ದಲಿತರ ಹಣ ಕಾಮನ್ ವೆಲ್ತ್ ಕ್ರೀಡೆಗೆ ಬಳಕೆ

ವಿರೋಧ ಪಕ್ಷಗಳ ಪ್ರತಿಭಟನೆಗೆ ಪ್ರತಿಕ್ರಿಯಿಸಿರುವ ಕಲ್ಮಾಡಿ, ಹಣ ದುರ್ಬಳಿಕೆಗೆ ಸಂಬಂಧಿಸಿದಂತೆ ಎಂತಹ ತನಿಖೆಗೂ ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ. ಎಸ್ಸಿಎಸ್ಟಿ ಅಭಿವೃದ್ಧಿಯ ಹಣ ಬಳಕೆ ವಿಷಯವನ್ನು ಪ್ರಸ್ತಾಪಿಸಿದ ಬಹಜನ ಸಮಾಜ ಪಕ್ಷದ ಸದಸ್ಯರು, ದಲಿತರ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ 750 ಕೋಟಿ ರುಪಾಯಿಗಳನ್ನು ಕಾಮನ್ ವೆಲ್ತ್ ಕ್ರಿಡಾಕೂಟಕ್ಕೆ ಬಳಸಲಾಗಿದೆ ಎಂದು ಆರೋಪಿಸಿದರು. ಕ್ರೀಡಾಕೂಟದ ನೆಪದಲ್ಲಿ ಹಣ ಕೊಳ್ಳೆ ಹೊಡೆಯಲಾಗುತ್ತಿದೆ. ಈ ಬಗ್ಗೆ ಚರ್ಚೆ ನಡೆಯಬೇಕು ಎಂದು ಆಗ್ರಹಿಸಿದರು.
ಬಿಎಸ್ ಪಿ ಸಂಸದರಿಗೆ ಬೆಂಬಲ ವ್ಯಕ್ತಪಡಿಸಿದ ಜೆಡಿಯು ಕಾಮನ್ ವೆಲ್ತ್ ಹಗರಣದ ಬಗ್ಗೆ ಚರ್ಚೆ ನಡೆಯಲೇಬೇಕು ಎಂದು ಪಟ್ಟು ಹಿಡಿದಾಗ ಲೋಕಸಭೆಯಲ್ಲಿ ಕೆಲಕಾಲ ಗದ್ದಲ ಉಂಟಾಯಿತು. ನಂತರ ಮಾತನಾಡಿದ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪವನ್ ಕುಮಾರ್ ಬನ್ನಲ್, ಮಾಧ್ಯಮಗಳ ಆಪಾದನೆಯಲ್ಲಿ ಯಾವುದೇ ಹುರುಳಿಲ್ಲ. ಹಣ ದುರ್ಬಳಿಕೆಯಾಗಿದೆ ಎನ್ನುವುದು ಕೇವಲ ಉಹಾಪೋಹ ಎಂದರು. ದೆಹಲಿ ಮುಖ್ಯಮಂತ್ರಿ ಶೀಲಾ ದಿಕ್ಷೀತ್ ಕೂಡಾ ದಲಿತರ ಹಣವನ್ನು ಕ್ರೀಡಾಕೂಟಕ್ಕೆ ಬಳಕೆ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.











Click it and Unblock the Notifications