ಇದು ಆಟೋದಲ್ಲಿ ಓಡಾಡುವವರ ಗಮನಕ್ಕೆ

2 ಕಿ.ಮೀ. ಕ್ರಮಿಸಿದ ನಂತರ ಪ್ರತಿ ಕಿ.ಮೀಟರಿಗೆ 9 ರು. ತೆತ್ತಬೇಕು. ಹೊಸ ದರಗಳನ್ನು ಆಟೋ ಮೀಟರುಗಳಿಗೆ ಅಳವಡಿಸಿಕೊಳ್ಳಲು ಆಟೋ ಚಾಲಕರಿಗೆ 2 ತಿಂಗಳ ಗಡುವು ನೀಡಲಾಗಿದೆ. ಅಲ್ಲಿಯವರೆಗೆ ದರ ಬದಲಾವಣೆ ಪಟ್ಟಿ ನೋಡಿ ದರ ನೀಡುವ ಬವಣೆ ಪ್ರಯಾಣಿಕರಿಗೆ ತಪ್ಪಿದ್ದಲ್ಲ.
ಪ್ರಯಾಣಿಕರಿಗೆ ನೆನಪಿರಲಿ, ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಮಾತ್ರ ಒಂದೂವರೆ ಪಟ್ಟು ದರ ನೀಡಬೇಕು. ಆಟೋ ಚಾಲಕನನ್ನು ಕಾಯಿಸಬೇಕಾದರೆ, ಐದು ನಿಮಿಷದವರೆಗೆ ಯಾವುದೇ ಹೆಚ್ಚಿನ ಶುಲ್ಕ ನೀಡಬೇಕಿಲ್ಲ. ನಂತರ ಪ್ರತಿ 15 ನಿಮಿಷಕ್ಕೆ 1 ರು. ಹೆಚ್ಚಿಗೆ ನೀಡಬೇಕು, ಅಷ್ಟೇ. ಮತ್ತು ಲಗೇಜು 20 ಕೆಜಿವರೆಗೂ ಇದ್ದರೂ ಯಾವುದೇ ಹೆಚ್ಚಿನ ಶುಲ್ಕ ನೀಡಬೇಕಿಲ್ಲ.
ಆಟೋ ದರ ಹೆಚ್ಚಿಸಿದರೂ ಕಿರಿಕ್ಕು ಮಾಡುವವರೇನೂ ಕಡಿಮೆಯಿರುವುದಿಲ್ಲ. ಮೀಟರಿನ ಮೇಲೆ ಹತ್ತಿಪ್ಪತ್ತು ರು. ಜಾಸ್ತಿ ಕೇಳುವುದು, ನಿಗದಿತ ವೇಳೆ ಬಿಟ್ಟು ಉಳಿದ ಸಮಯದಲ್ಲಿ ಒಂದೂವರೆ, ಎರಡು ಪಟ್ಟು ಕೇಳುವುದು, ಕೇಳಿದಲ್ಲಿ ಬರದೆ ಕ್ಯಾತೆ ತೆಗೆಯುವುದು, ಕೊಂಕಣ ಸುತ್ತಿ ಮೈಲಾರಕ್ಕೆ ಮುಟ್ಟಿಸುವುದು, ಮೀಟರುಗಳಲ್ಲೇ ವಂಚಿಸುವುದು... ಮತ್ತೇನಾದರೂ ಕಿರಿಕಿರಿಗಳನ್ನು ಮಾಡಿದಲ್ಲಿ ಮುಲಾಜಿಲ್ಲದೇ 080-2226 0554 / 080-2220 7750 ನಂಬರುಗಳಿಗೆ ಫೋನ್ ಮಾಡಿ ದೂರು ಸಲ್ಲಿಸಿ. ಕ್ರಮ ಕೈಗೊಳ್ಳುವವರೆಗೆ ಬಿಡಬೇಡಿ.
ಆಟೋ ಪ್ರಯಾಣ ಸುಖಕರವಾಗಿರಲಿ. ಅನವಶ್ಯಕ ಕಿರಿಕಿರಿಗಳು ನಿಲ್ಲಲಿ. ಕೊಟ್ಟ ದುಡ್ಡಿಗೆ ಸರಿಯಾದ ಸೇವೆ ಸಿಗಲಿ.
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications