ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತರೂರ್ ಹನಿಮೂನ್ ಗೆ ತಾಂತ್ರಿಕ ತೊಂದರೆ
ಕೇರಳದಿಂದ ದುಬೈಗೆ ಹೊರಟಿದ್ದ ವಿಮಾನದಲ್ಲಿ ಪ್ರಮುಖ ತೊಂದರೆಯಿರುವುದು ಕಂಡು ಬಂದ ಕಾರಣ, ತುರ್ತು ಭೂ ಸ್ಪರ್ಶಕ್ಕೆ ಆದೇಶ ನೀಡಲಾಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.
ಇಂದು ಸಂಜೆ 5ಗಂಟೆಗೆ ಮೇಲಕ್ಕೆ ಹಾರಿದ ವಿಮಾನ ಇದ್ದಕ್ಕಿದ್ದಂತೆ ಕೆಳಗಿಳಿಯ ತೊಡಗಿದಾಗ ಪ್ರಯಾಣಿಕರು ಸಹಜವಾಗೇ ಆತಂಕಗೊಂಡರು. ವಿಮಾನವನ್ನು ಸಂಪೂರ್ಣವಾಗಿ ಪರಿಶೀಲಿಸಲಾಗಿದ್ದು, ತಾಂತ್ರಿಕ ದೋಷ ನಿವಾರಣೆ ಕಾರ್ಯ ಸಾಗಿದೆ ಎಂದು ತಿಳಿದುಬಂದಿದೆ.
ದುಬೈನಲ್ಲಿ ಮದುವೆ ರಿಷೆಪ್ಷನ್ ಮುಗಿಸಿಕೊಂಡು, ಸ್ಪೇನ್ ನಲ್ಲಿ ಹನಿಮೂನ್ ಆಚರಿಸಲು ತರೂರ್ ಹಾಗು ಸುನಂದಾ ಸಿದ್ಧರಾಗಿದ್ದರೆ. ಆ.22 ರಂದು ಸಾಂಪ್ರಾದಾಯಿಕ ಕೇರಳ ಶೈಲಿಯಲ್ಲಿ ಸುನಂದಾರನ್ನು ಶಶಿ ವರಿಸಿ, ಓಣಂ ಹಬ್ಬವನ್ನು ಆಚರಿಸಿದ್ದರು.
Comments
ಶಶಿ ತರೂರ್ ಸುನಂದಾ ಪುಷ್ಕರ್ ಹನಿಮೂನ್ ಮಧುಚಂದ್ರ ಕೇರಳ ಓಣಂ ಮದುವೆ ತಿರುವನಂತಪುರಂ shashi tharoor sunanda pushkar honeymoon thiruvananthapuram onam
Story first published: Tuesday, August 24, 2010, 17:55 [IST]