ಅ.22 : ರಜಾದಿನ ಪಟ್ಟಿಗೆ ಹೊಸಸೇರ್ಪಡೆ

ಸಾಮಾನ್ಯವಾಗಿ ಹಬ್ಬ ಹರಿದಿನಗಳ ನಿಮಿತ್ತ ಕೊಡಲಾಗುವ ರಜೆಗಳ ಸಂಖ್ಯೆ 18ರಿಂದ 20 ದಿನಕ್ಕೆ ಆಸುಪಾಸಿನಲ್ಲಿರುತ್ತದೆ. ಕೆಲವು ಹಬ್ಬಗಳು ಭಾನುವಾರ ಬಿದ್ದರೆ ಅಯ್ಯೋ ದೇವ್ರೆ ಒಂದು ರಜೆ ಕೈತಪ್ಪಿ ಹೋಯಿತಲ್ಲಾ ಎಂದು ಮೈ ಪರಚಿಕೊಳ್ಳುವಂತಾಗುತ್ತದೆ. ಇದರೊಂದಿಗೆ ಯಥಾಪ್ರಕಾರ ಸಿಎಲ್, ಪಿಎಲ್ ಮುಂತಾದ ರಜೆಗಳು ಸೇರಿದರೆ 141 ದಿನ ಸರಕಾರಿ ನೌಕರರು ಡಬ್ಬಿಯಲ್ಲಿ ಊಟಕಟ್ಟಿಕೊಂಡು, ಬಿಟಿಎಸ್ ಬಸ್ ಕ್ಯಾಚ್ ಮಾಡಿಕೊಂಡು ಅಷ್ಟು ದೂರ ಹೋಗಿ ವಾಪಸ್ಸು ಮನೆಗೆ ಬರುವ ತೊಂದರೆ ಇರುವುದಿಲ್ಲ.
ನಮ್ಮಲ್ಲಿ ಧಾರ್ಮಿಕ ಹಬ್ಬದ ರಜೆಗಳ ಜತೆಗೆ, ನಾಡ ಹಬ್ಬಗಳಿವೆ. ಮಹಾನ್ ನೇತಾರರನ್ನು, ಮಹಾನ್ ಚೇತನಗಳನ್ನು ಸ್ಮರಿಕೊಳ್ಳಲಿಕ್ಕೆಂದೇ ರಜೆಗಳಿವೆ. ಈ ರಜಾದಿನಗಳ ಲೆಕ್ಕವನ್ನು ಗಂಭೀರವಾಗಿ ಪರಿಗಣಿಸಿದರೆ ದಿಗಿಲಾಗುತ್ತದೆ. ಈ ದೇಶದಲ್ಲಿ ಎಲ್ಲರೂ ಮಹಾನ್ ವ್ಯಕ್ತಿಗಳಾಗಿ ಆನಂತರ ಅವರೆಲ್ಲ ಸತ್ತು ಸ್ವರ್ಗಕ್ಕೆ ಹೋದರೆ ಮುಂದೊಂದು ದಿನ 365 ದಿನಗಳೂ ರಜಾ ದಿನಗಳಾಗುವ ಸಂಭವವಿದೆ. ಸುಮ್ನೆ ಹೇಳ್ದೆ. ಸ್ವಲ್ಪ ಸೀರಿಯಸ್ ತಮಾಷಿ.
ಸರಿ. ಅಕ್ಟೋಬರ್ ತಿಂಗಳಲ್ಲಿ ಹಾಗೂ ಈ ವರ್ಷದಲ್ಲಿ ಕಾಣಿಸಿಕೊಳ್ಳುವ ಇತರ ರಜಾದಿನಗಳತ್ತ ಈಗ ಕಣ್ಣು ಹಾಯಿಸೋಣ.
ಅಕ್ಟೋಬರ್ 16, ಶನಿವಾರ : ಆಯುಧ ಪೂಜೆ, ಮಹಾನವಮಿ
ಅಕ್ಟೋಬರ್ 17, ಭಾನುವಾರ : ವಿಜಯದಶಮಿ
ಅಕ್ಟೋಬರ್ 22, ಶುಕ್ರವಾರ : ವಾಲ್ಮೀಕಿ ಜಯಂತಿ
ನವೆಂಬರ್ 01, ಸೋಮವಾರ : ಕನ್ನಡ ರಾಜ್ಯೋತ್ಸವ
ನವೆಂಬರ್ 05, ಶುಕ್ರವಾರ : ನರಕ ಚತುರ್ದಶಿ
ನವೆಂಬರ್ 06, ಶನಿವಾರ : ಬಲಿಪಾಡ್ಯಮಿ
ನವೆಂಬರ್ 17, ಬುಧವಾರ : ಬಕ್ರೀದ್
ನವಂಬರ್ 24, ಬುಧವಾರ : ಕನಕದಾಸ ಜಯಂತಿ
ಡಿಸೆಂಬರ್ 17, ಶುಕ್ರವಾರ : ಮೊಹರಂ
ಡಿಸೆಂಬರ್ 25, ಶನಿವಾರ : ಕ್ರಿಸ್ಮಸ್
ಸೆಲ್ ಫೋನಿನಲ್ಲಿ ಕನ್ನಡ ಓದುವ ಸಂಭ್ರಮ | ದಟ್ಸ್ ಕನ್ನಡ ಹೂವಿನಂಗಡಿ 24/7 | ಕನ್ನಡ ಸಿನಿಮಾ SMS | ಕನ್ನಡ ಸುದ್ದಿಗಳ SMS
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications