ಬಳ್ಳಾರಿಯಲ್ಲಿ ಸಾರ್ವಜನಿಕ ಮೊಹರಂ ಆಚರಣೆ ಇಲ್ಲ

ಬಳ್ಳಾರಿ ಜಿಲ್ಲೆಯ 35 ಗ್ರಾಮಗಳಲ್ಲಿ ಮೊಹರಂ ಸಾರ್ವಜನಿಕ ಆಚರಣೆ ನಿಷೇಧ ಹೇರಲಾಗಿದೆ. ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕೊಳಗಲ್ಲು, ವಣೆನೂರು, ಜಾಲಿಬೆಂಚಿ, ಡಿ ಕಗ್ಗಲ್ಲು, ಬಿಡಿ ಹಳ್ಳಿ, ಕೆ.ಕೆ. ಹಾಳ್ ಮತ್ತು ಸಿಂಧುವಾಳ, ಕುರುಗೋಡು ಪೊಲೀಸ್ ಠಾಣೆ ವ್ಯಾಪ್ತಿಯ ಶಂಕರಸಿಂಗ್ ಕ್ಯಾಂಪ್, ಹೊಸನೆಲ್ಲುಡಿ, ಯರಂಗಳಿಗಿ ಮತ್ತು ನೆಲ್ಲುಡಿಕೊಟ್ಟಾಲು.
ತೆಕ್ಕಲಕೋಟೆ ಠಾಣೆ ವ್ಯಾಪ್ತಿಯ ತೆಕ್ಕಲಕೋಟೆ ಪಟ್ಟಣ, ಹಳೆಕೋಟೆ, ಉಪ್ಪಾರಹೊಸಹಳ್ಳಿ, ಉಡೇಗೋಳ, ಸಿರಿಗೇರಿ, ಶಾನವಾಸಪುರ, ದರೂರು, ಬೂದೂಗುಪ್ಪ, ಉತ್ತನೂರು, ಎಚ್. ಹೊಸಹಳ್ಳಿ, ಬೈರಾಪುರ, ಕೂರಿಗನೂರು, ಮಾಟೇಸೂಗೂರು, ಗೋಸ್ಬಾಳ್ ಮತ್ತು ಮುದ್ದಟನೂರು. ಸಿರುಗುಪ್ಪ ಪೊಲೀಸ್ಠಾಣೆ ವ್ಯಾಪ್ತಿಯ ನಾಡಂಗ, ಕೆ. ಸೂಗೂರು, ಬಂಡ್ರಾಳ್, ದೇಶನೂರು, ಮುದೇನೂರು, ಕೆ. ಬೆಳಗಲ್ಲು ಮತ್ತು ಹಿರೇಹಾಳ್, ಕೂಡ್ಲಿಗಿ ಠಾಣೆ ವ್ಯಾಪ್ತಿಯ ಹನ್ಸಿ ಗ್ರಾಮಗಳಲ್ಲಿ ಮೊಹರಂ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸುವುದನ್ನು ನಿಷೇಧಿಸಲಾಗಿದೆ.
ಈ ಗ್ರಾಮಗಳಲ್ಲಿ ಸಾರ್ವಜನಿಕರು ಗುಂಪಾಗಿ ಸೇರುವುದು ಮತ್ತು ಮೆರವಣಿಗೆ ನಡೆಸುವಂತಿಲ್ಲ ಎಂದು ಡಿಸಿ ಶಿವಪ್ಪ ಹೇಳಿದ್ದಾರೆ. ಅಶುರ ಎಂದು ಕರೆಯಲ್ಪಡುವ ಹತ್ತನೇ ಮೊಹರಂ ಅನ್ನು ಇಂದು ಮುಸ್ಲಿಮರು(ಷಿಯಾ) ಎಲ್ಲೆಡೆ ಆಚರಿಸುತ್ತಿದ್ದಾರೆ. ಪ್ರವಾದಿ ಮಹಮ್ಮದರ ಮೊಮ್ಮಗ ಇಮಾಮ್ ಹುಸ್ಸೇನ್ ಬಲಿದಾನದ ಸಂಕೇತವಾಗಿ ಈ ಹಬ್ಬ ಆಚರಿಸಲಾಗುತ್ತಿದೆ.












Click it and Unblock the Notifications