ಮೈಸೂರಿನ ಕಲಾ ಮಂದಿರಕ್ಕೆ ಬೆಳ್ಳಿ ಹಬ್ಬದ ಸಂಭ್ರಮ

ಆ ದಿನಗಳಲ್ಲಿ ಕಲಾ ಪ್ರೇಮಿಗಳು ಯಾವುದಾದರು ಕಾರ್ಯಕ್ರಮಗಳನ್ನು ನಡೆಸಬೇಕೆಂದರೆ ಪುರಭವನವೋ ಅಥವಾ ಜಗನ್ಮೋಹನ ಅರಮನೆಯನ್ನು ಆಶ್ರಯಿಸಬೇಕಿತ್ತು. ಇಂತಹ ಸಂದರ್ಭಗಳಲ್ಲಿ ಮೈಸೂರಿಗೊಂದು ಕಲಾಮಂದಿರದ ಅವಶ್ಯಕತೆಯಿದ್ದು, ಅದನ್ನು ಪೂರೈಸುವ ಸಲುವಾಗಿ 1985 ಡಿಸೆಂಬರ್ 15ರಂದು ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆಯವರು ಉದ್ಘಾಟಿಸಿದ್ದರು. ಈ ಕಲಾಮಂದಿರವು ಮೈಸೂರಿನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದ ಸಂಕೇತವಾಗಿ ನಿರ್ಮಿಸಲಾಗಿದೆ.
ಅಲ್ಲಿಂದ ಇಲ್ಲಿವರೆಗೆ ಈ ಕಲಾಮಂದಿರದಲ್ಲಿ ವಿವಿಧ ಕಾರ್ಯಕ್ರಮಗಳು ನಡೆದಿವೆ. ನಡೆಯುತ್ತಲೇ ಇವೆ. ಅಂದು ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕಲಾಮಂದಿರ ದಕ್ಷಿಣ ಭಾರತದಲ್ಲಿಯೇ ಅತ್ಯುತ್ತಮ ಕಲಾಮಂದಿರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಈಗಾಗಲೇ ಮೈಸೂರು ವ್ಯಾಪ್ತಿಯ ಸಾವಿರಾರು ಕಲಾವಿದರು ತಮ್ಮ ಚಟುವಟಿಕೆಗಳನ್ನು ನಡೆಸುವುದರ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದು, ಕಲಾ ಪ್ರೇಮಿಗಳಿಗೊಂದು ರಂಗಮಂದಿರವಾಗಿದೆ ಎಂದರೆ ತಪ್ಪಾಗಲಾರದು. ಇದೀಗ ಈ ಕಲಾಮಂದಿರವನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕಾಮಗಾರಿಗಳು ಭರದಿಂದ ಸಾಗುತ್ತಿವೆ.












Click it and Unblock the Notifications