ಮೂರು ದಿನ ಮೊಬೈಲ್ ಎಸ್ಎಂಎಸ್ ಬಂದ್
ಗೃಹ ಸಚಿವಾಲಯದೊಡನೆ ಸಮಾಲೋಚಿಸಿ ನಡೆಸಿದ ಮಾಹಿತಿ ತಂತ್ರಜ್ಞಾನ ಹಾಗೂ ದೂರ ಸಂವಹನ ಸಚಿವಾಲಯವು ಈ ಆದೇಶ ನೀಡಿದೆ. 'ತಕ್ಷಣದಿಂದಲೇ ಮುಂದಿನ 72 ಗಂಟೆಗಳ ಕಾಲ ಎಲ್ಲ ಸೇವಾ ವಲಯಗಳಲ್ಲಿ ಎಲ್ಲ ಸಗಟು ಎಸ್ಎಂಎಸ್ ಹಾಗೂ ಎಂಎಂಎಸ್ಗಳನ್ನು ನಿಷೇಧಿಸುವಂತೆ ದೇಶದ ಎಲ್ಲ ಟೆಲಿಕಾಂ ಸೇವಾದಾರರಿಗೆ ಸೂಚನೆ ನೀಡಲಾಗಿದೆ'. ಎಂದು ಆದೇಶದಲ್ಲಿ ಹೇಳಲಾಗಿದೆ.
ರಾಜ್ಯ ಸರ್ಕಾರಗಳಿಗೆ ಸೂಚನೆ: ಆಯಾ ರಾಜ್ಯ ಸರ್ಕಾರಗಳು ಬಲ್ಕ್ ಎಸ್ಎಂಎಸ್ ಬಗ್ಗೆ ಬಗ್ಗೆ ನಿಗಾ ವಹಿಸಬೇಕು. ಊಹಾಪೋಹ ಸುದ್ದಿಗಳು, ಪ್ರಚೋದನಾಕಾರಿ ಸಂದೇಶ ಕಳಿಸುವವರನ್ನು ಬಂಧಿಸಿ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ.
ಕೆಲವು ಮೊಬೈಲ್ ಗಳಲ್ಲಿ ಈಗಾಗಲೇ ಈ ಬಲ್ಕ್ ಎಸ್ಎಂಸ್ ಸೇವೆ ಸೆ.22 ರ ರಾತ್ರಿಯಿಂದಲೇ ಬಂದ್ ಆಗಿದೆ. ಶುಕ್ರವಾರ ಸೆ.24 ರಂದು ಬಾಬ್ರಿ ಮಸೀದಿ ರಾಮಮಂದಿರಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈ ಕೋರ್ಟ್ ತೀರ್ಪು ನೀಡುವ ಹಿನ್ನೆಲೆಯಲ್ಲಿ ಮೊಬೈಲ್ ಸಂದೇಶ ಬಂದ್ ಕ್ರಮವನ್ನು ಕೈಗೊಳ್ಳಲಾಗಿದೆ.
ಈ ರೀತಿ ನಿಷೇಧ ಇದೇ ಮೊದಲು: 72 ಗಂಟೆಗಳ ಕಾಲ ಎಸ್ಎಂಎಸ್ ಹಾಗೂ ಎಂಎಂಎಸ್ ಗಳಿಗೆ ನಿಷೇಧ ಹೇರಿರುವುದು ಇದೇ ಮೊದಲು ಎನ್ನಲಾಗಿದೆ. ಮೊಬೈಲ್ ಸಂದೇಶ ಬಂದ್ ನಿಂದಾಗಿ ಮೊಬೈ ಲ್ ಕಂಪೆನಿಗಳು ಕೋಟ್ಯಾಂತರ ರು ನಷ್ಟ ಅನುಭವಿಸಲಿವೆ. ದಿನವೊಂದಕ್ಕೆ ಕನಿಷ್ಠ 3 ಕೋಟಿ ರು ನಷ್ಟ ಆಗಲಿದೆ ಎಂದು ಪ್ರಮುಖ ಟೆಲಿಕಾಂ ಸಂಸ್ಥೆಯ ವಕ್ತಾರರು ಹೇಳಿದ್ದಾರೆ.