ಇಂಡಿಯನ್ ಮುಜಾಹಿದೀನ್ ಪರ ದಿಗ್ವಿಜಯ್ ಟಾಂಟಾಂ

ಕಾಮನ್ ವೆಲ್ತ್ ಕ್ರೀಡಾಕೂಟ ಉಗ್ರರ ದಾಳಿಯ ಭಯ ಇದ್ದೇಇದೆ. ಅಲ್ಲದೇ, ಇತ್ತೀಚೆಗೆ ದೆಹಲಿಯ ಜಾಮಾ ಮಸೀದಿ ಸಮೀಪ ನಡೆದ ಎರಡೆರಡು ಘಟನೆಗಳ ನಂತರ ರಾಜಧಾನಿಯಲ್ಲಿ ನಡೆದ ಭಯೋತ್ಪಾದನೆಯ ರಾಜಕೀಯ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದ ದಿಗ್ವಿಜಯ್ ಸಿಂಗ್, ಇಂಡಿಯನ್ ಮುಜಾಹಿದೀನ್ ಅಸ್ತಿತ್ವದ ಕುರಿತು ನನಗೇನೂ ತಿಳಿದಿಲ್ಲ ಎಂದು ಹೇಳಿ ಮುಜುಗರ ಉಂಟು ಮಾಡಿದ್ದಾರೆ.
ಸೆಪ್ಟೆಂಬರ್ 19ರಂದು ಜಾಮಾ ಮಸೀದಿ ಸಮೀಪ ವಿದೇಶೀಯರಿಗೆ ಇಬ್ಬರು ಬೈಕ್ ಸವಾರರು ಗುಂಡಿಕ್ಕಿ ಪರಾರಿಯಾದ ನಂತರ ಪತ್ರಿಕಾ ಕಚೇರಿಗಳಿಗೆ ಇಂಡಿಯನ್ ಮುಜಾಹಿದೀನ್ ಹೆಸರಿನಲ್ಲಿ ಬಂದಿರುವ ಇ-ಮೇಲ್ ಬಗ್ಗೆ ಅವರು ಮಾತನಾಡುತ್ತಿದ್ದರು. ಇಂಡಿಯನ್ ಮುಜಾಹಿದೀನ್ ಇದೆಯೋ ಅಥವಾ ಇಲ್ಲವೋ, ಇದರ ಬಗ್ಗೆ ನನಗೇನೂ ಗೊತ್ತಿಲ್ಲ. ಆ ಸಂಘಟನೆ ಅಸ್ತಿತ್ವದಲ್ಲಿರುವ ಕುರಿತು ಯಾವುದೇ ಗುರುತರ ಸಾಕ್ಷ್ಯಗಳು ಲಭ್ಯವಾಗಿಲ್ಲ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ











Click it and Unblock the Notifications