ಹೊಳಪಿನ ವಜ್ರ ಗ್ರಾಹಕರ ಕೈ ಕಚ್ಚಲಿದೆ

ಈ ದರ ಇನ್ನಷ್ಟು ಏರಲಿರುವುದಾಗಿ ಪ್ರಮುಖ ವಜ್ರಾಭರಣ ತಯಾರಿಕೆ ಮತ್ತು ರಫ್ತು ಕಂಪೆನಿ ಗೀತಾಂಜಲಿ ಜೆಮ್ಸ್ ನ ಅದ್ಯಕ್ಷ ಮೇಹುಲ್ ಚೋಸ್ಕಿ ಹೇಳುತ್ತಾರೆ. ಉದ್ಯಮದ ಪತ್ರಿಕೆಯಾದ ರಪಾಪೋರ್ಟ್ ಕೂಡ ಬೇಡಿಕೆಯನ್ನು ಪೂರೈಸಲು ಜಾಗತಿಕ ವಜ್ರದ ಗಣಿ ಕಂಪೆನಿಗಳಿಗೆ ಸಾದ್ಯವಾಗುತ್ತಿಲ್ಲ ಎಂದು ತನ್ನ ವರದಿಯಲ್ಲಿ ಹೇಳಿದೆ.
ಭಾರತ ವಿಶ್ವದಲ್ಲೇ ಅತೀ ದೊಡ್ಡ ವಜ್ರಗಳನ್ನು ಸಂಸ್ಕರಿಸುವ ಕೇಂದ್ರವಾಗಿದ್ದು 2009ರಲ್ಲಿ 32,500 ಕೋಟಿ ರೂಪಾಯಿ ಮೌಲ್ಯದ ಕಚ್ಚಾ ವಜ್ರವನ್ನು ಆಮದು ಮಾಡಿಕೊಂಡಿದ್ದು ಹಿಂದಿನ ವರ್ಷಗಳಲ್ಲಿ ಈ ಮೊತ್ತ 45 ರಿಂದ 55 ಸಾವಿರ ಕೋಟಿ ರೂಪಾಯಿಗಳಾಗಿತ್ತು.
ಪ್ರಮುಖ ವಜ್ರದ ಗಣಿ ಕಂಪೆನಿ ಡೆ ಬೀರ್ಸ್ ನ ವಜ್ರದ ಉತ್ಪಾದನೆ 24.6 ಮಿಲಿಯ ಕಾರೆಟ್ ಗಳೆಂದು ಅಂದಾಜಿಸಲಾಗಿದ್ದು ಇದು 2008 ಕ್ಕಿಂತ ಶೇ49 ಕಡಿಮೆಯಾಗಿದೆ. ಇನ್ನೊಂದು ಗಣಿ ಕಂಪೆನಿ ರಿನ್ ಟಿಂಟೋ 2009ರಲ್ಲಿ 14.2 ಮಿಲಿಯ ಕ್ಯಾರೆಟ್ ಗಳಷ್ಟು ವಜ್ರವನ್ನು ಉತ್ಪಾದಿಸಿದ್ದು ಇದು ಹಿಂದಿನ ವರ್ಷದ ಉತ್ಪಾದನೆಗಿಂತ ಶೇ33 ಕಡಿಮೆಯಾಗಿದೆ.
ಗಣಿಗಳು ಬಂದ್ :ಈ ಎರಡೂ ಕಂಪೆನಿಗಳು ವಿಶ್ವದ ಶೇ.95ರಷ್ಟು ವಜ್ರದ ಪಾಲನ್ನು ಹೊಂದಿವೆ. ಅಲ್ಲದೆ ಆಫ್ರಿಕಾದ ದಾಮ್ಟ್ ಶಾ ವಜ್ರದ ಗಣಿಯನ್ನು 2009 ರ ಇಡೀ ವರ್ಷ ಮುಚ್ಚಲಾಗಿದ್ದರೆ, ನಮಕ್ವಲಂಡ್ ಗಣಿಯನ್ನು ಮುಂದಿನ ಮೂರು ವರ್ಷಗಳ ವರೆಗೆ ಮುಚ್ಚಲಾಗಿದೆ.
ಹಣಕಾಸಿ ಕೊರತೆಯಿಂದ ಹಾಗು ಬೆಲೆ ಕುಸಿತದಿಂದ ವಜ್ರದ ಗಣಿಗಳು ಮುಚ್ಚಲ್ಪಟ್ಟಿದ್ದರೆ, ಹೊಸ ಗಣಿಗಳು ಕಾರ್ಯಾರಂಭ ಮಾಡಲು ಕನಿಷ್ಠ 7 ರಿಂದ 8 ವರ್ಷ ಬೇಕಾಗುತ್ತದೆ. ವಜ್ರದ ಗ್ರಾಹಕ ದೇಶಗಳಾದ ಭಾರತ ಹಾಗೂ ಚೀನಾ ವಜ್ರದ ಗಣಿಗಳ ಮೇಲೆ ಹೂಡಿಕೆ ಮಾಡಲು ಆಸಕ್ತಿ ತೋರಿವೆ.
ವಜ್ರದ ಬೆಲೆಯಲ್ಲಿ ಪಾರದರ್ಶಕತೆ ಇದ್ದರೆ ಅದು ಜನರನ್ನು ಆಕರ್ಷಿಸುತ್ತದೆ ಹಾಗೂ ಜನರು ಇದನ್ನು ಹೂಡಿಕೆಯ ಉತ್ತಮ ಅವಕಾಶ ಎಂದು ಪರಿಗಣಿಸುತ್ತಾರೆ ಎಂದು ಮುಂಬೈನ ವಜ್ರದ ವ್ಯಾಪಾರಿಯೊಬ್ಬರು ಹೇಳುತ್ತಾರೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications