ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಹತ್ಯೆ ನಿಷೇಧ ಮಸೂದೆ ದಲಿತ ವಿರೋಧಿ; ಗೌಡ

By Rajendra
|
Google Oneindia Kannada News

Deve Gowda
ಬೆಂಗಳೂರು, ಜು.17: ರಾಜ್ಯ ವಿಧಾನಮಂಡಲದಲ್ಲಿ ಅಂಗೀಕರಿಸಿರುವ ಜಾನುವಾರು ಹತ್ಯೆ ಪ್ರತಿಬಂಧಕ ಮಸೂದೆಯನ್ನು ರಾಜ್ಯಪಾಲರು ಅಂಗೀಕರಿಸಬಾರದು. ಈ ಮಸೂದೆ ವಿರುದ್ಧ ಪಕ್ಷಾತೀತವಾಗಿ ಹೋರಾಟ ನಡೆಸುವುದಾಗಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್ ಡಿ ದೇವೇಗೌಡ ಹೇಳಿದ್ದಾರೆ.

ದೇವೇಗೌಡರು ಶುಕ್ರವಾರ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಅವರಿಗೆ ನಿವೇದನ ಪತ್ರ ಸಲ್ಲಿಸಿದ್ದು, ಇದು ಅಲ್ಪಸಂಖ್ಯಾತರ, ದಲಿತರ ಹಾಗೂ ರೈತರ ವಿರೋಧಿ ಮಸೂದೆ. ಇದನ್ನು ವಿಧಾನ ಮಂಡಲಲ್ಲಿ ಅಂಗೀರಿಸಬಾರದಿತ್ತು ಎಂದಿದ್ದಾರೆ. ಒಂದು ವರ್ಗದ ಆಹಾರ ಪದ್ಧತಿಯನ್ನು ಕಿತ್ತುಕೊಳ್ಳುತ್ತಿರುವ ಈ ಸಮಾಜ ವಿರೋಧಿ ಮಸೂದೆಯನ್ನು ತಡೆಯಬೇಕು ಎಂದು ಗೌಡರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಕೃಷಿಯಲಲ್ಲಿ ನಿರತರಾಗಿರುವ ಶೇ.70ರಷ್ಟು ಮಂದಿಗೆ ಈ ಮಸೂದೆಯಿಂದ ನಷ್ಟವಾಗಲಿದೆ. ಸುಪ್ರೀಂಕೋರ್ಟ್ ನ 1958 ಮತ್ತು 1996ರ ಐದಕ್ಕೂ ಹೆಚ್ಚು ತೀರ್ಪುಗಳಲ್ಲಿ ಗೋಹತ್ಯೆ ನಿಷೇಧ ವಿಧೇಯಕದ ಬಗ್ಗೆ ಪ್ರಸ್ತಾಪಿಸಲಾಗಿದೆ. ಗೋಹತ್ಯೆ ನಿಷೇಧಿಸುವುದರಿಂದ ಕಟುಕರ ಹಕ್ಕುಗಳನ್ನು ಕಸಿದುಕೊಂಡಂತೆ ಎಂದು ಗೌಡರು ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X