ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ ಬಸ್‌ಗಳ ಮೇಲೆ ದೇವರ ಚಿತ್ರ ನಿಷೇಧ

By Rajendra
|
Google Oneindia Kannada News

Lord Ayyappa temple at Sabarimala
ತಿರುವನಂತಪುರ, ಆ. 27 : ಯಾತ್ರಾ ಸ್ಥಳಗಳಿಗೆ ಸಂಚರಿಸುವ ಕೇರಳ ರಸ್ತೆ ಸಾರಿಗೆ ಸಂಸ್ಥೆ ಬಸ್ ಗಳ ಮೇಲೆ ದೇವರ ಚಿತ್ರ ಅಥವಾ ಧಾರ್ಮಿಕ ಸಂಕೇತಗಳ ಪ್ರದರ್ಶನವನ್ನು ನಿಷೇಧಿಸಿ ಕೇರಳ ಸರಕಾರ ಆದೇಶ ಹೊರಡಿಸಿದೆ. ಶಬರಿಮಲೈ ಯಾತ್ರೆಯನ್ನು ಗುರಿಯಾಗಿರಿಸಿಕೊಂಡು ಕೇರಳ ಸರಕಾರ ಈ ಆದೇಶ ಹೊರಡಿಸಿದೆ ಎಂದು ಹಿಂದೂ ಸಂಘಟನೆಗಳು ಪ್ರತಿಭಟನೆಗೆ ಇಳಿದಿವೆ.

ರಾಜ್ಯಾದ್ಯಂತ ಎಲ್ಲಾ ರಸ್ತೆ ಸಾರಿಗೆ ಘಟಕಗಳನ್ನು ತಲುಪಿರುವ ಈ ಆದೇಶದಲ್ಲಿ ಯಾತ್ರಾ ಸ್ಥಳಗಳಿಗೆ ತೆರಳುವ ಬಸ್ ಗಳ ಮೇಲೆ ಧಾರ್ಮಿಕ ವಚನಗಳು, ಚಿಹ್ನೆ ಮತ್ತು ಧ್ವಜಗಳನ್ನು ಪ್ರದರ್ಶಿಸುವ ಪದ್ಧತಿಯನ್ನು ಈ ಕೂಡಲೇ ನಿಲ್ಲಿಸುವಂತೆ ಘಟಕಗಳ ಮುಖ್ಯಸ್ಥರಿಗೆ ಆದೇಶ ನೀಡಿದೆ. ಶಬರಿಮಲೈ ಸೇರಿದಂತೆ ಪ್ರಸಿದ್ಧ ಯಾತ್ರಾ ಕೇಂದ್ರಗಳಿಗೆ ಸಂಚರಿಸುವ ಬಸ್ ಗಳ ಮೇಲೆ ಸ್ವಾಮಿಯೇ ಶರಣಂ ಅಯ್ಯಪ್ಪ ಮುಂತಾದ ಶಬ್ದಗಳನ್ನು ಪ್ರದರ್ಶಿಸಬಾರದೆಂದು ಸುತ್ತೋಲೆಯಲ್ಲಿ ನಿರ್ಲಿಪ್ತ ನಿರ್ದೇಶನ ಸರಕಾರ ನೀಡಿದೆ ಎನ್ನಲಾಗಿದೆ.

ಮುಂದಿನ ತಿಂಗಳು ಯಾತ್ರಾ ಋತು ಆರಂಭಗೊಳ್ಳಲಿದ್ದು ಶಬರಿಮಲೈ ಕ್ಷೇತ್ರದ ವಿರುದ್ಧವೇ ಈ ಆದೇಶ ಹೊರಡಿಸಿದೆಂದು ವಿಶ್ವ ಹಿಂದೂ ಪರಿಷತ್ ಆಪಾದಿಸಿದೆ. ಈ ಕ್ಷೇತ್ರಕ್ಕೆ ತೆರಳುವಾಗ ಅಯ್ಯಪ್ಪ ಸ್ವಾಮಿಯ ಭಾವಚಿತ್ರ ಮತ್ತು ಸ್ಪೀಕರ್ ಗಳನ್ನು ಅಳವಡಿಸುವುದು ಬಹಳ ಹಿಂದಿನಿಂದ ಬಂದ ಪದ್ಧತಿ. ಇದು ಬೇರೆ ಬೇರೆ ರಾಜ್ಯಗಳಿಂದ ಬರುವ ಲಕ್ಷಾಂತರ ಭಕ್ತರುಗಳಿಗೆ ಶಬರಿಮಲೈ ಹೋಗುವ ಬಸ್ ಗಳನ್ನು ಗುರುತಿಸಲು ಸಹಾಯವಾಗುತ್ತದೆ. ಕೇರಳ ಸರಕಾರ ಈ ಸುತ್ತೋಲೆ ಹಿಂದೆ ತೆಗೆದುಕೊಳ್ಳುವ ತನಕ ನಾವು ಪ್ರತಿಭಟನೆ ನಡೆಸುತ್ತೇವೆ ಎಂದು ವಿಎಚ್ ಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X