. ಆದರೆ ಸಮಾರಂಭವನ್ನು ಸರಳವಾಗಿ, ಶಾಸ್ತ್ರೋಕ್ತವಾಗಿ ನಡೆಸಲು ನಿರ್ಧರಿಸಲಾಗಿದೆ.
ಆದರೆ ನವದೆಹಲಿಯ ಅಶೋಕ ಹೋಟೆಲ್ನಲ್ಲಿ ಮಾರ್ಚ್ 8ರಂದು ನಡೆಯಬೇಕಿದ್ದ ವಿವಾಹ ಆರತಕ್ಷತೆಯನ್ನು ಸ್ಥಗಿತಗೊಳಿಸಲಾಗಿದೆ. ಅನೇಕ ರಾಜಕೀಯ ನಾಯಕರು, ಬಾಲಿವುಡ್ ಸ್ನೇಹಿತರು, ಕಲಾವಿದರು ಸೇರಿದಂತೆ ಒಟ್ಟು 1600 ಮಂದಿಗೆ ಆಮಂತ್ರಣ ನೀಡಲಾಗಿತ್ತು.
ಅಲ್ಲಿಗೆ, ಸನಾತನ ಸಂಪ್ರದಾಯದಲ್ಲಿ ಕಂಚಿ ಕಾಮಕೋಟಿ ಪಿಠಂನ ಶಂಕರಾಚಾರ್ಯ ಸ್ವಾಮಿ ಜಯೇಂದ್ರ ಸರಸ್ವತಿ ಅವರ ಸಮ್ಮುಖದಲ್ಲಿ ಮಾರ್ಚ್ 6ರಂದು ವಾರಣಾಸಿಯಲ್ಲಿ ನೆರವೇರಲಿದೆ. ಇಲ್ಲಿನ ಹನುಮಾನ್ ಘಾಟ್ನಲ್ಲಿರುವ ಶ್ರೀ ಕಾಶಿ ಕಾಮಕೋಟೀಶ್ವರ ದೇವಾಲಯದಲ್ಲಿ ಸಂಜಯ್ ಗಾಂಧಿ ಹಾಗೂ ಮೇನಕಾ ಗಾಂಧಿ ಅವರ ಏಕೈಕ ಪುತ್ರ ವರುಣ್ ಮದುವೆ ನಡೆಯಲಿದೆ. ವಿವಾಹಕ್ಕಾಗಿ ಸೋನಿಯಾ ಗಾಂಧಿ ಸೇರಿದಂತೆ ಕೆಲವೇ ಮಂದಿಗೆ ಆಮಂತ್ರಣ ನೀಡಲಾಗಿದೆ.












Click it and Unblock the Notifications