ಇಬ್ಬರು ಚಾಲಕರ ಪೈಪೋಟಿಗೆ ಅಮಾಯಕ ಬಲಿ

Racing between tractors, one person killed
ಬಳ್ಳಾರಿ, ಫೆ. 25 : ಮರಳು ಸಾಗಿಸುತ್ತಿದ್ದ ಎರಡು ಟ್ರ್ಯಾಕ್ಟರ್‌ಗಳ ಚಾಲಕರು ಪರಸ್ಪರ ಪೈಪೋಟಿಗೆ ಬಿದ್ದು ಚಾಲನೆ ಮಾಡಿದ್ದಕ್ಕಾಗಿ ದ್ವಿಚಕ್ರ ವಾಹನ ಚಾಲಕನಿಗೆ ಡಿಕ್ಕಿ ಹೊಡೆದು ಆತನು ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಮಧ್ಯಾಹ್ನ ನಗರದಲ್ಲಿ ನಡೆದಿದೆ.

ಮೃತನನ್ನು ಅಕ್ಕಿ ವ್ಯಾಪಾರಿ ಟಿ.ವಿ. ಪ್ರವೀಣ್‌ಕುಮಾರ್ (32) ಎಂದು ಗುರುತಿಸಲಾಗಿದೆ. ಬಳ್ಳಾರಿಯ ಅಗಡಿ ಮರೆಪ್ಪ ಕಾಂಪೌಂಡ್ ನಿವಾಸಿ, ಅಕ್ಕಿ ವ್ಯಾಪಾರಿ ಜಿ.ಟಿ. ವೆಂಕಟರಮಣಪ್ಪ ಅವರ ಪುತ್ರ ಎಂದು ಪೊಲೀಸರು ತಿಳಿಸಿದ್ದಾರೆ. ಮೃತನಿಗೆ ಓರ್ವ ಪುತ್ರಿ, ಪತ್ನಿ ಇದ್ದಾರೆ. ಅಪಘಾತ ಪಾರ್ವತಿನಗರ ಮುಖ್ಯ ರಸ್ತೆಯಲ್ಲಿ ಟಿವಿಎಸ್ ಶೋರೂಂ ಸಮೀಪ ನಡೆದಿದೆ.

ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಏಕಾಏಕಿ ವೇಗವಾಗಿ ಬಂದ ಮರಳು ತುಂಬಿದ್ದ ಎರಡು ಟ್ರ್ಯಾಕ್ಟರ್‌ಗಳು ಈತನಿಗೆ ಡಿಕ್ಕಿ ಹೊಡೆದು, ಸರತಿಯಲ್ಲಿ ಒಂದರ ಮೇಲೊಂದರಂತೆ ಪ್ರವೀಣ್ ಕುಮಾರ್ ಮೇಲೆ ಚಲಿಸಿದವು. ಬುರುಡೆ ಒಡೆದು ಪ್ರವೀಣ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಚಾಲಕ ನಾಗೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ. ಮೊತ್ತೋರ್ವ ಚಾಲಕ ಅಪಘಾತವಾಗುತ್ತಲೇ ಸ್ಥಳದಿಂದ ಪರಾರಿಯಾಗಿದ್ದು, ಶೀಘ್ರದಲ್ಲೇ ಬಂಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+