ಹೊಳಪಿನ ವಜ್ರ ಗ್ರಾಹಕರ ಕೈ ಕಚ್ಚಲಿದೆ

ಈ ದರ ಇನ್ನಷ್ಟು ಏರಲಿರುವುದಾಗಿ ಪ್ರಮುಖ ವಜ್ರಾಭರಣ ತಯಾರಿಕೆ ಮತ್ತು ರಫ್ತು ಕಂಪೆನಿ ಗೀತಾಂಜಲಿ ಜೆಮ್ಸ್ ನ ಅದ್ಯಕ್ಷ ಮೇಹುಲ್ ಚೋಸ್ಕಿ ಹೇಳುತ್ತಾರೆ. ಉದ್ಯಮದ ಪತ್ರಿಕೆಯಾದ ರಪಾಪೋರ್ಟ್ ಕೂಡ ಬೇಡಿಕೆಯನ್ನು ಪೂರೈಸಲು ಜಾಗತಿಕ ವಜ್ರದ ಗಣಿ ಕಂಪೆನಿಗಳಿಗೆ ಸಾದ್ಯವಾಗುತ್ತಿಲ್ಲ ಎಂದು ತನ್ನ ವರದಿಯಲ್ಲಿ ಹೇಳಿದೆ.
ಭಾರತ ವಿಶ್ವದಲ್ಲೇ ಅತೀ ದೊಡ್ಡ ವಜ್ರಗಳನ್ನು ಸಂಸ್ಕರಿಸುವ ಕೇಂದ್ರವಾಗಿದ್ದು 2009ರಲ್ಲಿ 32,500 ಕೋಟಿ ರೂಪಾಯಿ ಮೌಲ್ಯದ ಕಚ್ಚಾ ವಜ್ರವನ್ನು ಆಮದು ಮಾಡಿಕೊಂಡಿದ್ದು ಹಿಂದಿನ ವರ್ಷಗಳಲ್ಲಿ ಈ ಮೊತ್ತ 45 ರಿಂದ 55 ಸಾವಿರ ಕೋಟಿ ರೂಪಾಯಿಗಳಾಗಿತ್ತು.
ಪ್ರಮುಖ ವಜ್ರದ ಗಣಿ ಕಂಪೆನಿ ಡೆ ಬೀರ್ಸ್ ನ ವಜ್ರದ ಉತ್ಪಾದನೆ 24.6 ಮಿಲಿಯ ಕಾರೆಟ್ ಗಳೆಂದು ಅಂದಾಜಿಸಲಾಗಿದ್ದು ಇದು 2008 ಕ್ಕಿಂತ ಶೇ49 ಕಡಿಮೆಯಾಗಿದೆ. ಇನ್ನೊಂದು ಗಣಿ ಕಂಪೆನಿ ರಿನ್ ಟಿಂಟೋ 2009ರಲ್ಲಿ 14.2 ಮಿಲಿಯ ಕ್ಯಾರೆಟ್ ಗಳಷ್ಟು ವಜ್ರವನ್ನು ಉತ್ಪಾದಿಸಿದ್ದು ಇದು ಹಿಂದಿನ ವರ್ಷದ ಉತ್ಪಾದನೆಗಿಂತ ಶೇ33 ಕಡಿಮೆಯಾಗಿದೆ.
ಗಣಿಗಳು ಬಂದ್ :ಈ ಎರಡೂ ಕಂಪೆನಿಗಳು ವಿಶ್ವದ ಶೇ.95ರಷ್ಟು ವಜ್ರದ ಪಾಲನ್ನು ಹೊಂದಿವೆ. ಅಲ್ಲದೆ ಆಫ್ರಿಕಾದ ದಾಮ್ಟ್ ಶಾ ವಜ್ರದ ಗಣಿಯನ್ನು 2009 ರ ಇಡೀ ವರ್ಷ ಮುಚ್ಚಲಾಗಿದ್ದರೆ, ನಮಕ್ವಲಂಡ್ ಗಣಿಯನ್ನು ಮುಂದಿನ ಮೂರು ವರ್ಷಗಳ ವರೆಗೆ ಮುಚ್ಚಲಾಗಿದೆ.
ಹಣಕಾಸಿ ಕೊರತೆಯಿಂದ ಹಾಗು ಬೆಲೆ ಕುಸಿತದಿಂದ ವಜ್ರದ ಗಣಿಗಳು ಮುಚ್ಚಲ್ಪಟ್ಟಿದ್ದರೆ, ಹೊಸ ಗಣಿಗಳು ಕಾರ್ಯಾರಂಭ ಮಾಡಲು ಕನಿಷ್ಠ 7 ರಿಂದ 8 ವರ್ಷ ಬೇಕಾಗುತ್ತದೆ. ವಜ್ರದ ಗ್ರಾಹಕ ದೇಶಗಳಾದ ಭಾರತ ಹಾಗೂ ಚೀನಾ ವಜ್ರದ ಗಣಿಗಳ ಮೇಲೆ ಹೂಡಿಕೆ ಮಾಡಲು ಆಸಕ್ತಿ ತೋರಿವೆ.
ವಜ್ರದ ಬೆಲೆಯಲ್ಲಿ ಪಾರದರ್ಶಕತೆ ಇದ್ದರೆ ಅದು ಜನರನ್ನು ಆಕರ್ಷಿಸುತ್ತದೆ ಹಾಗೂ ಜನರು ಇದನ್ನು ಹೂಡಿಕೆಯ ಉತ್ತಮ ಅವಕಾಶ ಎಂದು ಪರಿಗಣಿಸುತ್ತಾರೆ ಎಂದು ಮುಂಬೈನ ವಜ್ರದ ವ್ಯಾಪಾರಿಯೊಬ್ಬರು ಹೇಳುತ್ತಾರೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications