ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ನಿ ಹೆಸರಲ್ಲಿ ರೆಡ್ಡಿ ಗಣಿಗಾರಿಕೆ : ಉಗ್ರಪ್ಪ

By Mrutyunjaya Kalmat
|
Google Oneindia Kannada News

VS Ugrappa
ಬೆಂಗಳೂರು, ಸೆ. 5 : ಕರ್ನಾಟಕದಲ್ಲಿ ಗಣಿಗಾರಿಕೆ ನಡೆಸಿಲ್ಲ ಎಂದು ಹೇಳುತ್ತಿರುವ ಪ್ರವಾಸೋದ್ಯಮ ಸಚಿವ ಜನಾರ್ದನರೆಡ್ಡಿ ಅವರು 231 ಕೋಟಿ ರುಪಾಯಿಗಳ ಅದಿರು ವಹಿವಾಟು ನಡೆಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ವಿ ಎಸ್ ಉಗ್ರಪ್ಪ ಗಂಭೀರ ಆರೋಪ ಮಾಡಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜನಾರ್ದನರೆಡ್ಡಿ ರಾಜ್ಯದಲ್ಲಿ ತಾವು ಗಣಿಗಾರಿಕೆ ವ್ಯವಹಾರ ನಡೆಸಿಲ್ಲ ಎಂದು ಸುಳ್ಳು ಹೇಳುತ್ತಾ ಬಂದಿದ್ದಾರೆ. ಆದರೆ, ತಮ್ಮ ಪತ್ನಿ ಗಾಲಿ ಲಕ್ಷ್ಮಿಅರುಣಾ ಹೆಸರಿನಲ್ಲಿ 2005ರಿಂದ 2010ರ ಮೇ ಅಂತ್ಯದ ವೇಳೆಗೆ 231 ಕೋಟಿ ರುಪಾಯಿಗಳ ಅದಿರನ್ನು ಸಾಗಾಟ ಮಾಡಿರುವುದು ಹೇಗೆ ಎಂದು ಪ್ರಶ್ನಿಸಿದರು.

2005ರಿಂದಲೂ ಈ ಕಂಪನಿ ಕಾರ್ಯನಿರ್ವಹಿಸುತ್ತಿದೆ. ಆಂಧ್ರದಲ್ಲಿರುವ ಓಬಾಳಪುರಂ ಮೈನಿಂಗ್ ಕಂಪನಿ ಕಳೆದ ಆರು ತಿಂಗಳಿನಿಂದಲೂ ಬಂದ್ ಆಗಿದೆ. ಹೀಗಿದ್ದರೂ, ಕಳೆದ ಮೂರು ತಿಂಗಳ ಅವಧಿಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಅದಿರನ್ನು ಸಾಗಿಸಲಾಗಿದೆ. ಇದಕ್ಕೆ ಬೆಂಬಲವಾಗಿ ನಿಂತಿರುವ ಮುಖ್ಯಮಂತ್ರಿಗಳು ಅಕ್ರಮ ಗಣಿಗಾರಿಕೆ ತಡೆಯುವ ಬಗ್ಗೆ ಸುಳ್ಳು ಹೇಳುತ್ತಿರುವುದು ಇದರಿಂದ ಸಾಬೀತಾಗಿದೆ ಎಂದು ಆರೋಪಿಸಿದರು.

ರೆಡ್ಡಿ ಮಾತಿಗೆ ಯಡಿಯೂರಪ್ಪ ತಲೆಯಾಡಿಸುತ್ತಿದ್ದಾರೆ. ಅಷ್ಟೇ ಅಲ್ಲ ಯಡಿಯೂಪ್ಪ ಅವರಕು 17 ಗಣಿ ಕಂಪನಿಗಳಿಗೆ ಪರವಾನಿಗೆ ನೀಡಲು ಕೇಂದ್ರಕ್ಕೆ ಶಿಪಾರಸ್ಸು ಮಾಡಿದ್ದಾರೆ ಎಂದ ಅವರು, ಯಡಿಯೂರಪ್ಪ ಆಧುನಿಕ ಹಿಟ್ಲರ್ ನಂತೆ ಮೆರೆಯುತ್ತಿದ್ದಾರೆ ಎಂದು ಆರೋಪಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X