ಎರಡು ಕಣ್ಣು ಸಾಲದು ಕೊಲ್ಲೂರು ನವರಾತ್ರಿ ನೋಡಲು

ಶುಕ್ರವಾರ 'ಕಲಶ ಸ್ಥಾಪನೆ' ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಅಕ್ಟೋಬರ್ 16ರಂದು ಬೆಳಗ್ಗೆ 11.30ಕ್ಕೆ 'ಚಂಡಿಕಾ ಯಾಗ' ನಡೆಯಲಿದೆ. ಅಂದು ಸಂಜೆ 6.05ಕ್ಕೆ ಸರಿಯಾಗಿ ರಥೋತ್ಸವವನ್ನು ಕಣ್ತುಂಬಿಕೊಳ್ಳಬಹುದು. ಉತ್ಸವ ವಿಗ್ರಹವನ್ನು ದೇವಲಾಯಕ್ಕೆ ಪ್ರದಕ್ಷಿಣೆ ಹಾಕಿಸಿದ ಬಳಿಕ 'ಪೂರ್ಣ ಕುಂಭಾಭಿಷೇಕ' ನಡೆಯಲಿದೆ.
ಅಕ್ಟೋಬರ್ 17ರ ವಿಜಯ ದಶಮಿಯಂದು ಸರಸ್ವತಿ ಮಂದಿರದಲ್ಲಿ "ವಿದ್ಯಾರಂಭ" ಸಾಂಪ್ರಾದಾಯಿಕ ಆಚರಣೆ ಮುಂಜಾನೆ 4ಕ್ಕೆ ನೆರವೇರಲಿದೆ. ಮಕ್ಕಳ ವಿದ್ಯಾಭಾಸದ ದ್ಯೋತಕವಾಗಿ 'ವಿದ್ಯಾರಂಭ' ಆಚರಣೆ ನಡೆಯಲಿದೆ. ಹಾಗೆಯೇ ಮತ್ತೊಂದು ಆಚರಣೆ 'ನವನ ಪ್ರಾಶನ' ಮಧ್ಯಾಹ್ನ 12.30ಕ್ಕೆ ನಡೆಯಲಿದೆ.
'ವಿದ್ಯಾರಂಭ ' ಆಚರಣೆ ವೇಳೆ ಮಕ್ಕಳ ನಾಲಿಗೆ ಮೇಲೆ 'ಓಂ'ಕಾರವನ್ನು ಅರಿಶಿಣ ಕೊಂಬಿನಲ್ಲಿ ಬರೆಯಲಾಗುತ್ತದೆ. (ಸರಸ್ವತಿ ಮಂದಿರದಲ್ಲಿ ಶ್ರೀ ಆದಿ ಶಂಕರಾಚಾರ್ಯರು ಸೌಂದರ್ಯ ಲಹರಿಯನ್ನು ಇಲ್ಲಿಯೇ ರಚಿಸಿದ್ದು ಎಂಬ ಪ್ರತೀತಿ ಇದೆ). 'ವಿದ್ಯಾರಂಭ' ಸಾಂಪ್ರಾದಾಯಿಕ ಉತ್ಸವದಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾ ದೀಕ್ಷೆ ಪಡೆಯಲಿದ್ದಾರೆ.
ಕೊಲ್ಲೂರಿನಿಂದ 1.5 ಕಿ.ಮೀ ದೂರದಲ್ಲಿರುವ ಶುಕ್ಲ ತೀರ್ಥಕ್ಕೆ ಮೂಕಾಂಬಿಕಾ ಉತ್ಸವ ವಿಗ್ರಹವನ್ನು ಹೊತ್ತು ತಂದು ಬಳಿಕ ಮರಳುತ್ತಾರೆ. ಈ ವಿದ್ಯಾ ಉತ್ಸವವು ಸಂಜೆ 5.30ಕ್ಕೆ ನಡೆಯಲಿದೆ. ಒಂಭತ್ತು ದಿನಗಳ ಕಾಲ ನಡೆಯುವ ಮಹಾ ನವರಾತ್ರಿ ಉತ್ಸವದಲ್ಲಿ 'ಮಹಾದೀಪಾರಧನೆ' ಮತ್ತು 'ಸುಹಾಸಿನಿ ಪೂಜೆ'ಯು ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಒಂಭತ್ತು ದಿನಗಳ ಕಾಲವು ದೇವಿಗೆ ವಿವಿಧ ಅಲಂಕಾರಗಳನ್ನು ಮಾಡಲಾಗುತ್ತದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications