ಧೈರ್ಯವಿದ್ದರೆ ಜನಾದೇಶ ಪಡೆಯಿರಿ : ದೇವೇಗೌಡ

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮತನಾಡಿದ ಅವರು, ಯುಪಿಎ ಸರಕಾರದ ವಿರುದ್ಧ ಹೋರಾಟ ನಡೆಸುತ್ತಿರುವ ಬಿಜೆಪಿ ವರಿಷ್ಠರಿಗೆ ತಮ್ಮ ಪಕ್ಷವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರಬೇಕು ಎನ್ನುವ ಮನಸ್ಸಿದ್ದರೆ ತಕ್ಷಣವೇ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬುದ್ಧಿ ಹೇಳಿ ಅಕ್ರಮ ಗಣಿಗಾರಿಕೆಯನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದರು.
ಜನರ ಬಳಿ ಹೋಗುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಜನರ ಬಳಿ ಹೋಗಲು ಯಾರ ಅನುಮತಿ ಬೇಕಾಗಿದೆ. ಆತ್ಮವಿಶ್ವಾಸವಿದ್ದರೆ ವಿಧಾನಸಭೆ ವಿಸರ್ಜಿಸಿ ಜನಾದೇಶ ಪಡೆಯಿರಿ ಎಂದು ದೇವೇಗೌಡ ಸವಾಲು ಹಾಕಿದರು. ಸಾವಿರಾರು ಕೋಟಿ ರುಪಾಯಿಗಳ ಸಂಪತ್ತು ಲೂಟಿಯಾಗುತ್ತಿದ್ದರೆ ಸುಮ್ಮನೇ ಕೂರಲು ಸಾಧ್ಯವೇ ಎಂದು ಪ್ರತಿಪಕ್ಷಗಳ ಹೋರಾಟವನ್ನು ದೇವೇಗೌಡ ಬೆಂಬಲಿಸಿದರು.












Click it and Unblock the Notifications