ರೆಡ್ಡಿಗಳ ಗಣಿಗಳ ಮೇಲೆ ಸಿಬಿಐ ನಿರಂತರ ದಾಳಿ

ಸಚಿವ ಜಿ. ಜನಾರ್ದನರೆಡ್ಡಿ ಅವರ ನಿರ್ದೇಶಕತ್ವದ ಓಬಳಾಪುರಂ ಮೈನಿಂಗ್ ಕಾರ್ಪೊರೇಷನ್ನ ಅಂಗ ಸಂಸ್ಥೆ ಆಗಿರುವ ಅನಂತಪುರಂ ಮೈನಿಂಗ್ ಕಂಪನಿಯ ಗುತ್ತಿಗೆಗೆ ಒಳಪಟ್ಟಿರುವ 'ಅಂತರಗಂಗಮ್ಮ ಕೊಂಡ" ಗಣಿಯಲ್ಲಿ ಶೇ. 62 ರಿಂದ 67 ಗ್ರೇಡ್ ಅದಿರು ಇದೆ ಎಂದು ಸುಪ್ರೀಂಕೋರ್ಟ್ಗೆ ಅಫಿಡವಿಟ್ ಸಲ್ಲಿಸಿರುವ ಹಿನ್ನಲೆಯಲ್ಲಿ ಸಿಬಿಐ ತಂಡ ಭೇಟಿ ನೀಡಿದೆ.
ಎಜಿಕೆ ಪ್ರದೇಶಕ್ಕೆ ಬಂದ ಡಿಐಜಿ ಲಕ್ಷ್ಮಿನಾರಾಯಣ ನೇತೃತ್ವದ ಸಿಬಿಐ ತಂಡದಲ್ಲಿ ಡಿಎಸ್ಪಿ ಆರ್.ಎಂ. ಖಾನ್, ಎಸ್ಪಿ ವೆಂಕಟೇರ್ಶ, ಇನ್ಸ್ಪೆಕ್ಟರ್ ಕೆ. ಪ್ರವೀಣ್ಕುಮಾರ್, ಐಬಿಎಂನ ದಾಸ್, ಕೆ.ವಿ. ರಾವ್, ಪ್ರಮುಖ ಸಾಕ್ಷಿದಾರರಾಗಿ ಕಾರ್ಪೊರೇಷನ್ ಬ್ಯಾಂಕ್ನ ಎಂ.ಬಿ. ಹುಬ್ಬಳ್ಳಿ, ವಿಮಾ ಕಂಪನಿಯ ಓರ್ವ ಅಧಿಕಾರಿ, ಎನ್ಎಂಡಿಸಿಯ ಹಿರಿಯ ಭೂ ವಿಜ್ಞಾನಿ ಡಾ. ಮುಖರ್ಜಿ ಇದ್ದರು.
ಎಜಿಕೆ ಗಣಿ ಪ್ರದೇಶದಲ್ಲಿ ಇರುವ ಏಳು ಬೆಂಚ್ಗಳಲ್ಲಿ ತಲಾ 100 ಮೀಟರ್ ಅಂತರದಲ್ಲಿ ಒಂದು ಕಡೆಯಂತೆ ಒಟ್ಟು 28 ಸ್ಥಳಗಳಲ್ಲಿ ಕಬ್ಬಿಣದ ಅದಿರನ್ನು ತಂಡ ಸಂಗ್ರಹ ಮಾಡಿತು. ಎಜಿಕೆಯ ಮೈನ್ಸ್ ಮೇನೇಜರ್ಗಳಾದ ಲಕ್ಷ್ಮೀಪತಿ ಹಾಗೂ ಶಿವಕುಮಾರ್ ಹಾಜರಿದ್ದರು.
ಸಿಬಿಐ ತಂಡ 28 ಕಡೆಗಳಲ್ಲಿ ಸಂಗ್ರಹ ಮಾಡಿರುವ ಕಬ್ಬಿಣದ ಅದಿರಿನ ಗ್ರೇಡ್ನ ನಿಖರತೆಯನ್ನು ಪರೀಕ್ಷಿಸಲು ಓಎಂಸಿ ಅಧಿಕಾರಿಗಳು, ಸಿಬ್ಬಂದಿ ಸಮ್ಮುಖದಲ್ಲೇ ಕ್ರಷರ್ಗೆ ಹಾಕಿ ಗ್ರೇಡ್ ನಿಗದಿ ಮಾಡಲಾಗುತ್ತದೆ. ಇದೇ ರೀತಿಯಲ್ಲಿ ಗುರುವಾರ ಓಎಂಸಿ ಗಣಿ ಪ್ರದೇಶದಲ್ಲಿ ಅದಿರು ಪರೀಕ್ಷಿಸಲಾಗುತ್ತದೆ ಎಂದು ತಂಡ ತಿಳಿಸಿದೆ. ತನಿಖೆ 3 ದಿನಗಳ ಕಾಲ ನಡೆಯಲಿದೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications