ಚಿತಾಭಸ್ಮದ ಜೊತೆ ನೀರು ಪಾಲಾದ ಎಂಟು ಮಂದಿ
ಮೃತರು ಗದಗ - ಬೆಟಗೇರಿ ಹಾಗೂ ಹುಬ್ಬಳ್ಳಿ ನಿವಾಸಿಗಳಾಗಿದ್ದಾರೆ. ಟೀಕಾಸಾ ಬಾಕಳೆ (40), ಅಮೃತಾಬಾಯಿ (32) ಅಂಬಿಕಾಬಾಯಿ (50), ವಿಷ್ಣು (36), ಮಾಣಿಕ್ಯ (48), ನಾಗರಾಜ್ (45), ರಾಜಣ್ಣ (40), ಯಲ್ಲಪ್ಪ (80). ವಿಷ್ಣು ಅವರ ತಂದೆ ಆನಂದ್ ಬದ್ದಿ ಅವರು 3 ದಿನಗಳ ಹಿಂದೆ ಮೃತಪಟ್ಟಿದ್ದರು. ಇವರ ಅಸ್ತಿಯನ್ನು ತುಂಗಭದ್ರಾ ನದಿಯಲ್ಲಿ ಬಿಡಲು 16 ಜನ ಸಂಬಂಧಿಕರು ಹೂವಿನಹಡಗಲಿ ತಾಲೂಕಿನ ಮೊದಲಘಟ್ಟ ಗ್ರಾಮದ ಗದಗ - ಬಳ್ಳಾರಿ ಸಂಪರ್ಕ ಸೇತುವೆ ಪಕ್ಕದ ಆಂಜಿನೇಯ ದೇವಸ್ಥಾನಕ್ಕೆ ಆಗಮಿಸಿದ್ದರು.
ನದಿಯ ದಡದಲ್ಲಿ ಅಸ್ತಿ ವಿಸರ್ಜಿಸುವ ಪೂಜಾ ವಿಧಿಗಳನ್ನು ವಿಷ್ಣು ಪೂರ್ಣಗೊಳಿಸಿದ ನಂತರ ಅಸ್ತಿಯನ್ನು ನದಿಯ ನೀರಲ್ಲಿ ಲೀನಗೊಳಿಸುವಾಗ ನೀರಿನ ಸೆಳೆತ ಹೆಚ್ಚಾಗಿ ಅವರು ಕಾಣೆ ಆದರು. ವಿಷ್ಣುವನ್ನು ಹುಡುಕುತ್ತಾ ನೀರಿಗಿಳಿದ ಏಳು ಜನರು ಕೂಡ ನೀರಿನ ಹಿರಿವಿನ ರಭಸದಲ್ಲಿ ಕಾಣೆ ಆದರು ಎಂದು ಮೃತರ ಸಂಬಂಧಿ, ಪ್ರತ್ಯಕ್ಷದರ್ಶಿ ಹನುಮಂತಪ್ಪ ಪವಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಸೇರಿ ನದಿ ಪ್ರಾಂತದಲ್ಲಿ ಸೋಮವಾರದಿಂದ ಸುರಿಯುತ್ತಿರುವ ಮಳೆ ಹಾಗೂ ಭದ್ರಾ ಜಲಾಶಯದಿಂದ ನೀರನ್ನು ಹೊರ ಬಿಟ್ಟ ಕಾರಣ ತುಂಗಭದ್ರಾ ನದಿಯಲ್ಲಿ ನೀರಿನ ಪ್ರವಾಹ ಏಕಾಏಕಿ ಹೆಚ್ಚಾಗಿದ್ದೇ ಈ ಘಟನೆಗೆ ಕಾರಣ. ಅಲ್ಲದೇ, ಈ ಘಟನೆ ನಡೆದ ಸ್ಥಳದಲ್ಲಿ ನೀರಿನ ಸುಳಿವು ಇತ್ತು. ಈ ಸ್ಥಳದಲ್ಲಿ ನಡೆದದ್ದು ಇದೇ ಮೊದಲ ಘಟನೆ ಎಂದು ಹೇಳಲಾಗಿದೆ.
ಮಧ್ಯಾಹ್ನ 2.30ರ ಸುಮಾರಿಗೆ ದುರ್ಘಟನೆ ಸಂಭವಿಸಿದೆ. ಚಿತಾಭಸ್ಮವನ್ನು ನದಿಯಲ್ಲಿ ಬಂದವರು ನೀರು ಪಾಲಾಗಿದ್ದಾರೆ. ಮೃತರು ಗದಗ- ಬೇಟಗೇರಿ ಮತ್ತು ಹುಬ್ಬಳ್ಳಿಯವರಾಗಿದ್ದಾರೆ. ನೀರು ಪಾಲಾದವರು ಜೀವಂತವಾಗಿ ಉಳಿದಿರುವ ಸಾಧ್ಯತೆ ಕಡಿಮೆ. ತೆಪ್ಪಗಳ ಮೂಲಕ ಮೃತ ಶವಗಳ ಹುಡುಕಾಟ ಆರಂಭಿಸಲಾಗಿದೆ. 15 ಮಂದಿ ನುರಿತ ಈಜುಗಾರರು ಮೃತದೇಹಗಳನ್ನು ಹುಡುಕುತ್ತಿದ್ದಾರೆ. ಇಂದು ಸಂಜೆ ಇಲ್ಲವೇ ನಾಳೆ ಬೆಳೆಗ್ಗೆ ಶವಗಳನ್ನು ಪತ್ತೆ ಮಾಡಲಾಗುವುದು. ಮುಂಡರಗಿ ತಾಲ್ಲೂಕಿನ ಕಕ್ಕೂರು ಬಳಿ ಒಂದು ಶವ ಪತ್ತೆಯಾಗಿದೆ ಎಂದು ಹೂವಿನಹಗಲಿ ಡಿವೈಎಸ್ಪಿ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳು, ಕಂದಾಯ ಇಲಾಖೆ ಮತ್ತು ಅಗ್ನಿ ಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಶವಗಳ ಶೋಧ ಕಾರ್ಯ ನಡೆದಿದೆ. ಹೂವಿನಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ













Click it and Unblock the Notifications