ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಿಗಮ ಮಂಡಳಿಗೆ ಶೀಘ್ರವೇ ಅಧ್ಯಕ್ಷರ ನೇಮಕ
ಸದ್ಯ ನಡೆದಿರುವ ಸಂಪುಟ ವಿಸ್ತರಣೆ ಎಲ್ಲರಿಗೂ ಸಮಾಧಾನ ತಂದಿದ್ದು, ಯಾವುದೇ ಗೊಂದಲ ಸೃಷ್ಟಿಯಾಗಿಲ್ಲ.ಯಾವ ಶಾಸಕನೂ ಬಂಡಾಯ ಎದ್ದಿಲ್ಲ. ಇಲ್ಲವೂ ಸುಸೂತ್ರವಾಗಿ ಪೂರ್ಣವಾಗಲಿದೆ ಎಂದು ಈಶ್ವರಪ್ಪ ನೆಮ್ಮದಿಯ ನಿಟ್ಟಿಸಿರು ಬಿಟ್ಟರು. ನಿಗಮ-ಮಂಡಳಿಗಳಲ್ಲಿ ಪ್ರಾತಿನಿಧ್ಯ ಸಚಿವ ಸ್ಥಾನ ಸಿಗದ ಶಾಸಕರು, ಮಾಜಿ ಶಾಸಕರು ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ನಿಗಮ-ಮಂಡಳಿಗಳಲ್ಲಿ ಅಧ್ಯಕ್ಷ ಸ್ಥಾನ ನೀಡಲು ಪಕ್ಷವು ತೀರ್ಮಾನಿಸಿದೆ.
ಮುಂದಿನ 15 ದಿನದಲ್ಲಿ ಆ ಕಾರ್ಯ ನಡೆಯಲಿದ್ದು, ಖಾಲಿಯಿರುವ ಸಂಸ್ಥೆಗಳಿಗೆ ನೇಮಕ ಮಾಡಲಾಗುವುದು ಎಂದು ಹೇಳಿದರು. ಅಲ್ಲದೆ, ಆಯಾ ವಿಧಾನಸಭಾ ಕ್ಷೇತ್ರಗಳ ನಾಲ್ಕು ಮಂದಿಗೆ ರಾಜ್ಯ ಮಟ್ಟದ ನಿಗಮ-ಮಂಡಳಿಗಳಲ್ಲಿ ಸದಸ್ಯ ಸ್ಥಾನ ನೀಡಲು ಪಕ್ಷವು ಉದ್ದೇಶಿಸಿದೆ. ಅವುಗಳಲ್ಲಿ ತಲಾ ಒಂದು ಸ್ಥಾನವನ್ನು ಸಾಮಾನ್ಯ, ಪರಿಶಿಷ್ಟ, ಹಿಂದುಳಿದ ಹಾಗೂ ಮಹಿಳಾ ವರ್ಗದಿಂದ ಆಯ್ಕೆ ಮಾಡಲಾಗುವುದು. ಇವುಗಳನ್ನು ಪಕ್ಷಕ್ಕಾಗಿ ದುಡಿದವರಿಗೆ ನೀಡುವುದಾಗಿ ಈಶ್ವರಪ್ಪ ಸ್ಪಷ್ಟಪಡಿಸಿದರು.
Comments
ಸಂಪುಟ ವಿಸ್ತರಣೆ ಸಚಿವ ಸಂಪುಟ ಕೆಎಸ್ ಈಶ್ವರಪ್ಪ ಬಿಜೆಪಿ ಯಡಿಯೂರಪ್ಪ ಬೆಂಗಳೂರು ಕರ್ನಾಟಕ ಸರ್ಕಾರ cabinet expansion ks eshwarappa karnataka ministers karnataka cabinet bengaluru
Story first published: Thursday, September 23, 2010, 17:23 [IST]