2ಜಿ ತರಂಗಗುಚ್ಛ ಹಗರಣದ ರಾಜಾ ಬಂಧನ

Former telecom minister A Raja arrested
ನವದೆಹಲಿ, ಫೆ. 02 : 2ಜಿ ತರಂಗಗುಚ್ಛ ಹಗರಣದ ಸರದಾರ ಮಾಜಿ ಕೇಂದ್ರ ಸಚಿವ ಎ ರಾಜಾ ಅವರನ್ನು ಬುಧವಾರ ಬೆಳಿಗ್ಗೆ ಸಿಬಿಐ ಬಂಧಿಸಿದೆ. ಇದೇ ವಾರದಲ್ಲಿ ಎರಡನೇ ಬಾರಿ ವಿಚಾರಣೆ ನಡೆಸಿದ ನಂತರ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಡಿಎಂಕೆ ಪಕ್ಷದ ಎ ರಾಜಾ ಅವರ ಸಹಾಯಕರಾಗಿದ್ದ ಮಾಜಿ ದೂರಸಂಪರ್ಕ ಕಾರ್ಯದರ್ಶಿ ಸಿದ್ದಾರ್ಥ ಬೆಹೂರಿಯಾ ಮತ್ತು ಆಪ್ತ ಕಾರ್ಯದರ್ಶಿ ಆರ್ ಕೆ ಚಂದೋಲಿಯಾ ಅವರನ್ನು ಕೂಡ ಸಿಬಿಐ ಬಂಧಿಸಿದೆ.

2ಜಿ ತರಂಗಗುಚ್ಛ ಹಂಚಿಕೆಯಲ್ಲಿ ನೀತಿ ಉಲ್ಲಂಘನೆ, ಕೆಲ ಅನರ್ಹ ಕಂಪನಿಗಳಿಗೆ ಲಾಭವಾಗುವಂತೆ ಮಾಡಿದ ಮತ್ತು ದುರ್ವರ್ತನೆ ಮಾಡಿದ ಆರೋಪಗಳನ್ನು ಹೊರಿಸಲಾಗಿದೆ. ರಾಜಾ ಅವರ ಸಹೋದರ ಎ ಕಲಿಯ ಪೆರುಮಾಳ್ ಮತ್ತು ಆತನ ಆಪ್ತ ಸಹಾಯಕನನ್ನು ಕೂಡ 22 ಸಾವಿರ ಕೋಟಿ ರು. ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಸಿಬಿಐ ವಿಚಾರಣೆ ನಡೆಸಿತು.

2008ರಲ್ಲಿಯೇ ಈ ಹಗರಣ ಬೆಳಕಿಗೆ ಬಂದಿದ್ದರೂ ಕಳೆದ ವರ್ಷದ ನವೆಂಬರ್ 14ರಂದು ಎ ರಾಜಾ ತಮ್ಮ ಸ್ಥಾನಕ್ಕೆ ಬಲವಂತವಾಗಿ ರಾಜೀನಾಮೆ ನೀಡಿದ್ದರು. ಕಳೆದ ಕೆಲ ವಾರಗಳಲ್ಲಿ ಅವರ ದೆಹಲಿ ಮತ್ತು ತಮಿಳುನಾಡಿನಲ್ಲಿನ ಕಚೇರಿ ಮತ್ತು ನಿವಾಸದ ಮೇಲೆ ದಾಳಿ ನಡೆಸಿ ಕಂಪ್ಯೂಟರ್ ಸೇರಿದಂತೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಹಗರಣದಿಂದಾಗಿ ದೇಶದ ಬೊಕ್ಕಸಕ್ಕೆ 1.76 ಲಕ್ಷ ಕೋಟಿಯಷ್ಟು ನಷ್ಟವಾಗಿದೆ. ನ್ಯಾ. ಶಿವರಾಜ್ ಪಾಟೀಲ್ ಅವರ ನೇತೃತ್ವದ ಆಯೋಗ ಕೂಡ ರಾಜಾ ಅವರನ್ನು ದೋಷಿಯನ್ನಾಗಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+