ನೀರಾವರಿ: ಕೋಲಾರ, ಚಿಕ್ಕಬಳ್ಳಾಪುರ ಸೋಮವಾರ ಬಂದ್

ಶಾಸಕ ವೈ.ಎ. ನಾರಾಯಣ ಸ್ವಾಮಿ, ಜಿ.ಕೆ. ವೆಂಕಟಶಿವಾರೆಡ್ಡಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಎಲ್. ಅನಿಲ್ ಕುಮಾರ್ ಬಂದ್ಗೆ ಸಹಮತ ವ್ಯಕ್ತಪಡಿಸಿದ್ದು, ಜನತೆಯ ಬೆಂಬಲ ಕೋರಿದ್ದಾರೆ. ಮಾಜಿ ಸಚಿವ ಅಲಗೂರು ಶ್ರೀನಿವಾಸ ಮತ್ತು ಸಹಕಾರಿ ಧುರೀಣ ಬ್ಯಾಲಹಳ್ಳಿ ಗೋವಿಂದ ಗೌಡ ಅವರು ಬಂದ್ಗೆ ಬೆಂಬಲ ಕೋರಿ ಮುಳಬಾಗಲು ಮತ್ತು ಮಾಲೂರಿನಲ್ಲಿ ಸಭೆ ನಡೆಸಿದರು.
ಪಿ.ಯು. ಪ್ರಾಕ್ಟಿಕಲ್ಸ್ ಫೆ.21ಕ್ಕೆ:
ಶಾಶ್ವತ ನೀರಾವರಿ ಯೋಜನೆ ಆಗ್ರಹಿಸಿ ಬಂದ್ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಫೆಬ್ರವರಿ 14ರಂದು ನಡೆಯಬೇಕಿದ್ದ ದ್ವಿತೀಯ ಪಿಯುಸಿ ಪ್ರಾಕ್ಟಿಕಲ್ ಪರೀಕ್ಷೆಗಳನ್ನು ಫೆಬ್ರವರಿ 21ಕ್ಕೆ ಮುಂದೂಡಲಾಗಿದೆ ಎಂದು ಕೋಲಾರ ಪಿ.ಯು. ಶಿಕ್ಷಣದ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











Click it and Unblock the Notifications