ವಿಕಿಪೀಡಿಯಗೆ 10; ಸಂಭ್ರಮದಿಂದ ಆಚರಣೆ

ಸಾರ್ವಜನಿಕ ವಲಯಕ್ಕೆ ವಿಕಿಪೀಡಿಯ ಎಂದರೇನು ಅದರ ಮಹತ್ವ, ಕಾರ್ಯ ನಿರ್ವಹಣೆ, ಹೆಚ್ಚು ಜನ ಪಾಲ್ಗೊಳ್ಳುವ ಬಗ್ಗೆ ಸಂಜೆ 6 ಕ್ಕೆ ಪ್ರತ್ಯೇಕ ಸಮಯ ಮೀಸಲಿರಿಸಲಾಗಿದ್ದರೂ, ಬೆಳಗ್ಗಿನ ಮೊದಲ ಸಭೆಯಿಂದಲೇ ಹಲವು ಜನರು(ಸಾರ್ವಜನಿಕ ವಲಯದ) ಉತ್ಸಾಹದಿಂದ ಪಾಲ್ಗೊಂಡಿದ್ದು ಸಂತಸದ ಸಂಗತಿ. ಹತ್ತನೆಯ ವಾರ್ಷಿಕೋತ್ಸವವನ್ನು ಭಾರತೀಯ ವಿಜ್ಞಾನ ಮಂದಿರದ ನ್ಯಾಷನಲ್ ಇನ್ಸ್ ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ನ ಸಭಾಂಗಣಗಳಲ್ಲಿ ಆಯೋಜಿಸಲಾಗಿತ್ತು.
ಮೊದಲ ಭಾಗದಲ್ಲಿ ವಿವಿಧ ಭಾಷೆಗಳ ವಿಕಿ ಎಡಿಟರ್ ಗಳು ತಮ್ಮಮ್ಮ ಭಾಷಾ ವಿಕಿಪೀಡಿಯದ ಸ್ಥಿತಿ ಗತಿಗಳು, ತೊಂದರೆಗಳು, ಮುಂದಿನ ಯೋಜನೆಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು. ಮೊದಲಿಗೆ ಬೆಂಗಾಲಿ ವಿಕಿಪೀಡಿಯದ ಬಗ್ಗೆ ಢಾಕಾದಿಂದ ಮೆಸ್ಸೆಂಜರ್ ಮೂಲಕ ಬಿಲಾಯತ್ ಅವರು ಪ್ರಾತ್ಯಾಕ್ಷಿಕೆ ನೀಡಿದರು. ನಂತರ ಕನ್ನಡ ವಿಕಿಪೀಡಿಯದ ಬಗ್ಗೆ ಹರಿ ಪ್ರಸಾದ್ ನಾಡಿಗ್, ಮಲೆಯಾಳಂ ಬಗ್ಗೆ ಶಿಜು ಅಲೆಕ್ಸ್, ತೆಲುಗು ಬಗ್ಗೆ ಅರ್ಜುನ ರಾವ್, ಸಂಸ್ಕೃತದ ಬಗ್ಗೆ ಅರುಣ್ ರಾಮ್ ಹಾಗೂ ಇಂಗ್ಲೀಷ್ ಬಗ್ಗೆ ಟೀನು ಚೆರಿಯನ್ ಬದಲಿಗೆ ಶ್ರೀಕಾಂತ್ ಮಾತನಾಡಿದರು.
ಗ್ಯಾಲರಿ : ವಿಕಿಪೀಡಿಯ 10ರ ಸಂಭ್ರಮಾಚರಣೆ
ಪ್ರಶ್ನೆಗಳ ಸುರಿಮಳೆ: ಅಮೆರಿಕದ ವಿಕಿಪೀಡಿಯ ಫೌಂಡೇಷನ್ ನ ಸಕ್ರಿಯ ಸದಸ್ಯೆ ಪಿ. ಮೋಕಾ ಇಂದಿನ ಸಭೆಗೆ ಆಗಮಿಸಿ, ಸದಸ್ಯರ ಹಲವಾರು ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರಿಸಿದರು. ಕೆಲ ಪ್ರಶ್ನೆಗಳು ಇಂತಿದ್ದವು:
ವಿಕಿಪೀಡಿಯಗೆ ಕಾನೂನಿನ ಸಹಾಯ ಬೇಡವೆ? ಆಕ್ಷೇಪಾರ್ಹ ಲೇಖನಗಳನ್ನು ಹಾಕಿ ಕೋಮು ಗಲಭೆ ಅಥವಾ ಯಾವುದೇ ವ್ಯಕ್ತಿಯ ಬಗ್ಗೆ ಅನಗತ್ಯ ನಿಂದನೆ ಮಾಡಿದರೆ ಏನು ಮಾಡುತ್ತೀರಾ? ಲೇಖನಗಳನ್ನು ಸಂಪಾದಿಸುವುದೇ ಹೆಚ್ಚಿನ ಸಮಯ ತಿನ್ನುತ್ತಿಲ್ಲವೇ?..ಇತ್ಯಾದಿ..
