ಎರಡು ಕಣ್ಣು ಸಾಲದು ಕೊಲ್ಲೂರು ನವರಾತ್ರಿ ನೋಡಲು

ಶುಕ್ರವಾರ 'ಕಲಶ ಸ್ಥಾಪನೆ' ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಅಕ್ಟೋಬರ್ 16ರಂದು ಬೆಳಗ್ಗೆ 11.30ಕ್ಕೆ 'ಚಂಡಿಕಾ ಯಾಗ' ನಡೆಯಲಿದೆ. ಅಂದು ಸಂಜೆ 6.05ಕ್ಕೆ ಸರಿಯಾಗಿ ರಥೋತ್ಸವವನ್ನು ಕಣ್ತುಂಬಿಕೊಳ್ಳಬಹುದು. ಉತ್ಸವ ವಿಗ್ರಹವನ್ನು ದೇವಲಾಯಕ್ಕೆ ಪ್ರದಕ್ಷಿಣೆ ಹಾಕಿಸಿದ ಬಳಿಕ 'ಪೂರ್ಣ ಕುಂಭಾಭಿಷೇಕ' ನಡೆಯಲಿದೆ.
ಅಕ್ಟೋಬರ್ 17ರ ವಿಜಯ ದಶಮಿಯಂದು ಸರಸ್ವತಿ ಮಂದಿರದಲ್ಲಿ "ವಿದ್ಯಾರಂಭ" ಸಾಂಪ್ರಾದಾಯಿಕ ಆಚರಣೆ ಮುಂಜಾನೆ 4ಕ್ಕೆ ನೆರವೇರಲಿದೆ. ಮಕ್ಕಳ ವಿದ್ಯಾಭಾಸದ ದ್ಯೋತಕವಾಗಿ 'ವಿದ್ಯಾರಂಭ' ಆಚರಣೆ ನಡೆಯಲಿದೆ. ಹಾಗೆಯೇ ಮತ್ತೊಂದು ಆಚರಣೆ 'ನವನ ಪ್ರಾಶನ' ಮಧ್ಯಾಹ್ನ 12.30ಕ್ಕೆ ನಡೆಯಲಿದೆ.
'ವಿದ್ಯಾರಂಭ ' ಆಚರಣೆ ವೇಳೆ ಮಕ್ಕಳ ನಾಲಿಗೆ ಮೇಲೆ 'ಓಂ'ಕಾರವನ್ನು ಅರಿಶಿಣ ಕೊಂಬಿನಲ್ಲಿ ಬರೆಯಲಾಗುತ್ತದೆ. (ಸರಸ್ವತಿ ಮಂದಿರದಲ್ಲಿ ಶ್ರೀ ಆದಿ ಶಂಕರಾಚಾರ್ಯರು ಸೌಂದರ್ಯ ಲಹರಿಯನ್ನು ಇಲ್ಲಿಯೇ ರಚಿಸಿದ್ದು ಎಂಬ ಪ್ರತೀತಿ ಇದೆ). 'ವಿದ್ಯಾರಂಭ' ಸಾಂಪ್ರಾದಾಯಿಕ ಉತ್ಸವದಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾ ದೀಕ್ಷೆ ಪಡೆಯಲಿದ್ದಾರೆ.
ಕೊಲ್ಲೂರಿನಿಂದ 1.5 ಕಿ.ಮೀ ದೂರದಲ್ಲಿರುವ ಶುಕ್ಲ ತೀರ್ಥಕ್ಕೆ ಮೂಕಾಂಬಿಕಾ ಉತ್ಸವ ವಿಗ್ರಹವನ್ನು ಹೊತ್ತು ತಂದು ಬಳಿಕ ಮರಳುತ್ತಾರೆ. ಈ ವಿದ್ಯಾ ಉತ್ಸವವು ಸಂಜೆ 5.30ಕ್ಕೆ ನಡೆಯಲಿದೆ. ಒಂಭತ್ತು ದಿನಗಳ ಕಾಲ ನಡೆಯುವ ಮಹಾ ನವರಾತ್ರಿ ಉತ್ಸವದಲ್ಲಿ 'ಮಹಾದೀಪಾರಧನೆ' ಮತ್ತು 'ಸುಹಾಸಿನಿ ಪೂಜೆ'ಯು ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಒಂಭತ್ತು ದಿನಗಳ ಕಾಲವು ದೇವಿಗೆ ವಿವಿಧ ಅಲಂಕಾರಗಳನ್ನು ಮಾಡಲಾಗುತ್ತದೆ.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications