ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗೋಹತ್ಯೆ ನಿಷೇಧ ಮಸೂದೆ ದಲಿತ ವಿರೋಧಿ; ಗೌಡ
ದೇವೇಗೌಡರು ಶುಕ್ರವಾರ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಅವರಿಗೆ ನಿವೇದನ ಪತ್ರ ಸಲ್ಲಿಸಿದ್ದು, ಇದು ಅಲ್ಪಸಂಖ್ಯಾತರ, ದಲಿತರ ಹಾಗೂ ರೈತರ ವಿರೋಧಿ ಮಸೂದೆ. ಇದನ್ನು ವಿಧಾನ ಮಂಡಲಲ್ಲಿ ಅಂಗೀರಿಸಬಾರದಿತ್ತು ಎಂದಿದ್ದಾರೆ. ಒಂದು ವರ್ಗದ ಆಹಾರ ಪದ್ಧತಿಯನ್ನು ಕಿತ್ತುಕೊಳ್ಳುತ್ತಿರುವ ಈ ಸಮಾಜ ವಿರೋಧಿ ಮಸೂದೆಯನ್ನು ತಡೆಯಬೇಕು ಎಂದು ಗೌಡರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಕೃಷಿಯಲಲ್ಲಿ ನಿರತರಾಗಿರುವ ಶೇ.70ರಷ್ಟು ಮಂದಿಗೆ ಈ ಮಸೂದೆಯಿಂದ ನಷ್ಟವಾಗಲಿದೆ. ಸುಪ್ರೀಂಕೋರ್ಟ್ ನ 1958 ಮತ್ತು 1996ರ ಐದಕ್ಕೂ ಹೆಚ್ಚು ತೀರ್ಪುಗಳಲ್ಲಿ ಗೋಹತ್ಯೆ ನಿಷೇಧ ವಿಧೇಯಕದ ಬಗ್ಗೆ ಪ್ರಸ್ತಾಪಿಸಲಾಗಿದೆ. ಗೋಹತ್ಯೆ ನಿಷೇಧಿಸುವುದರಿಂದ ಕಟುಕರ ಹಕ್ಕುಗಳನ್ನು ಕಸಿದುಕೊಂಡಂತೆ ಎಂದು ಗೌಡರು ಹೇಳಿದರು.
Comments
Story first published: Saturday, July 17, 2010, 12:59 [IST]