ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಿಜೆಪಿ ಸರ್ಕಾರಕ್ಕೆ ಬಹುಮತ: ಯಡಿಯೂರಪ್ಪಗೆ ಜಯ
ಬಿಜೆಪಿ ಸರ್ಕಾರಕ್ಕೆ ಬಹುಮತ ಸಾಬೀತಾಗಿದ್ದು ಸರಕಾರದ ಪರವಾಗಿ 106 ಮತಗಳು ಹಾಗೂ ವಿರುದ್ಧ ಶೂನ್ಯ ಮತಗಳು ಬಿದ್ದಿವೆ ಎಂದು ಬೋಪಯ್ಯ ಘೊಷಿಸಿದ್ದಾರೆ. ಈಗ ಚೆಂಡು ರಾಜ್ಯಪಾಲರ ಅಂಗಳ ಪ್ರವೇಶಿಸಿದೆ. ರಾಜ್ಯಪಾಲರ ನಿರ್ಣಯವೇ ಈಗ ಅಂತಿಮ.
ಹದಿನಾರು ಮಂದಿ ಅತೃಪ್ತ ಬಿಜೆಪಿ ಹಾಗೂ ಸ್ವತಂತ್ರ ಶಾಸಕರ ಅನರ್ಹತೆಯ ನಡುವೆಯೇ ವಿಶ್ವಾಸಮತ ಕಲಾಪ ನಡೆದಿದ್ದು, ಸದ್ಯಕ್ಕೆ ಯಡಿಯೂರಪ್ಪ ಸರಕಾರ ಬೀಸುವ ದೊಣ್ಣೆಯಿಂದ ಪಾರಾದಂತಾಗಿದೆ. ರಾಜ್ಯಪಾಲರು, ವಿಧಾನಮಂಡಲ ಅಮಾನತಿಗೇನಾದರೂ ಕ್ರಮ ಕೈಗೊಳ್ಳುವರೇ, ರಾಷ್ಟ್ರಪತಿಗೆ, ಕೇಂದ್ರಕ್ಕೆ ವರದಿ ಸಲ್ಲಿಸುವರೇ ಎಂಬುದು ಮತ್ತು ಮುಂದೇನು ಕ್ರಮ ಕೈಗೊಳ್ಳುತ್ತಾರೆ ಎಂಬುದು ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS
Comments
ವಿಶ್ವಾಸಮತ ಯಡಿಯೂರಪ್ಪ ವಿಧಾನಸೌಧ ಬಹುಮತ ಸಭಾಧ್ಯಕ್ಷ ಭಿನ್ನಮತ ಬಿಜೆಪಿ ಕರ್ನಾಟಕ ಸರಕಾರ confidence motion yediyurappa vidhana soudha speaker kg bopaiah dissidence bjp kannada news ಕೆಜಿ ಬೋಪಯ್ಯ
Story first published: Monday, October 11, 2010, 11:45 [IST]