ಬಾಟ್ಲಿ ನೀರು ಬದಲು ಕಾವೇರಿ ನೀರು ಕೊಡಿ : ನಾಣಯ್ಯ

ಬಾಟಲಿಯಲ್ಲಿ ಸರಬರಾಜು ಮಾಡಲಾಗುತ್ತಿರುವ ನೀರಿನಲ್ಲಿ ರಸಾಯನಿಕವನ್ನು ಬಳಸಲಾಗುತ್ತಿದೆ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಗುಲ್ಬರ್ಗ ಜಿಲ್ಲೆ ಶಹಾಪುರ ತಾಲೂಕಿನ ಏವೂರಿನ ತಾಂಡವೊಂದರಲ್ಲೇ ಸುಮಾರು 150 ಮಂದಿ ಕಲುಷಿತ ನೀರು ಸೇವನೆಯಿಂದ ಅಸ್ವಸ್ಥರಾಗಿದ್ದಾರೆ. ಬಾಟ್ಲಿಂಗ್ ದಂಧೆ, ಖನಿಜ ರಹಿತ ಕುಡಿಯುವ ನೀರಿನ ಬಾಟಲ್ ಗಳ ಬಗ್ಗೆ ಟಿವಿ 9 ನೀಡಿರುವ ತನಿಖಾ ವರದಿಯಿಂದ ಜನಪ್ರತಿನಿಧಿಗಳ ಕಣ್ಣು ತೆರೆಯಲಿ ಎಂದು ನಾಣಯ್ಯ ವರದಿಯಲ್ಲಿ ಸದನದಲ್ಲಿ ಎತ್ತಿ ತೋರಿಸಿದರು.
ನೀರಿನ ಖಾಸಗೀಕರಣ ಕೂಡದು: ದೇಶದ ನದಿ ನೀರನ್ನು ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗುತ್ತಿದೆ ಎಂಬ ಕೂಗು ಎದ್ದಿದೆ. ಒಂದು ಬಾಟಲಿ ನೀರಿಗೆ 14 ರೂ ನೀಡಿ ಕುಡಿಯಬೇಕಾದ ಪರಿಸ್ಥಿತಿಯಿದೆ. ಕುಡಿಯುವ ನೀರು ಶುದ್ಧವಾಗಿರುತ್ತದೆ ಎಂಬ ನಂಬಿಕೆಯಿರುವುದಿಲ್ಲ. ರಾಸಾಯನಿಕಗಳಿಂದ ತುಂಬಿದ ನೀರನ್ನು ಖನಿಜಯುಕ್ತ ನೀರು ಎಂದು ಮಾರಾಟ ಮಾಡುವ ದಂಧೆಗೆ ಕಡಿವಾಣ ಹಾಕಬೇಕಿದೆ. ಬಾಟಲಿ ನೀರನ್ನು ಬದಿಗೊತ್ತಿ ಶುದ್ಧ ಕಾವೇರಿ ನೀರು ನೀಡುವುದೇ ಇದಕ್ಕೆ ಪರಿಹಾರ ಎಂದು ನಾಣಯ್ಯ ಹೇಳಿದರು.












Click it and Unblock the Notifications