ರೆಡ್ಡಿ ಸೋದರರ ಅಕ್ರಮ ಗಣಿಗಾರಿಕೆ ಅವ್ಯಾಹತ: ಗಣೇಶ್

ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣಿಗಾರಿಕೆ ನಡೆಸಲು ಬಳಸುವ ಭಾರೀ ವಾಹನಗಳಿಗೆ ಆಯಾ ಸರ್ಕಾರದ ಮೂಲಕ ಪರವಾನಿಗೆ ಪಡೆಯಬೇಕು. ಅಲ್ಲದೇ, ಮೈನ್ಸ್ ಸೇಪ್ಟಿ, ಇನ್ನಿತರೆ ಇಲಾಖೆಗಳಿಗೂ ಈ ಎಲ್ಲಾ ವಾಹನಗಳ ಮಾಹಿತಿಯನ್ನು ಅಧಿಕೃತವಾಗಿಯೇ ಸಲ್ಲಿಸಬೇಕು. ಆದರೆ, ಈ ಎಲ್ಲಾ ವಾಹನಗಳನ್ನು ಅನಧಿಕೃತವಾಗಿಯೇ ಬಳಕೆ ಮಾಡಲಾಗಿದೆ ಎಂದು ಅವರು ಆರೋಪಿಸಿದರು.
ಅಷ್ಟೇ ಅಲ್ಲ, ಮೇಲ್ಕಾಣಿಸಿದ ಕಂಪನಿಗಳು ಕರ್ನಾಟಕದ ಕಬ್ಬಿಣದ ಅದಿರನ್ನು ಆಂಧ್ರ ಸರ್ಕಾರದ ಪರ್ಮಿಟ್ಗಳನ್ನು ಬಳಕೆ ಮಾಡುವ ಮೂಲಕ ವಿದೇಶಗಳಿಗೆ ರಪ್ತು ಮಾಡಲು ವಿವಿಧ ಬಂದರುಗಳಿಗೆ ರವಾನೆ ಮಾಡಿದ್ದಾರೆ. ಈ ಮೂಲಕ ಕೋಟ್ಯಾಂತರ ರುಪಾಯಿಗಳ ಅಕ್ರಮ ಹಣ ಗಳಿಸಿದ್ದಾರೆ. ಈ ಹಣದ ಮೂಲಕ ಕರ್ನಾಟಕದ ರಾಜಕೀಯದಲ್ಲಿ ಪ್ರಭಾವಿಗಳಾಗಿ ರೂಪುಗೊಂಡಿದ್ದಾರೆ ಎಂದು ಹೇಳಿದ್ದಾರೆ.












Click it and Unblock the Notifications