ಹಂಪಿ, ಸಂಶೋಧಕರ ಪಾಲಿನ ಬರಿದಾಗದ ಭಂಡಾರ

ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ ಉಪನಿರ್ದೇಶಕರ ಕಮಲಾಪುರದ ಕಚೇರಿಯ ಆವರಣದಲ್ಲಿ ಗುರುವಾರ ನಡೆದ ವಿಜಯ ಅಧ್ಯಯನ'ದ 16ನೇ ವಾರ್ಷಿಕ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಜಯನಗರದ ಬಗ್ಗೆ ಇಲ್ಲಿವರೆಗೆ ದೊರೆತ ಹೆಚ್ಚಿನ ಆಕರಗಳು ಆಳುವ ವರ್ಗದ ಬಗ್ಗೆಯೇ ಹೆಚ್ಚು ವಿಷಯಗಳನ್ನು ತಿಳಿಸಿವೆ. ಇನ್ನು ಮುಂದೆ ಅಕ್ಷರ ರೂಪದ ಆಕರಗಳ ಜೊತೆಗೆ ಮೌಖಿಕ ಆಕರಗಳನ್ನು ಮತ್ತು ರೂಢಿ ಮೂಲದ ಆಕರಗಳನ್ನು ಬಳಸಿಕೊಂಡು ಜನ ಇತಿಹಾಸವನ್ನು ತಿಳಿಯಬೇಕಾಗಿದೆ ಎಂದರು.
ವಿಜಯನಗರ ಸಾಮ್ರಾಜ್ಯ ಅಸ್ತಿತ್ವಕ್ಕೆ ಬರುವುದಕ್ಕೆ ಮೊದಲಿನ ಮತ್ತು ನಂತರದ ಸಣ್ಣ ಪುಟ್ಟ ಅರಸು ಮನೆತನಗಳ ಸಮಗ್ರ ಅಧ್ಯಯನ ನಡೆಯಬೇಕಿದೆ ಎಂದ ಅವರು, ಹಂಪಿಯ ಶೋಧ ಕಾರ್ಯ ನಿಂತ ನೀರಾಗಲೇ ಇಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಈಗಲೂ ಹಂಪಿಯಲ್ಲಿ ಸರ್ವೇಕ್ಷಣೆ, ಉತ್ಖನನ, ಶೋಧ-ಪರಿಶೋಧ ಕಾರ್ಯ ನಡೆಯುತ್ತಲೇ ಇದೆ ಎಂದರು.
ಹಂಪಿ ಉತ್ಸವ 2011 ಚಿತ್ರಪಟ
ಇದು ಸಂಶೋಧಕರ ಪಾಲಿಗೆ ಬರಿದಾಗದ ಭಂಡಾರ. ವಿಜಯನಗರದ ನೆಲದಲ್ಲಿ ನಿಧಿ ಶೋಧಕರಿಗೆ ಕೆಲಸವಿಲ್ಲ. ಇಲ್ಲಿ ಕೆಲಸ ಇರುವುದು ಸಂಶೋಧಕರಿಗೆ ಮಾತ್ರ. ನಿಧಿ ಶೋಧಕರು ಸ್ಮಾರಕಗಳನ್ನು ಹಾಳು ಮಾಡಿದರೆ, ಸಂಶೋಧಕರು ಸ್ಮಾರಕಗಳಿಗೆ ಜೀವ ತುಂಬುತ್ತಾರೆ ಎಂದು ಸಂಶೋಧನಾ ಮಹತ್ವವನ್ನು ಬಿಚ್ಚಿಟ್ಟರು.
ಸಣ್ಣ ನೀರಾವರಿ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜವಳಿ ಇಲಾಖೆಯ ಸಚಿವ ಗೋವಿಂದ ಎಂ. ಕಾರಜೋಳ ಅವರು ಕಾರ್ಯಕ್ರಮ ಉದ್ಘಾಟಿಸಿ, ಸಂಶೋಧಕರಿಗೆ ಹಂಪಿ ಅಕ್ಷಯ ಪಾತ್ರೆ ಇದ್ದಂತೆ. ಸುವರ್ಣ ಯುಗವೆಂದೇ ಖ್ಯಾತಿ ಪಡೆದಿದ್ದ ವಿಜಯನಗರ ಸಾಮ್ರಾಜ್ಯ ಸ್ಪೂರ್ತಿಯ ಸೆಲೆ ಆಗಿದ್ದು, ಇಲ್ಲಿಯ ಇತಿಹಾಶ ಬಗೆದಷ್ಟು ಹೊಸ ಹೊಸ ಮಾಹಿತಿ ನೀಡುತ್ತದೆ. ಪ್ರತಿ ಅಧ್ಯಯನದಲ್ಲೂ ಹೊಸತನ ಮೂಡುತ್ತದೆ ಎಂದರು.
ಶ್ರೀಮಂತ ಸಂಸ್ಕೃತಿಯ ಇತಿಹಾಸಕ್ಕೆ ಹೊಸ ಹೊಳಪು ನೀಡುವ ಕಾರ್ಯ ಆಗಬೇಕು. ಗತವೈಭವದ ವಿಜಯನಗರ ಇತಿಹಾಸದ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಸರ್ವೇಕ್ಷಣೆ, ಶೋಧನೆ ಹಾಗೂ ಉತ್ಕನನ ಕುರಿತು 15 ಗ್ರಂಥಗಳನ್ನು ಪ್ರಾಚ್ಯವಸ್ತು ಇಲಾಖೆ ಪ್ರಕಟಿಸಿದೆ ಎಂದು ಹೇಳಿದರು. ಸಚಿವರು ಇದೇ ಸಂದರ್ಭದಲ್ಲಿ ಪ್ರಾಚೀನ ನಾಣ್ಯಗಳ ಪ್ರದರ್ಶನವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿ ಶಾಸಕ ಆನಂದ ಸಿಂಗ್ ಅವರು, ಅನೇಕ ಸಂಶೋಧನೆಗಳಿಂದ ಹಂಪಿಯ ಗತವೈಭವದ ಹಲವು ವಿಚಾರಗಳು ಬೆಳಕಿಗೆ ಬಂದಿವೆ. ಈ ಬಗ್ಗೆ ನಿರಂತರವಾದ ಸಂಶೋಧನೆಗಳು ವಿಜಯ ನಗರದ ಇತಿಹಾಸದ ಮೇಲೆ ಬೆಳಕು ಚೆಲ್ಲಲಿದ್ದು, ಅದು ನಿರಂತರವಾಗಿ ನಡೆಯಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಮನು ಬಳಿಗಾರ್, 'ವಿಜಯನಗರ ಅಧ್ಯಯನ ಸಂಪುಟ - 15' ಗ್ರಂಥವನ್ನು ಬಿಡುಗಡೆ ಮಾಡಿದರು. ಮೈಸೂರು ಪ್ರಾಚ್ಯವಸ್ತು ಸಂಗ್ರಹಾಲಯಗಳ ನಿರ್ದೇಶನಾಲಯ ನಿರ್ದೇಶಕ ಡಾ: ಆರ್. ಗೋಪಾಲ್ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಡಾ: ಲ.ನಾ. ಸ್ವಾಮಿ ನಿರೂಪಿಸಿದರು. ಉಪನಿರ್ದೇಶಕಿ ಸುಲೋಚನಾ ಪೋತ್ನಿಸ್ ವಂದಿಸಿದರು. [ಹಂಪಿ ಉತ್ಸವ]
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications