ಜಿಪಂ ಚುನಾವಣೆ : ಶಿವಮೂಗ್ಗ ಜಿಲ್ಲಾ ಅಭ್ಯರ್ಥಿಗಳ ಪಟ್ಟಿ

ಇಂದು ಬಿಜೆಪಿ ಕಾರ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಹಾಗೂ ಬಿಜೆಪಿಯ ಜಿಲ್ಲಾಧ್ಯಕ್ಷ ಆರ್ ಕೆ ಸಿದ್ದರಾಮಣ್ಣ ಮಾತನಾಡಿ, ಜಿಪಂ ಹಾಗೂ ತಾಪಂ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಬಿಜೆಪಿಯು ಕಳೆದ ಎರಡು ದಿನಗಳಿಂದ ಪ್ರಾರಂಭಿಸಿದೆ. ಇಡೀ ರಾಜ್ಯದಲ್ಲಿ 30 ಜಿಲ್ಲೆಗಳ ಪೈಕಿ ಕನಿಷ್ಠ 22 ಜಿಲ್ಲೆಗಳಲ್ಲಿ ಬಿಜೆಪಿ ಜಿಪಂನಲ್ಲಿ ಅಧಿಕಾರ ಪಡೆಯಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿಯ ರಾಜ್ಯಾಧ್ಯಕ್ಷ ಕೆ ಎಸ್ ಈಶ್ವರಪ್ಪ ಸೂಚಿಸಿದ್ದಾರೆ ಎಂದರು.
ಹಾಗೆಯೇ, ಜಿಲ್ಲೆಯಲ್ಲಿಯೂ ಜಿಪಂನ 31 ಸ್ಥಾನಗಳಿಗೆ ಸೂಕ್ತ ಅಭ್ಯರ್ಥಿಯ ಹುಡುಕಾಟ ಒಂದು ಹಂತದಲ್ಲಿ ಪೂರ್ಣಗೊಂಡಿದ್ದು, 31 ಸ್ಥಾನಗಳಲ್ಲಿ ಕನಿಷ್ಠ 25 ಸ್ಥಾನ ಗೆಲ್ಲುವಂತಹ ವಾತಾವರಣ ನಿರ್ಮಾಣವಾಗಿದೆ. ಜೊತೆಗೆ ಸೂಕ್ತ ಅಭ್ಯರ್ಥಿಯನ್ನು ಗುರುತಿಸಲಾಗಿದೆ ಎಂದರು. ಈಗಾಗಲೇ ಜಿಪಂಗೆ 23 ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದ್ದು, ಉಳಿದ 8 ಸ್ಥಾನಗಳಿಗೆ ಇನ್ನೊಂದು ಸುತ್ತಿನ ಸಮಾಲೋಚನೆ ನಡೆಸಿ, ಇಂದು ಸಂಜೆಯೊಳಗೆ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮ ಗೊಳಿಸಲಾಗುವುದು ಎಂಬ ಮಾಹಿತಿಯನ್ನು ನೀಡಿದರು.
ಹಾಗೆಯೇ, ತಾಲ್ಲೂಕು ಪಂಚಾಯತ್ ಚುನಾವಣೆ ಯಲ್ಲಿ ಸೂಕ್ತ ಅಭ್ಯರ್ಥಿಗಳ ಹುಡುಕಾಟ ನಡೆದಿದೆ. ಜೊತೆಗೆ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಗಳು ಅತಿಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಜಿಪಂ ಅಭ್ಯರ್ಥಿಗಳ ಪಟ್ಟಿ
ತೀರ್ಥಹಳ್ಳಿ ತಾಲ್ಲೂಕಿನ ಆರಗ ಕ್ಷೇತ್ರಕ್ಕೆ ಬ್ಯಾಡನಬೈಲು ಬಿಎಸ್ ಯಲ್ಲಪ್ಪ(ಎಸ್.ಸಿ. ಮೀಸಲು), ಕುಪ್ಪಳ್ಳಿ ಜಿಪಂ ಕ್ಷೇತ್ರಕ್ಕೆ ಮಾಜಿ ಜಿಪಂ ಸದಸ್ಯ ಅಶೋಕ್ಮೂರ್ತಿ (ಸಾಮಾನ್ಯ), ಲಿಂಗಾಪುರ ಕ್ಷೇತ್ರಕ್ಕೆ ಗೀತಾ(ಸಾಮಾನ್ಯ ಮಹಿಳೆ), ಮೇಗರವಳ್ಳಿ ಕ್ಷೇತ್ರಕ್ಕೆ ಮಾಜಿ ಜಿಪಂ ಸದಸ್ಯ ಬಿ ಲಕ್ಷ್ಮಣ್ (ಬಿಸಿ ಎಂ-ಎ), ಹೊಸನಗರ ತಾಲ್ಲೂಕಿನ ಹೊಸನಗರ ಕ್ಷೇತ್ರಕ್ಕೆ ವಜ್ರೇಶ್ವರಿ (ಬಿಸಿಎಂ-ಬಿ ಮಹಿಳೆ), ನಗರ ಕ್ಷೇತ್ರಕ್ಕೆ ಶುಭ(ಸಾಮಾನ್ಯ ಮಹಿಳೆ), ರಿಪ್ಪನ್ ಪೇಟೆ ಕ್ಷೇತ್ರಕ್ಕೆ ದಿನೇಶ್ ಬಂಡಿ (ಸಾಮಾನ್ಯ), ಸಾಗರ ತಾಲ್ಲೂಕಿನ ಆನಂದಪುರ ಕ್ಷೇತ್ರಕ್ಕೆ ಮಾಜಿ ಜಿಪಂ ಸದಸ್ಯ ರವಿ ಕುಗ್ವೆ (ಬಿಸಿಎಂ-ಎ), ಆವಿನಹಳ್ಳೀ ಕ್ಷೇತ್ರಕ್ಕೆ ಭಾಗ್ಯ(ಎಸ್ ಸಿ ಮಹಿಳೆ), ಕೆಳದಿ ಕ್ಷೇತ್ರಕ್ಕೆ ವೀಣಾ ಬೆಳೆಯೂರು(ಸಾಮಾನ್ಯ ಮಹಿಳೆ).
