ಅಯೋಧ್ಯೆ ಕಾಮನ್ವೆಲ್ತ್ ಗಾಂಧಿ ಬಂಧ!

ಸಂಬಂಧವಿದೆ ಮಿತ್ರರೇ. ಮೊನ್ನೆ ಅಯೋಧ್ಯೆ ವಿವಾದದ ತೀರ್ಪು ಬಂತು; ಇಂದು ಗಾಂಧಿಜಯಂತಿ; ನಾಳೆಯಿಂದ ಕಾಮನ್ವೆಲ್ತ್ ಕ್ರೀಡಾಕೂಟ ಆರಂಭ. ಇಷ್ಟೇನಾ ಸಂಬಂಧ? ಕ್ಯಾಲೆಂಡರ್ ಬಂಧ! ಇಷ್ಟೇ ಅಲ್ಲ, ಬಂಧುಗಳೇ, ಇನ್ನೂ ಇದೆ. ಭಾರತದ ಭವಿಷ್ಯವನ್ನು ಹೊಸೆಯುವ ಮತ್ತು ಭಾರತೀಯರ ಹೃದಯಗಳನ್ನು ಬೆಸೆಯುವ ಸಂಬಂಧವಿದೆ.
ಅದೇನಪ್ಪಾ, ಅಂತಹ ಸಂಬಂಧ? ಅದ್ಹೇಗಪ್ಪಾ, ಬೆಸೆಯುವ ಬಂಧ?
ಹೌದು. ಮೊನ್ನೆಯ ತೀರ್ಪಿನಲ್ಲಿ ಸೂರ್ಯವಂಶೀಯ ಶ್ರೀರಾಮಚಂದ್ರನನ್ನು ಒಪ್ಪಿಕೊಳ್ಳಲಾಗಿದೆ, ಅಪ್ಪಿಕೊಳ್ಳಲಾಗಿದೆ. ಅದೇ ವೇಳೆ, ಚಂದ್ರನ ಗುರುತಿನ ಮುಸ್ಲಿಮ್ ಸಮುದಾಯಕ್ಕೂ ಮನ್ನಣೆ ನೀಡಲಾಗಿದೆ. ಇಂದು ನಾವು ಜಯಂತಿ ಆಚರಿಸುತ್ತಿರುವ ಗಾಂಧೀಜಿ, 'ಈಶ್ವರ ಅಲ್ಲಾ ತೇರೋ ನಾಮ್', ಎಂದವರು; ರಾಮರಾಜ್ಯದ ಕನಸು ಕಂಡವರು. ನಾಳೆ ಆರಂಭಗೊಳ್ಳುವ ಕಾಮನ್ವೆಲ್ತ್ ಕ್ರೀಡಾಕೂಟವು ಎಂತಹ ಅವಕಾಶವೆಂದರೆ, ಭಾರತೀಯರ ಸ್ನೇಹ, ಸೌಹಾರ್ದ, ಕ್ರೀಡಾಮನೋಭಾವ, ವಿಭಿನ್ನತೆಯಲ್ಲೂ ಏಕತೆ(ಯು ಭಾರತೀಯರಿಗೆ ನೀಡಿರುವ ಅದ್ಭುತ ಶಕ್ತಿ) ಇವುಗಳನ್ನು ಭಾರತೀಯರು ಸ್ವಯಂ ಮನಗಾಣುವುದು ಮಾತ್ರವಲ್ಲ, ವಿಶ್ವಕ್ಕೇ ಸಾರಲು ಒದಗಿರುವ ಸದವಕಾಶ.
ಹೌದಲ್ವೆ!
ಹ್ಞೂಂ. ಒಂದರ ಹಿಂದೊಂದು ಕೂಡಿಬಂದಿರುವ ಈ ಮೂರು ಸಂದರ್ಭಗಳನ್ನು ಒಟ್ಟಾಗಿ ಭಾವಿಸಿ ನಾವಿಂದು, ವಿಭಿನ್ನ ಮತ-ಸಂಸ್ಕೃತಿಗಳ ನಡುವೆಯೂ, ಒಂದಾಗಿ ಮುನ್ನಡೆವ ಮತ್ತು ಒಂದಾದ ಸಂಕಲ್ಪದಿಂದ ದೇಶವನ್ನು ಮುನ್ನಡೆಸುವ ಮನಸ್ಸನ್ನೇಕೆ ಮಾಡಬಾರದು? ಮೇಲೆ ಹೇಳಿದ ಮೂರು ಸಂದರ್ಭಗಳ ಬಂಧವು ನಮಗೆ ಈ ದಿಸೆಯಲ್ಲಿ ಹೊಸದೊಂದು ಹುಮ್ಮಸ್ಸನ್ನು ಮತ್ತು ಸ್ಫೂರ್ತಿಯನ್ನು ಏಕೆ ನೀಡಬಾರದು? ಎಲ್ಲೋ ಇದ್ದ ಕೋಗಿಲೆಯು ಇನ್ನೆಲ್ಲೋ ಇರುವ ಮಾಮರದ ಮೇಲೆ ಬಂದು ಕುಳಿತು ಧ್ವನಿಗೈಯುತ್ತದೆ. ಇಲ್ಲೇ ಅಕ್ಕಪಕ್ಕದಲ್ಲಿರುವ ನಾವೆಲ್ಲ ಒಮ್ಮನಸ್ಸಿನಿಂದ ಏಕೆ ಬಾಳಬಾರದು? ಒಂದೇ ಧ್ವನಿಯನ್ನೇಕೆ ಹೊರಹೊಮ್ಮಿಸಬಾರದು?
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications