ಮಥುರಾ ಬೃಂದಾವನದಲ್ಲಿ ಕಾಮಿಸ್ವಾಮಿ ಬಂಧನ!
ಮಥುರಾ,
ಜ. 19 : ಬಿಡದಿಯ ಧ್ಯಾನಪೀಠಂನ ಸ್ವಾಮಿ ನಿತ್ಯಾನಂದ ರಾಸಲೀಲೆ ಪ್ರಕರಣ ಮರೆಯುವ ಮುನ್ನವೇ ಮತ್ತೊಬ್ಬ ಸ್ವಾಮಿ ಹೆಸರಿನ ಕಾಮಿಸ್ವಾಮಿ ಪೊಲೀಸರ ಕೈಗೆ ಬಿದ್ದಿದ್ದಾನೆ. ದೇವರ ಹೆಸರಿನಲ್ಲಿ ಭಕ್ತರನ್ನು ಬಳಸಿಕೊಂಡು ಅಶ್ಲೀಲ ಚಿತ್ರಗಳನ್ನು ತಯಾರಿಸುತ್ತಿದ್ದ ಎಂಬ ಆರೋಪದ ಹಿನ್ನೆಲೆಯಲ್ಲಿ ಭಾಗವತಾಚಾರ್ಯ ಎಂಬ ಕಳ್ಳಸ್ವಾಮಿ ಸೋಮವಾರ ಬಂಧಿಸಿರುವ ಪೊಲೀಸರು ಹಲವು ಅಶ್ಲೀಲ ಸೀಡಿ ಮತ್ತು ಚಿತ್ರೀಕರಣಕ್ಕೆ ಬಳಸುತ್ತಿದ್ದ ಕ್ಯಾಮೆರಾಗಳನ್ನು ವಶಪಡಿಸಿಕೊಂಡಿದ್ದಾರೆ. id="toptextpromo">ರಾಜೇಂದ್ರ
ಎಂಬ ಮೂಲ ಹೆಸರಿನ ಕಾಮಿಸ್ವಾಮಿ ಭಾಗವತಾಚಾರ್ಯ ಖ್ಯಾತಿ ಪ್ರವಚನಕಾರ ಹಾಗೂ ಶಿಲ್ಪಿಯೂ ಆಗಿದ್ದಾನೆ. ವಿದೇಶಿ ಭಕ್ತರಿಗಾಗಿ ಅಶ್ಲೀಲ ಚಿತ್ರಗಳನ್ನು ನಿರ್ಮಿಸುತ್ತಿದ್ದ. ವಿದೇಶಿ ಭಕ್ತರು ಈ ಚಿತ್ರಗಳನ್ನು ವೆಬ್ ಸೈಟ್ ಗಳಲ್ಲಿ ಪ್ರಕಟಿಸಲು ನೆರವಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕಾಮಿಸ್ವಾಮಿ ವಿರುದ್ಧ ಭಾರತೀಯ ದಂಡ ಸಂಹಿತೆ(ಐಪಿಸಿ)377 ಮತ್ತು ಐಟಿ ಕಾಯ್ದೆ 67ಬಿ ಕಲಂ ಅನ್ವಯ ದೂರು ದಾಖಲಿಸಿಕೊಳ್ಳಲಾಗಿದೆ. id='are-slot-1' class='oiad oi-axt oiadv'> id='top-searched-articles'>ನಾನೊಬ್ಬ
ಕಲಾವಿದ. ಪತ್ನಿಯನ್ನೇ ರೂಪದರ್ಶಿಯನ್ನಾಗಿ ಮಾಡಿಕೊಂಡ ಚಿತ್ರಗಳನ್ನು ಬಿಡಿಸಿದ್ದೇನೆ. ಹಾಗೆಯೇ ಅಶ್ಲೀಲ ಚಿತ್ರಗಳು ಮತ್ತು ದೃಶ್ಯ ತುಣುಕುಗಳನ್ನು ಚಿತ್ರೀಕರಿಸಿದ್ದೇನೆ. ಇದನ್ನು ಮಾಡಿದ್ದು ನನ್ನ ವೈಯಕ್ತಿಕ ಬಳಕೆಗಾಗಿ. ಆದರೆ, ನಂತರ ಅವುಗಳನ್ನು ಕಳವು ಮಾಡಿದ ಕೆಲವರು ದುರುಪಯೋಗಪಡೆಸಿಕೊಂಡಿದ್ದಾರೆ ಎಂದು ಕಾಮಿಸ್ವಾಮಿ ಭಾಗವತಾಚಾರ್ಯ ಅಲಿಯಾಸ್ ರಾಜೇಂದ್ರ ಪೊಲೀಸರ ಎದುರಿಗೆ ಹೇಳಿದ್ದಾರೆ.











Click it and Unblock the Notifications