ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪಿಳ್ಳೈಯಿಂದ ಪಾಕ್ ಪ್ರವಾಸ ವ್ಯರ್ಥ : ಕೃಷ್ಣ
ಒಂದು ಕಡೆ ಭಾರತ-ಪಾಕಿಸ್ತಾನ ಮಾತುಕತೆ ನಡೆಯುತ್ತಿದ್ದರೆ, ಮುಂಬೈ ದಾಳಿಯಲ್ಲಿ ಐಎಸ್ಐ ನಂಟಿದೆ ಎಂದು ಪಿಳ್ಳೈ ಹೇಳಿದ್ದು ಮಾತುಕತೆಗೆ ವ್ಯತಿರಿಕ್ತ ಪರಿಣಾಮ ಬೀರಿತು. ಒಂದು ವೇಳೆ ನಾನು ಗೃಹ ಕಾರ್ಯದರ್ಶಿಯಾಗಿದ್ದರೆ ಪಾಕಿಸ್ತಾನದ ಉಗ್ರ ಡೆವಿಡ್ ಹೆಡ್ಲೀ ಬಹಿರಂಗಪಡಿಸಿದ ವಿವರಗಳ ಬಗ್ಗೆ ಆ ಸಂದರ್ಭದಲ್ಲಿ ಹೇಳಿಕೆ ನೀಡುತ್ತಿರಲಿಲ್ಲ ಎಂದು ಹೇಳುವ ಮೂಲಕ ಪಿಳ್ಳೈ ಅವರ ಮೇಲೆ ಗೂಬೆ ಕೂರಿಸುವ ಪ್ರಯತ್ನವನ್ನು ಕೃಷ್ಣ ಮಾಡಿದ್ದಾರೆ.
ಎಫ್ ಬಿಐ ಮತ್ತು ಭಾರತದ ತನಿಖಾಧಿಕಾರಿಗಳಿಗೆ ಹೆಡ್ಲಿ ನೀಡಿದ ವಿವರಗಳನ್ನು ಪಿಳ್ಳೈ ಬಹಿರಂಗಪಡಿಸಿದ್ದಾರೆ. ಆದರೆ, ಅದನ್ನೆಲ್ಲ ಬಹಿರಂಗಪಡಿಸಲು ಆ ಸಮಯ ಸೂಕ್ತವಾಗಿರಲಿಲ್ಲ. ಇದು ದುರದೃಷ್ಟಕರ ಸಂಗತಿ ಎಂದು ಕೃಷ್ಣ ವಿವರಿಸಿದರು. ಪಿಳ್ಳೈ ಹೇಳಿಕೆ ಬಗ್ಗೆ ಪ್ರಧಾನಿಯೊಂದಿಗೆ ಚರ್ಚಿಸಿದ್ದೇನೆ. ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ದೇಶ ಒಂದೇ ನಿಲುವನ್ನು ಹೊಂದಿರಬೇಕು. ಆ ನಿಲುವಿಗೆ ಪೂರಕ ಹೇಳಿಕೆವಾಗಿ ಮಾತನಾಡಬೇಕು ಎಂದಿರುವ ಕೃಷ್ಣ, ಪರೋಕ್ಷವಾಗಿ ಪಿಳ್ಳೈ ಅವರನ್ನು ಚುಚ್ಚಿದ್ದಾರೆ.
Comments
Story first published: Thursday, July 22, 2010, 11:22 [IST]