ರಾಜಾ ಕಾಲುವೆಯಲ್ಲಿ ಬಾಲಕ ರಿಹಾನ್ ಶವ ಪತ್ತೆ

ರಿಹಾನ್ ಸಾವಿನಿಂದ ದುಃಖಿತರಾಗಿರುವ ಅಪ್ಪ ಸಿದ್ದಿಕ್ ಮತ್ತು ಅಮ್ಮ ಜಬೀನಾ ಅವರಿಗೆ ಸಾಂತ್ವನ ಹೇಳಿದ ಬೊಮ್ಮನಹಳ್ಳಿ ವಾರ್ಡ್ ಬಿಬಿಎಂಪಿ ಸದಸ್ಯ ಮಂಜುನಾಥ್ ರೆಡ್ಡಿ, 1 ಲಕ್ಷ ರು ಪರಿಹಾರ ಧನವನ್ನು ಘೋಷಿಸಿದರು. ರಿಹಾನ್ ಕಾಣೆಯಾದ ದಿನದಿಂದ ಮಗುವಿನ ಅಜ್ಜಿ ನೂರ್ ಜಹಾನ್ ಕೂಡಾ ಕಾಣೆಯಾಗಿದ್ದಳು. ರಿಹಾನ್ ತಾಯಿ ಜೊತೆಗಿನ ವೈಮನಸ್ಯದಿಂದ ರಿಹಾನ್ ನನ್ನು ಆಕೆಯೇ ಅಪಹರಿಸಿರಬಹುದು ಎಂದು ಆರಂಭದಲ್ಲಿ ಶಂಕಿಸಲಾಗಿತ್ತು.
2009ರಲ್ಲಿ ಅಭಿಷೇಕ್ ಎಂಬ ಬಾಲಕ ಮಳೆಗಾಲದಲ್ಲಿ ಕೊಚ್ಚಿ ಹೋಗಿದ್ದ ನಂತರ, ಈ ರಿಹಾನ್ ಪ್ರಕರಣದಲ್ಲೂ ಬಿಬಿಎಂಪಿ ನಿರ್ಲಕ್ಷ್ಯತನವನ್ನು ಸಾರ್ವಜನಿಕರು ಖಂಡಿಸಿದ್ದರು. ಸೋಮವಾರ(ಫೆ.14) ಗುಂಡಿಗೆ ಬಿದ್ದರೆ ಮಂಗಳವಾರ ಘಟನಾ ಸ್ಥಳಕ್ಕೆ ಆಗಮಿಸಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಿಬ್ಬಂದಿಗಳು, ತಕ್ಷಣವೇ ಕಾಲುವೆಯಲ್ಲಿ ಶೋಧ ಕಾರ್ಯ ನಡೆಸದೆ, ರಿಹಾನ್ ತಾಯಿ ಅಪಹರಣದ ಶಂಕೆ ವ್ಯಕ್ತಪಡಿಸಿದ್ದನ್ನೇ ಬೆಂಬಲಿಸುತ್ತಾ ಸಮಯ ವ್ಯರ್ಥ ಮಾಡಿದರು ಎಂದು ಸಾರ್ವಜನಿಕರು ಆಕ್ರೋಶದಿಂದ ದೂರಿದ್ದಾರೆ.












Click it and Unblock the Notifications