ಮೋಕಾ: ವಿಕಿಪೀಡಿಯ ಒಂದು ಸಾಂಸ್ಕೃತಿಕ ಸಮುದಾಯವಾಗಿ ಆರಂಭವಾಗಿದ್ದು, ಈಗಲೂ ಹಾಗೇ ಬೆಳೆಯುತ್ತಿದೆ. ಕೆಟ್ಟ ಉದ್ದೇಶದಿಂದ ಹಾಕುವ ಲೇಖನಗಳು ವಿಕಿಪೀಡಿಯದಲ್ಲಿ ತುಂಬಾ ಕಡಿಮೆ ಸಂಖ್ಯೆಯಲ್ಲಿ ಕಾಣಬಹುದು. ಕಂಡರೂ ಎಡಿಟ್ ಮಾಡಲಾಗುತ್ತದೆ ಅಥವಾ ಅಂಥಾ ಅನಗತ್ಯ ಚರ್ಚಾ ಪುಟಗಳಿಗೆ ನಿರ್ಬಂಧ ಹೇರಲಾಗುತ್ತದೆ. ಆದರೂ, ನಿಮ್ಮ ಸಲಹೆಯನ್ನು ಪರಿಗಣಿಸಲಾಗಿದ್ದು, ವಿಕಿಪೀಡಿಯ ಹಾಗೂ ಕಾನೂನು ಸಂಬಂಧದ ಬಗ್ಗೆ ಮುಂಬರುವ ದಿನಗಳಲ್ಲಿ ಚರ್ಚಿಸಲಾಗುವುದು ಎಂದರು.
ಮಧ್ಯಾಹ್ನದ ಸಭೆಗಳು: ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡದಲ್ಲಿ ಲೇಖನಗಳ ಸಂಖ್ಯೆ ಕಡಿಮೆ ಏಕೆ ಎಂದು ನಿರ್ವಾಹಕರಲ್ಲಿ ಒಬ್ಬರಾದ ಹರಿಪ್ರಸಾದ್ ಅವರನ್ನು ಪ್ರಶ್ನಿಸಿದಾಗ, ಇತರೆ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರವೇ ಅಧಿಕೃತ ಮಾಹಿತಿಯನ್ನು ವಿಕಿಪೀಡಿಯಗೆ ನೀಡುತ್ತಿದೆ. ತಮಿಳುನಾಡು ಸರ್ಕಾರದಿಂದ ಸಾವಿರಾರು ಲೇಖನಗಳು ವಿಕಿ ಪುಟ ಸೇರಿವೆ. ಇಲ್ಲಿ ಸರ್ಕಾರದ ಜೊತೆಗೆ ಸಾರ್ವಜನಿಕರ ಪಾಲ್ಗೊಳ್ಳುವಿಕೆಯೂ ಅಗತ್ಯ ಎಂದರು.
ಮಾಹಿತಿ ಸೇರಿಸುವ ವ್ಯಕ್ತಿಯ ಸಂಪೂರ್ಣ ವಿವರ ಸಿಗುವುದರಿಂದ ಮಾಹಿತಿ ಸಂಗ್ರಹ, ನಿರ್ವಹಣೆ ಹಾಗೂ ಸಂಕಲನ ಮಾಡಲು ಅನುಕೂಲವಾಗುತ್ತಿದೆ. ಇತರೆ ಭಾಷೆಗಳಲ್ಲಿದ್ದಂತೆ botಗಳ ಸಮರ್ಪಕ ಬಳಕೆ, ಬ್ಲಾಗರ್ಸ್ ಗಳ ಕೊಡುಗೆ, ಸರ್ಕಾರದ ಮಾಹಿತಿ ಬೆಂಬಲ ದೊರೆತರೆ ವಿಕಿಪೀಡಿಯ ಕನ್ನಡವನ್ನು ಎಲ್ಲಾ ಸ್ತರಗಳಿಗೂ ಪರಿಚಯಿಸುವ ಕಾರ್ಯ ಸುಲಭವಾಗುತ್ತದೆ ಎಂದು ನಾಡಿಗ್ ವಿವರಿಸಿದರು. [ಸಂಪೂರ್ಣ ವಿವರಗಳಿಗೆ ನಿರೀಕ್ಷಿಸಿ...]
ತಂತ್ರಜ್ಞರಿಗೆ, ಛಾಯಾಗ್ರಾಹಕರಿಗೆ, ವಿವಿಧ ಭಾಷಾ ಆಸಕ್ತರಿಗೆ ಪ್ರತ್ಯೇಕ ಸಭೆಗಳನ್ನು ನಡೆಸಲಾಯಿತು. ಸಂಜೆ ಸಾರ್ವಜನಿಕರಿಗಾಗಿ ಸಂಪೂರ್ಣ ಸಮಯವನ್ನು ಮೀಸಲಿಡಲಾಗಿತ್ತು. ಮೈಸೂರಿನಲ್ಲಿ ನಾಳೆ (ಜ.16) ವಿಕಿಪೀಡಿಯ ಹತ್ತನೇ ವಾರ್ಷಿಕೋತ್ಸವ ಆಚರಿಸಲಾಗುವುದು ಎಂದು ಹರಿ ಹೇಳಿದರು. [ಬೆಂಗಳೂರು]
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications