ಇನ್ನೆಷ್ಟು ದಿನ ಬದುಕಿರುತ್ತೇನೋ ನಾ ಅರಿಯೆ: ಎಚ್ಡಿಕೆ

ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಕೀಳುಮಟ್ಟದ ರಾಜಕಾರಣ ನಡೆಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಹಕಾರ ನೀಡಬೇಕೆಂದು ಕೆಲ ಮಠಾಧೀಶರು ಹೇಳುತ್ತಿದ್ದಾರೆ. ಇಂಥ ಹೇಳಿಕೆಯಿಂದ ನನ್ನ ಮನಸಿಗೆ ತೀವ್ರ ನೋವಾಗಿದೆ ಎಂದು ನೊಂದು ನುಡಿದಿದ್ದಾರೆ.
ಎಂಟು ಸಚಿವರ ರಾಜೀನಾಮೆ ಪಡೆಯುವ ಹೀನ ಕೆಲಸ ಮಾಡಿದ ಸಂದರ್ಭದಲ್ಲಿ ಮಠಾಧೀಶರು ದನಿ ಎತ್ತಲಿಲ್ಲ. ನಾನು ಯಾವುದೇ ಜಾತಿಗೆ ಸೀಮಿತವಾಗಿ ಕೆಲಸ ಮಾಡಿಲ್ಲವೆಂಬುದು ವೀರಶೈವ ಸಮಾಜಕ್ಕೆ ಗೊತ್ತಿದೆ. ರಾಜ್ಯದ ಬಡ ಜನರ ಕಣ್ಣೀರು ಒರೆಸುವ ಸಿಎಂ ಬೇಕೋ? ಅಥವಾ ಜಾತಿವಾದಿ ಸಿಎಂ ಬೇಕೋ ಎಂದು ಮಠಾಧೀಶರು ತೀರ್ಮಾನಿಸಲಿ ಎಂದು ಕುಮಾರಸ್ವಾಮಿ ಮರ್ಮಾಮಿಕವಾಗಿ ನುಡಿದ್ದಾರೆ.











Click it and Unblock the Notifications