ಭಿಕ್ಷುಕರ ಕಾಲೋನಿಯಲ್ಲಿ ಮರಣ ಮೃದಂಗ

ಸಾವಿನ ಸರಣಿ ಮಂಗಳವಾರ ರಾತ್ರಿಯಿಂದಲೇ ಆರಂಭವಾಗಿದೆಯಾದರೂ ಬೆಳಕಿಗೆ ಬಂದಿದ್ದು ಬುಧವಾರ ಸಂಜೆ. ಮಂಗಳವಾರ 11 ಮಂದಿ ಮೃತರಾಗಿದ್ದರೆ, ಬುಧವಾರ ಸಂಜೆ ಒಬ್ಬರು ಸಾವಿಗೀಡಾಗಿದ್ದಾರೆ. ಸಾಂಕ್ರಾಮಿಕ ರೋಗದಿಂದ ಅಸ್ವಸ್ಥರಾಗಿರುವ 15 ಮಂದಿಯನ್ನು ಇಂದಿರಾನಗರದ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೆಲವರಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ.
ಜಗದೀಶ್(30), ರಾಜಾ ವೇಲು(65), ಮುನಿಯಪ್ಪ(70), ಗಿರಿಧರ್(50), ರಾಜೇಂದ್ರ(70), ಮೂಗ(60), ಗೋಪಿ(55), ಬಾಲಕೃಷ್ಣ(65), ಜಯಮ್ಮ(65), ಮೂಗಿ(45), ನಿಂಗಮ್ಮ(65), ರಾಮಕೃಷ್ಣ(65) ಮತ್ತು ರಾಮಕೃಷ್ಣಯ್ಯ (65) ಸಾವಿಗೀಡಾದ ಭಿಕ್ಷುಕರಾಗಿದ್ದಾರೆ.











Click it and Unblock the Notifications