ಮಥುರಾ ಬೃಂದಾವನದಲ್ಲಿ ಕಾಮಿಸ್ವಾಮಿ ಬಂಧನ!

ರಾಜೇಂದ್ರ ಎಂಬ ಮೂಲ ಹೆಸರಿನ ಕಾಮಿಸ್ವಾಮಿ ಭಾಗವತಾಚಾರ್ಯ ಖ್ಯಾತಿ ಪ್ರವಚನಕಾರ ಹಾಗೂ ಶಿಲ್ಪಿಯೂ ಆಗಿದ್ದಾನೆ. ವಿದೇಶಿ ಭಕ್ತರಿಗಾಗಿ ಅಶ್ಲೀಲ ಚಿತ್ರಗಳನ್ನು ನಿರ್ಮಿಸುತ್ತಿದ್ದ. ವಿದೇಶಿ ಭಕ್ತರು ಈ ಚಿತ್ರಗಳನ್ನು ವೆಬ್ ಸೈಟ್ ಗಳಲ್ಲಿ ಪ್ರಕಟಿಸಲು ನೆರವಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕಾಮಿಸ್ವಾಮಿ ವಿರುದ್ಧ ಭಾರತೀಯ ದಂಡ ಸಂಹಿತೆ(ಐಪಿಸಿ)377 ಮತ್ತು ಐಟಿ ಕಾಯ್ದೆ 67ಬಿ ಕಲಂ ಅನ್ವಯ ದೂರು ದಾಖಲಿಸಿಕೊಳ್ಳಲಾಗಿದೆ.
ನಾನೊಬ್ಬ ಕಲಾವಿದ. ಪತ್ನಿಯನ್ನೇ ರೂಪದರ್ಶಿಯನ್ನಾಗಿ ಮಾಡಿಕೊಂಡ ಚಿತ್ರಗಳನ್ನು ಬಿಡಿಸಿದ್ದೇನೆ. ಹಾಗೆಯೇ ಅಶ್ಲೀಲ ಚಿತ್ರಗಳು ಮತ್ತು ದೃಶ್ಯ ತುಣುಕುಗಳನ್ನು ಚಿತ್ರೀಕರಿಸಿದ್ದೇನೆ. ಇದನ್ನು ಮಾಡಿದ್ದು ನನ್ನ ವೈಯಕ್ತಿಕ ಬಳಕೆಗಾಗಿ. ಆದರೆ, ನಂತರ ಅವುಗಳನ್ನು ಕಳವು ಮಾಡಿದ ಕೆಲವರು ದುರುಪಯೋಗಪಡೆಸಿಕೊಂಡಿದ್ದಾರೆ ಎಂದು ಕಾಮಿಸ್ವಾಮಿ ಭಾಗವತಾಚಾರ್ಯ ಅಲಿಯಾಸ್ ರಾಜೇಂದ್ರ ಪೊಲೀಸರ ಎದುರಿಗೆ ಹೇಳಿದ್ದಾರೆ.












Click it and Unblock the Notifications