ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಷಯಪಾತ್ರೆ ಕ್ಲೀನ್ ಚಿಟ್ ಗೆ ಇಸ್ಕಾನ್ ಹರ್ಷ

By Mrutyunjaya Kalmat
|
Google Oneindia Kannada News

ISKCON
ಬೆಂಗಳೂರು, ಜ. 13 : ಇಸ್ಕಾನ್‌ ನ ಅಕ್ಷಯಪಾತ್ರೆ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಆರೋಪ ಸತ್ಯಕ್ಕೆ ದೂರವಾದ ಸಂಗತಿ ಎಂದು ವಿಧಾನಸಭೆ ಸಮಿತಿ ತನಿಖೆ ನೀಡಿರುವ ವರದಿಗೆ ಇಸ್ಕಾನ್‌ ಅಧ್ಯಕ್ಷ ಮಧುಪಂಡಿತ ದಾಸ್‌ ಹರ್ಷ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಸೇರಿದಂತೆ ಕೆಲ ಕಾಂಗ್ರೆಸ್ ನಾಯಕರು ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಈ ಎಲ್ಲ ಆರೋಪಗಳನ್ನು ಸಮಿತಿ ತಿರಸ್ಕರಿಸಿರುವುದು ಸಂಸ್ಥೆಗೆ ಹೆಮ್ಮೆ ತಂದಿದೆ ಎಂದು ದಾಸ್ ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು. ಅಕ್ಷಯಪಾತ್ರಾ ಯೋಜನೆಯ ಬಗ್ಗೆ ಸಾರ್ವಜನಿಕರಾಗಲಿ, ಶಾಲಾ ಶಿಕ್ಷಕರಾಗಲಿ ದೂರು ನೀಡಲಿಲ್ಲ. ಕೇವಲ ಕಾಂಗ್ರಸ್ ಪಕ್ಷದ ನಾಯಕರು ದೂರಿರುವುದು ವ್ಯಾಪಕ ಪ್ರಚಾರ ಪಡೆಯಿತು. ಇದೀಗ ಸದನ ಸಮಿತಿಯಿಂದ ಎಲ್ಲವೂ ಬಹಿರಂಗವಾಗಿದೆ ಎಂದು ಹೇಳಿದರು.

ಡಿಕೆ ಶಿವಕುಮಾರ್ ಮಾಡಿದ ಎಲ್ಲಾ ಆರೋಪಗಳ ಬಗ್ಗೆ ಸದನ ಸಮಿತಿ ಕೂಲಂಕುಷವಾಗಿ ತನಿಖೆ ನಡೆಸಿ ವಿವರವಾದ ವರದಿ ನೀಡಿದೆ. ಈ ವರದಿಯನ್ನು ಶಿವಕುಮಾರ್ ಒಪ್ಪಿಕೊಳ್ಳಬೇಕು ಎಂದು ದಾಸ್‌ ಆಗ್ರಹಿಸಿದರು.(ಇಸ್ಕಾನ್)

English summary
ISKCON chief Madhu Pandit Dasa has welcomed house committe report over Akshay patra programme. The house committee of the Legislative Assembly has given a clean chit to ISKCON by stating there was no ulterior motive nor was it legally wrong in the organisation collecting donations from public.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X