ಕೇಂದ್ರಕ್ಕೆ ಬೆಂಬಲ: ಎಚ್ಡಿಕೆ, ಜಯಲಲಿತಾ ಘೋಷಣೆ

ರಾಜಾ ವಿರುದ್ಧ ಕ್ರಮ ಕೈಗೊಂಡರೆ ಡಿಎಂಕೆ ಸರ್ಕಾರಕ್ಕೆ ನೀಡಿರುವ ಬೆಂಬಲ ಹಿಂತೆಗೆದುಕೊಳ್ಳಬಹುದು, ಆಗ ಮಧ್ಯಂತರ ಚುನಾವಣೆ ಎದುರಿಸಬೇಕಾಗುತ್ತದೆ ಎಂಬ ಭೀತಿಯಿಂದ ರಾಜಾ ಅವರನ್ನು ಸಂಪುಟದಿಂದ ಕೈಬಿಡಲು ಪ್ರಧಾನಿ ಮುಂದಾದರೆ, ಎಐಎಡಿಎಂಕೆ ಬೆಂಬಲ ನೀಡಲು ಸಿದ್ಧವಾಗಿದೆ.
ಈ ನಡುವೆ ದೇವೇಗೌಡ ಸೇರಿದಂತೆ ಮೂರು ಸಂಸದರನ್ನುಳ್ಳ ಜೆಡಿಎಸ್ ಕೂಡಾ ಯುಪಿಎಗೆ ಬೆಂಬಲ ನೀಡಲು ಸಿದ್ಧವಾಗಿ ನಿಂತಿದೆ. 2008ರಲ್ಲಿ ಯುಪಿಎ ಮಂಡಿಸಿದ ಅಣ್ವಸ್ತ್ರ ಕಾಯಿದೆ ವಿರುದ್ಧ ಮತ ಹಾಕಿದ್ದ ಜೆಡಿಎಸ್ ಈಗ ಬದಲಾದ ರಾಜಕೀಯ ಚಿತ್ರಣಕ್ಕೆ ಹೊಂದಿಕೊಂಡು ತನ್ನ ನಿಲುವು ಬದಲಿಸಿಕೊಂಡಿದೆ. ಕೇಂದ್ರದಲ್ಲಿ ಸಚಿವ ಸ್ಥಾನ ಆಕಾಂಕ್ಷಿಯಾಗಿರುವ ಕುಮಾರಸ್ವಾಮಿ ಹಲವು ಬಾರಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications