ಮುಂಬೈ-ಕಾರವಾರ ರೈಲು ಮಂಗಳೂರಿಗೆ
ನವದೆಹಲಿ,
ಆ. 13 : ಕನ್ನಡಿಗರ ಬಹುದಿನಗಳ ಕನಸು ಮುಂಬೈ-ಕಾರವಾರ ಎಕ್ಸ್ ಪ್ರೆಸ್ ರೈಲು ಮಂಗಳೂರುವರೆಗೆ ವಿಸ್ತರಣೆಯಾಗಿದ್ದು, ಆಗಸ್ಟ್ 14 ರಿಂದ ಅಧಿಕೃತವಾಗಿ ಕಾರ್ಯಾರಂಭಗೊಳ್ಳಲಿದೆ. ಆದರೆ, ಈ ರೈಲು ಮಂಗಳೂರು ಕೇಂದ್ರ ರೈಲ್ವೆ ನಿಲ್ದಾಣ ತಲುಪದೆ ಕಂಕನಾಡಿ ಜಂಕ್ಷನ್ ಗೆ ಸೀಮಿತಗೊಂಡಿರುವುದು ಮತ್ತೆ ಅನುಮಾನಕ್ಕೆ ಕಾರಣವಾಗಿದೆ. ಈ ರೈಲನ್ನು ಕೇರಳಕ್ಕೆ ವಿಸ್ತರಿಸುವ ಸಂಚು ನಡೆದಿದೆ ಎನ್ನಲಾಗಿದೆ. id="toptextpromo">ಪಾಲ್ಗಾಟ್
ರೈಲ್ವೆ ವಿಭಾಗದ ಅಧಿಕಾರಿಗಳ ಪ್ರಕಾರ, ಸದ್ಯಕ್ಕೆ ಮಂಗಳೂರಿಗೆ ವಿಸ್ತರಣೆಯಾಗಿರುವ ರೈಲು ಕೇರಳದ ಕಣ್ಣೂರಿಗೂ ವಿಸ್ತರಣೆಯಾಗುವ ಸಾಧ್ಯತೆ ಇದೆ. ಹೀಗಾದರೆ ಈ ರೈಲು ಕರಾವಳಿ ಕನ್ನಡಿದರ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ. ಹಿಂದಿನ ಬಾರಿ ಬಜೆಟ್ ನಲ್ಲಿ ಈ ರೈನ್ನು ಘೋಷಿಸಲಾಗಿತ್ತು. ಈ ರೈಲನ್ನು ಮಂಗಳೂರಿಗೆ ವಿಸ್ತರಿಸಿದರೆ ಮಾತ್ರ ರಾಜ್ಯದ ಜನತೆಗೆ ಪ್ರಯಾಣಿಕರಿಗೆ ಸಹಾಯವಾಗಲಿದೆ ಎಂದು ಮಾಧ್ಯಮಗಳು ಬಿಂಬಿಸಿದ್ದವು. id='are-slot-1' class='oiad oi-axt oiadv'> id='top-searched-articles'>ಆದರೆ,
ಕೇರಳ ಲಾಬಿ ಇಲ್ಲೂ ಕೂಡ ಕೈಚಳಕ ಪ್ರದರ್ಶಿಸಿದೆ. ಬೆಂಗಳೂರು-ಮಂಗಳೂರು ರೈಲಿನಂತೆ ಈ ರೈಲನ್ನೂ ಕೇರಳಕ್ಕೆ ವಿಸ್ತರಿಸಲು ಯೋಜನೆ ರೂಪಿಸಲಾಗಿದೆ. ರೈಲನ್ನು ಕಂಕನಾಡಿ ಜಂಕ್ಷನ್ ಗೆ ಸೀಮಿತಗೊಳಿಸಿದರೆ ಅಲ್ಲಿಂದ ಕೇರಳದತ್ತ ವಿಸ್ತರಿಸಲು ಅನುಕೂಲವಾಗುತ್ತದೆ ಎನ್ನುವುದು ರೈಲ್ವೆ ಇಲಾಖೆಯ ಚಿಂತನೆಯಾಗಿದೆ. ಈ ಬಗ್ಗೆ ಕರಾವಳಿ ಜನಪ್ರತಿನಿಧಿಗಳಿಂದ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ.











Click it and Unblock the Notifications