ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯು.ಪಿ: ಅತ್ಯಾಚಾರ ಪ್ರತಿರೋಧಿಸಿದ್ದಕ್ಕೆ ಅಂಗ ಛೇದ

By Srinath
|
Google Oneindia Kannada News

Uttarpradesh gangrape
ಫತೇಪುರ, ಫೆ. 7: ಸಾಮೂಹಿಕ ಅತ್ಯಾಚಾರ ಯತ್ನವನ್ನು ಪ್ರತಿರೋಧಿಸಿದ ದಲಿತ ಬಾಲಕಿಯ ಕೈಕಾಲುಗಳು ಮತ್ತು ಮೂಗನ್ನು ದುರುಳರು ಕತ್ತರಿಸಿ ಹಾಕಿದ ದಾರುಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಶನಿವಾರ ಈ ಘಟನೆ ನಡೆದಿದ್ದು, ಬಾಲಕಿಯ ಕುಟುಂಬದ ವಿರುದ್ಧ ದ್ವೇಷ ಸಾಧನೆಗಾಗಿ ಹರಿಶಂಕರ್ ಎಂಬ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

"ದುಷ್ಕರ್ಮಿಗಳು ನನ್ನ ಮೇಲೆ ದೈಹಿಕ ಹಲ್ಲೆಗೆ ಮುಂದಾದರು. ಅದನ್ನು ಪ್ರತಿರೋಧಿಸಿ, ಓಡಿಹೋಗಲು ಪ್ರಯತ್ನಿಸಿದೆ. ಆದರೆ ಆಗಲಿಲ್ಲ. ಆಗ ಅವರು ನನ್ನ ಮೇಲೆ ಮುಗಿಬಿದ್ದರು. ಕುಡುಗೋಲಿನಿಂದ ಅಂಗಾಂಗಗಳನ್ನು ಕತ್ತರಿಸಿಹಾಕಿದರು' ಎಂದು ಬಾಧಿತಳು ಹೇಳಿದ್ದಾಳೆ.

ಚಿಕಿತ್ಸೆಗಾಗಿ ಬಾಲಕಿಯನ್ನು ಕಾನ್ಪುರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾಳೆ. ಆರೋಪಿಗಳ ಪೈಕಿ ಒಬ್ಬನನ್ನು ಬಂಧಿಸಲಾಗಿದ್ದು, ಇನ್ನೂ ಮೂವರು ಕಣ್ತಪ್ಪಿಸಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಇತ್ತೀಚೆಗಷ್ಟೇ ಆಡಳಿತಾರೂಢ ಪಕ್ಷದ ಶಾಸಕನೊಬ್ಬ ಮಹಿಳೆಯ ಮೇಲೆ ಅತ್ಯಾಚಾರವೆಸಗಿ, ಚುನಾವಣೆಯ ಹೊಸ್ತಿಲಲ್ಲಿರುವ ಮುಖ್ಯಮಂತ್ರಿ ಮಾಯಾವತಿಗೆ ಮುಜುಗರವನ್ನುಂಟು ಮಾಡಿದ್ದ. ಇದೀಗ ಮತ್ತೊಂದು ಅತ್ಯಾಚಾರ ಪ್ರಕರಣ ನಡೆದಿರುವುದು ಮಾಯಾವತಿಗೆ ನುಂಗಲಾರದ ತುತ್ತಾಗಿದೆ.

English summary
In Uttar Pradesh a Dalit girl fighting off some men who were allegedly trying to rape her paid a heavy price. The men allegedly chopped off her arms and legs. The incident took place in Fatehpur on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X