ಸೊರಬ ತಾಲ್ಲೂಕಿನ ಆನವಟ್ಟಿ ಕ್ಷೇತ್ರಕ್ಕೆ ಗೀತಾ (ಸಾಮಾನ್ಯ ಮಹಿಳೆ), ಜಡೆ ಕ್ಷೇತ್ರಕ್ಕೆ ಅರುಣಾ (ಎಸ್ ಸಿ ಮಹಿಳೆ), ತತ್ತೂರು ಕ್ಷೇತ್ರಕ್ಕೆ ಕೋಮ ಲಾ(ಬಿಸಿಎಂ-ಎ), ಚಂದ್ರಗುತ್ತಿ ಕ್ಷೇತ್ರಕ್ಕೆ ಗುರುಕುಮಾರ್ ಪಾಟೀಲ್ (ಬಿಸಿ ಎಂ-ಬಿ), ಉಳವಿ ಕ್ಷೇತ್ರಕ್ಕೆ ಉಣವಳ್ಳಿ ಗಂಗಾಧರಪ್ಪ(ಸಾಮಾನ್ಯ), ಶಿಕಾರಿಪುರ ತಾಲ್ಲೂಕಿನ ಈಸೂರು
ಕ್ಷೇತ್ರಕ್ಕೆ ಸುರೇಶ್(ಬಿಸಿಎಂ-ಎ), ಹೊಸೂರು ಕ್ಷೇತ್ರಕ್ಕೆ ಶಾಂತಮ್ಮ(ಸಾಮಾನ್ಯ ಮಹಿಳೆ), ತೊಗರ್ಸಿ ಕ್ಷೇತ್ರಕ್ಕೆ ಡಿ ರುದ್ರಪ್ಪ ದಾನೇರ(ಸಾಮಾನ್ಯ), ಕಪ್ಪನಹಳ್ಳಿ ಕ್ಷೇತ್ರಕ್ಕೆ ಬಂಗಾರಿ ನಾಯ್ಕ (ಎಸ್.ಸಿ), ಸುಣ್ಣದಕೊಪ್ಪ ಕ್ಷೇತ್ರಕ್ಕೆ ಹೆಚ್ ಈಶ್ವರಪ್ಪ (ಸಾಮಾನ್ಯ).
ಭದ್ರಾವತಿ ತಾಲ್ಲೂಕಿನ ಕೂಡ್ಲಿಗೆರೆ ಕ್ಷೇತ್ರಕ್ಕೆ ಶಶಿಕಲಾ(ಎಸ್ ಸಿ ಮಹಿಳೆ), ಶಿವಮೊಗ್ಗ ತಾಲ್ಲೂಕಿನ ಹಾರ್ನಹಳ್ಳಿ ಕ್ಷೇತ್ರಕ್ಕೆ ರೇಣುಕಮ್ಮ(ಎಸ್ ಟಿ ಮಹಿಳೆ), ಹಾಗೂ ಕುಂಸಿ ಕ್ಷೇತ್ರಕ್ಕೆ ಪ್ರೇಮ(ಬಿಸಿಎಂ-ಎ ಮಹಿಳೆ) ರವರನ್ನು ಆಯ್ಕೆ ಮಾಡಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಶಾಸಕ ಕೆ ಜಿ ಕುಮಾರಸ್ವಾಮಿ, ಮುಖಂಡರಾದ ಜ್ಯೋತಿಪ್ರಕಾಶ್, ಚನ್ನಬಸಪ್ಪ, ಗಿರೀಶ್ ಪಟೇಲ್, ದತ್ತಾತ್ರಿ, ನಟ ರಾಜ್, ಡಿ ಎಸ್ ಅರುಣ್, ಮಧುಸೂಧನ ಉಪಸ್ಥಿತರಿದ್ದರು.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications