ಹಂಪಿ, ಸಂಶೋಧಕರ ಪಾಲಿನ ಬರಿದಾಗದ ಭಂಡಾರ

ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ ಉಪನಿರ್ದೇಶಕರ ಕಮಲಾಪುರದ ಕಚೇರಿಯ ಆವರಣದಲ್ಲಿ ಗುರುವಾರ ನಡೆದ ವಿಜಯ ಅಧ್ಯಯನ'ದ 16ನೇ ವಾರ್ಷಿಕ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಜಯನಗರದ ಬಗ್ಗೆ ಇಲ್ಲಿವರೆಗೆ ದೊರೆತ ಹೆಚ್ಚಿನ ಆಕರಗಳು ಆಳುವ ವರ್ಗದ ಬಗ್ಗೆಯೇ ಹೆಚ್ಚು ವಿಷಯಗಳನ್ನು ತಿಳಿಸಿವೆ. ಇನ್ನು ಮುಂದೆ ಅಕ್ಷರ ರೂಪದ ಆಕರಗಳ ಜೊತೆಗೆ ಮೌಖಿಕ ಆಕರಗಳನ್ನು ಮತ್ತು ರೂಢಿ ಮೂಲದ ಆಕರಗಳನ್ನು ಬಳಸಿಕೊಂಡು ಜನ ಇತಿಹಾಸವನ್ನು ತಿಳಿಯಬೇಕಾಗಿದೆ ಎಂದರು.
ವಿಜಯನಗರ ಸಾಮ್ರಾಜ್ಯ ಅಸ್ತಿತ್ವಕ್ಕೆ ಬರುವುದಕ್ಕೆ ಮೊದಲಿನ ಮತ್ತು ನಂತರದ ಸಣ್ಣ ಪುಟ್ಟ ಅರಸು ಮನೆತನಗಳ ಸಮಗ್ರ ಅಧ್ಯಯನ ನಡೆಯಬೇಕಿದೆ ಎಂದ ಅವರು, ಹಂಪಿಯ ಶೋಧ ಕಾರ್ಯ ನಿಂತ ನೀರಾಗಲೇ ಇಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಈಗಲೂ ಹಂಪಿಯಲ್ಲಿ ಸರ್ವೇಕ್ಷಣೆ, ಉತ್ಖನನ, ಶೋಧ-ಪರಿಶೋಧ ಕಾರ್ಯ ನಡೆಯುತ್ತಲೇ ಇದೆ ಎಂದರು.
ಹಂಪಿ ಉತ್ಸವ 2011 ಚಿತ್ರಪಟ
ಇದು ಸಂಶೋಧಕರ ಪಾಲಿಗೆ ಬರಿದಾಗದ ಭಂಡಾರ. ವಿಜಯನಗರದ ನೆಲದಲ್ಲಿ ನಿಧಿ ಶೋಧಕರಿಗೆ ಕೆಲಸವಿಲ್ಲ. ಇಲ್ಲಿ ಕೆಲಸ ಇರುವುದು ಸಂಶೋಧಕರಿಗೆ ಮಾತ್ರ. ನಿಧಿ ಶೋಧಕರು ಸ್ಮಾರಕಗಳನ್ನು ಹಾಳು ಮಾಡಿದರೆ, ಸಂಶೋಧಕರು ಸ್ಮಾರಕಗಳಿಗೆ ಜೀವ ತುಂಬುತ್ತಾರೆ ಎಂದು ಸಂಶೋಧನಾ ಮಹತ್ವವನ್ನು ಬಿಚ್ಚಿಟ್ಟರು.
ಸಣ್ಣ ನೀರಾವರಿ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜವಳಿ ಇಲಾಖೆಯ ಸಚಿವ ಗೋವಿಂದ ಎಂ. ಕಾರಜೋಳ ಅವರು ಕಾರ್ಯಕ್ರಮ ಉದ್ಘಾಟಿಸಿ, ಸಂಶೋಧಕರಿಗೆ ಹಂಪಿ ಅಕ್ಷಯ ಪಾತ್ರೆ ಇದ್ದಂತೆ. ಸುವರ್ಣ ಯುಗವೆಂದೇ ಖ್ಯಾತಿ ಪಡೆದಿದ್ದ ವಿಜಯನಗರ ಸಾಮ್ರಾಜ್ಯ ಸ್ಪೂರ್ತಿಯ ಸೆಲೆ ಆಗಿದ್ದು, ಇಲ್ಲಿಯ ಇತಿಹಾಶ ಬಗೆದಷ್ಟು ಹೊಸ ಹೊಸ ಮಾಹಿತಿ ನೀಡುತ್ತದೆ. ಪ್ರತಿ ಅಧ್ಯಯನದಲ್ಲೂ ಹೊಸತನ ಮೂಡುತ್ತದೆ ಎಂದರು.
ಶ್ರೀಮಂತ ಸಂಸ್ಕೃತಿಯ ಇತಿಹಾಸಕ್ಕೆ ಹೊಸ ಹೊಳಪು ನೀಡುವ ಕಾರ್ಯ ಆಗಬೇಕು. ಗತವೈಭವದ ವಿಜಯನಗರ ಇತಿಹಾಸದ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಸರ್ವೇಕ್ಷಣೆ, ಶೋಧನೆ ಹಾಗೂ ಉತ್ಕನನ ಕುರಿತು 15 ಗ್ರಂಥಗಳನ್ನು ಪ್ರಾಚ್ಯವಸ್ತು ಇಲಾಖೆ ಪ್ರಕಟಿಸಿದೆ ಎಂದು ಹೇಳಿದರು. ಸಚಿವರು ಇದೇ ಸಂದರ್ಭದಲ್ಲಿ ಪ್ರಾಚೀನ ನಾಣ್ಯಗಳ ಪ್ರದರ್ಶನವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿ ಶಾಸಕ ಆನಂದ ಸಿಂಗ್ ಅವರು, ಅನೇಕ ಸಂಶೋಧನೆಗಳಿಂದ ಹಂಪಿಯ ಗತವೈಭವದ ಹಲವು ವಿಚಾರಗಳು ಬೆಳಕಿಗೆ ಬಂದಿವೆ. ಈ ಬಗ್ಗೆ ನಿರಂತರವಾದ ಸಂಶೋಧನೆಗಳು ವಿಜಯ ನಗರದ ಇತಿಹಾಸದ ಮೇಲೆ ಬೆಳಕು ಚೆಲ್ಲಲಿದ್ದು, ಅದು ನಿರಂತರವಾಗಿ ನಡೆಯಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಮನು ಬಳಿಗಾರ್, 'ವಿಜಯನಗರ ಅಧ್ಯಯನ ಸಂಪುಟ - 15' ಗ್ರಂಥವನ್ನು ಬಿಡುಗಡೆ ಮಾಡಿದರು. ಮೈಸೂರು ಪ್ರಾಚ್ಯವಸ್ತು ಸಂಗ್ರಹಾಲಯಗಳ ನಿರ್ದೇಶನಾಲಯ ನಿರ್ದೇಶಕ ಡಾ: ಆರ್. ಗೋಪಾಲ್ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಡಾ: ಲ.ನಾ. ಸ್ವಾಮಿ ನಿರೂಪಿಸಿದರು. ಉಪನಿರ್ದೇಶಕಿ ಸುಲೋಚನಾ ಪೋತ್ನಿಸ್ ವಂದಿಸಿದರು. [ಹಂಪಿ ಉತ್ಸವ]
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications