ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಗುವಿನ ಕೈಕಾಲುಗಳನ್ನು ತಿಂದ ಬೀದಿ ನಾಯಿಗಳು
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಹತ್ತಿರದ ಬಾಗಲೂರು ಪ್ರದೇಶದ ಇಟ್ಟಿಗೆ ಕಾರ್ಖಾನೆ ಕಾರ್ಮಿಕ ಒರಿಸ್ಸಾದ ಸುಖದೇವ್ ಮತ್ತು ಕೈಕೇಯಿ ದಂಪತಿಗಳ ಮಗ ಪ್ರಶಾಂತ್ ಬೀದಿ ನಾಯಿಗಳ ಅಬ್ಬರಕ್ಕೆ ಬಲಿಯಾದ ನತದೃಷ್ಟ. ಬಾಗಲೂರು ಸುತ್ತಮುತ್ತ ಹಂದಿ ಮತ್ತು ಮೀನು ಸಾಗಾಣಿಕೆಗೆ ತರುವ ಕೋಳಿ ವ್ಯಾಜ್ಯ ತಿನ್ನಲು ಬರುವ ನಾಯಿಗಳು ಮಗುವನ್ನು ಆಹಾರವಾಗಿಸಿಕೊಂಡಿವೆ.
ಬಾಗಲೂರಿನಲ್ಲಿರುವ ಇಟ್ಟಿಗೆ ಕಾರ್ಖಾನೆ ಬಳಿ ಗುಡಿಸಲಲ್ಲಿ ಸುಖದೇವ್ ವಾಸವಾಗಿದ್ದು, ಅವರಿಗೆ ಆರು ಮಕ್ಕಳಿದ್ದಾರೆ. ಕಾರ್ಖಾನೆ ಬಳಿ ವಾಸವಾಗಿರುವ ಕಾರ್ಮಿಕರು ರಾತ್ರಿ ಮಾಂಸದೂಟ ಮಾಡಿ ಉಳಿದ ಮಾಂಸದ ತುಂಡಗಳನ್ನು ಗುಡಿಸಲಿನ ಪಕ್ಕದಲ್ಲಿ ಎಸೆದಿದ್ದರು. ಬೀಡಾಡಿ ನಾಯಿಗಳು ಮಾಂಸದ ತುಂಡಗಳನ್ನು ತಿನ್ನಲು ಬಂದು ಮಗುವನ್ನು ಎಳೆದೊಯ್ದು ತಿಂದು ಹಾಕಿವೆ ಎಂದು ಪೊಲೀಸರು ತಿಳಿಸಿದ್ದಾರೆ.(ಬೀದಿ ನಾಯಿ)
English summary
An 18-month-old male child was fatally attacked by stray dogs in Bagalur on the outskirts of the Bangalore in the early hours.
Story first published: Thursday, January 13, 2011, 12:29 [IST]