ಮುಂಬೈ-ಕಾರವಾರ ರೈಲು ಮಂಗಳೂರಿಗೆ

ಪಾಲ್ಗಾಟ್ ರೈಲ್ವೆ ವಿಭಾಗದ ಅಧಿಕಾರಿಗಳ ಪ್ರಕಾರ, ಸದ್ಯಕ್ಕೆ ಮಂಗಳೂರಿಗೆ ವಿಸ್ತರಣೆಯಾಗಿರುವ ರೈಲು ಕೇರಳದ ಕಣ್ಣೂರಿಗೂ ವಿಸ್ತರಣೆಯಾಗುವ ಸಾಧ್ಯತೆ ಇದೆ. ಹೀಗಾದರೆ ಈ ರೈಲು ಕರಾವಳಿ ಕನ್ನಡಿದರ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ. ಹಿಂದಿನ ಬಾರಿ ಬಜೆಟ್ ನಲ್ಲಿ ಈ ರೈನ್ನು ಘೋಷಿಸಲಾಗಿತ್ತು. ಈ ರೈಲನ್ನು ಮಂಗಳೂರಿಗೆ ವಿಸ್ತರಿಸಿದರೆ ಮಾತ್ರ ರಾಜ್ಯದ ಜನತೆಗೆ ಪ್ರಯಾಣಿಕರಿಗೆ ಸಹಾಯವಾಗಲಿದೆ ಎಂದು ಮಾಧ್ಯಮಗಳು ಬಿಂಬಿಸಿದ್ದವು.
ಆದರೆ, ಕೇರಳ ಲಾಬಿ ಇಲ್ಲೂ ಕೂಡ ಕೈಚಳಕ ಪ್ರದರ್ಶಿಸಿದೆ. ಬೆಂಗಳೂರು-ಮಂಗಳೂರು ರೈಲಿನಂತೆ ಈ ರೈಲನ್ನೂ ಕೇರಳಕ್ಕೆ ವಿಸ್ತರಿಸಲು ಯೋಜನೆ ರೂಪಿಸಲಾಗಿದೆ. ರೈಲನ್ನು ಕಂಕನಾಡಿ ಜಂಕ್ಷನ್ ಗೆ ಸೀಮಿತಗೊಳಿಸಿದರೆ ಅಲ್ಲಿಂದ ಕೇರಳದತ್ತ ವಿಸ್ತರಿಸಲು ಅನುಕೂಲವಾಗುತ್ತದೆ ಎನ್ನುವುದು ರೈಲ್ವೆ ಇಲಾಖೆಯ ಚಿಂತನೆಯಾಗಿದೆ. ಈ ಬಗ್ಗೆ ಕರಾವಳಿ ಜನಪ್ರತಿನಿಧಿಗಳಿಂದ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ.












Click it and Unblock the Notifications